ಆಟ ಮಾಟ

Author : ಕೆ.ಎಸ್. ಶ್ರೀನಿವಾಸಮೂರ್ತಿ

Pages 88

₹ 100.00




Year of Publication: 2002
Published by: ಅಭಿನವ ಪ್ರಕಾಶನ
Address: ಮುಖ್ಯರಸ್ತೆ, ಮಾರೇನಹಳ್ಳಿ, 17/18-2, 1ನೇ ವಿಜಯನಗರ, ಬೆಂಗಳೂರು -560040
Phone: 9448804905

Synopsys

ಮೂಲ ಕೃತಿಯ ಲೇಖಕರಾದ ಪ್ರೊ. ಕೆ.ಜಿ ಸುಬ್ರಹ್ಮಣ್ಯನ್ ಅವರು ರಾಷ್ಟ್ರ, ಅಂತರಾಷ್ಟ್ರೀಯ ಖ್ಯಾತಿ ಪಡೆದಿರುವ ಕಲಾವಿದರು.

ಕಲಾ ಶಿಕ್ಷಕರಾಗಿ, ಕಲಾ ಚಿಂತಕರಾಗಿರುವ ಇವರ ಕಲಾಕೃತಿಗಳು ವಿಶ್ವವಿಖ್ಯಾತ ಕಲಾಪ್ರದರ್ಶನಗಳಲ್ಲಿ ಪ್ರಸಿದ್ದಿ ಪಡೆದಿದೆ.  ಇವರ ಅನುಭವ ಜಗತ್ತನ್ನು ಮೂರು ದಶಕಗಳ ಕಲಾ ಶಿಕ್ಷಣ, ಕಲೆ ಕುಶಲಕಲೆಗಳೆರಡಕ್ಕೂ ಸಂಬಂಧಿಸಿದ ಹಲವಾರು ವಿಚಾರಗಳನ್ನು ಈ ಕೃತಿ ಒಳಗೊಂಡಿದೆ.

ಅನುವಾದಕರಾದ ಕೆ.ಎಸ್. ಶ್ರೀನಿವಾಸಮೂರ್ತಿ ಅವರು ಮೂಲ ಕೃತಿಯನ್ನು ಕನ್ನಡೀಕರಿಸಿದ್ದಾರೆ.

ಓದುಗರನ್ನು ನಗಿಸುತ್ತಲೇ  ಕಾವ್ಯಮಯ ಶೈಲಿ ಮತ್ತು ಆಳವಾದ ಗ್ರಹಿಕೆಗಳ ಮೂಲಕ ಓದಿಸಿಕೊಂಡು ಹೋಗುವ ಕೃತಿಯಾಗಿದೆ.  ಕಲೆಯೆಂದರೇನು? ಸೃಜನಶೀಲತೆ ಎಂದರೇನು? ಎಲ್ಲರೂ ಕಲಾವಿದರಾಗಬಹುದೆ? ಕಲಾಸೃಷ್ಟಿಯಿಂದ ಬುದ್ದಿ ಬೆಳೆಯುತ್ತದೆಯೇ? ಎಲ್ಲ ಕೈ ಕೆಲಸಗಳೇಕೆ ಕಲೆಗಳಾಗಬಾರದು ? ಕಲೆ ಮತ್ತು ಸಮಾಜಗಳ ನಡುವೆ ಯಾವ ರೀತಿಯ ಸಂಬಂಧ ಸಾಧ್ಯ? ಎನ್ನುವಂತಹ ಅನೇಕ ಪ್ರಶ್ನೆಗಳೊಂದಿಗೆ ಸೂಕ್ಷ್ಮವಾಗಿ ಗ್ರಹಿಸುವಂತೆ ಈ ಕೃತಿ ಅರ್ಥೈಸುತ್ತದೆ.

About the Author

ಕೆ.ಎಸ್. ಶ್ರೀನಿವಾಸಮೂರ್ತಿ

ಕೆ. ಎಸ್. ಶ್ರೀನಿವಾಸ ಮೂರ್ತಿ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಬೆಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಅವರ ಕೆಲವು ಕವನಗಳು 'ಶೂದ್ರ', 'ಸಂಕ್ರಮಣ' ಮುಂತಾದ ಸಾಹಿತ್ಯಕ ಪತ್ರಿಕೆಗಳಲ್ಲಿ ಮತ್ತು “ಕ್ರಿಸ್ತಾಂಜಲಿ', 'ಅಂಕಣ ಕಾವ್ಯಾಂಕ', 'ಯುವಭಾರತಿ' 1973 ಮತ್ತು 1975, ಬೆಂಗಳೂರು ವಿಶ್ವವಿದ್ಯಾಲಯ) ಮುಂತಾದ ಕವನ ಸಂಗ್ರಹಗಳಲ್ಲಿ ಪ್ರಕಟವಾಗಿವೆ. ಕನ್ನಡದ ಕಲಾಸಾಹಿತ್ಯದ ದೃಷ್ಟಿಯಿಂದ ಅವರ ಕೆಲವು ಲೇಖನಗಳು ವಿಶೇಷವಾದ ಭರವಸೆಯನ್ನು ಹುಟ್ಟಿಸಿವೆ. ಶಾಬ್ಲಿಕ ಮಾಧ್ಯಮದಲ್ಲಿ ದೃಶ್ಯ ಮಾಧ್ಯಮ' (ಅಂಕಣ') 'ಪುಷ್ಪಮಾಲ ಅವರ ಕಲೆ' (ಶೂದ್ರ), (ರುಮಾಲೆ ಅವರ ಪ್ರಕೃತಿ ಚಿತ್ರಗಳು' (ಅಂಕಣ) ಮುಂತಾದ ಕೆಲವು ಲೇಖನಗಳ ಜೊತೆಗೆ ತರುಣ ...

READ MORE

Related Books