Ask The Editor

Author : ವಿಶ್ವೇಶ್ವರ ಭಟ್

Pages 168

₹ 225.00




Year of Publication: 2022
Published by: ವಿಶ್ವವಾಣಿ ಪುಸ್ತಕ
Address: ನಂ-1867, ನಿಸರ್ಗ ಸೆರೆನಿಟಿ ಕಾಂಪ್ಲೆಕ್ಸ್‌ ರಸ್ತೆ, ಬಿಇಎಂಎಲ್‌ ಬಡಾವಣ, 5ನೇ ಹಂತ, ರಾಜರಾಜೇಶ್ವರಿನಗರ ಬೆಂಗಳೂರು-560098
Phone: 8431007267

Synopsys

ಆಸ್ಕ್ ದಿ ಎಡಿಟರ್ ವಿಶ್ವೇಶ್ವರ ಭಟ್‌ ಅವರ ಸತಾಯಿಸುವ ಪ್ರಶ್ನೆಗಳಿಗೆ ಸಂತೈಸು ಉತ್ತರವಾಗಿದೆ. ಅಬ್ಬಾ! ಓದುಗರು ಹೇಗೆಲ್ಲ ಪ್ರಶ್ನೆ ಕೇಳುತ್ತಾರೆ? ತಮ್ಮ ಹೋಟೆ ವೈಯುಕ್ತಿಕ ವಿಚಾರಗಳನ್ನೂ ಒಬ್ಬ ಪತ್ರಿಕೆಯ ಸಂಪಾದಕರ ಬಳ ಮುಚ್ಚು ಮರೆ ಇಲ್ಲದ ಹಂಚಿಕೊಳ್ಳುತ್ತಾ ಅದಕ್ಕೆ ಉತ್ತರ ನಿರೀಕ್ಷಿಸುತ್ತಾರೆ ಎಂದರೆ ವಿಶ್ವೇಶ್ವರ ಭಟ್ಟರಂತಹ ಓದುಗರು ಅದೆಂತಹ ಸ್ಥಾನ ಕೊಟ್ಟರಬಹುದು ಎಂದು ಅನ್ನಿಸುವುದಂತು ಸುಳ್ಳಲ್ಲ ಬಹು ಮುಖ್ಯವಾಗಿ ಓದುಗರು ಕೇಳುವ ಪ್ರಶ್ನೆಗಳಿಗೆ ತೋಚಿದ್ದನ್ನು ಉತ್ತರಿಸುವುದಷ್ಟೇ ನನ್ನ ಕೆಲಸ ಸಾಗುವ ಎಂಬ ಉದ್ದೇಶದಲ್ಲಿ ವಿಶ್ವೇಶ್ವರ ಭಟ್ಟರು ಬರೆದಿಲ್ಲ ಅರ್ಥಾತ್, ರವನ್ನು ನೀಡಿ ಕೇಳುವ ಪ್ರಶ್ನೆಗೆ ಬರಿಯ ಉತ್ತರವನ್ನು ಸುಮ್ಮನಾಗುವ ಪ್ರಯತ್ನವನ್ನು ಸಂಪಾದಕರು ಮಾಡಿಲ್ಲ. ಅವರ ಪ್ರತಿ ನೋಡಿದಿರಾ, ಇಲ್ಲಿ ವಿಶ್ವೇಶ್ವರ ಭಟ್ ಅವರು ಉತ್ತರಿಸುವ ಉತ್ತರಗಳಲ್ಲೂ ಒಬ್ಬ ಗೆಳೆಯ ಮತ್ತೊಬ್ಬ ಗೆಳೆಯನಿಗೆ ಕೊಡಬಹುದಾದ ನಿರಭ್ರ ಪ್ರೀತಿ ಇದೆ, ಭರವಸೆಯ ಮಾತುಗಳಿವೆ. ಸಂತ ವಿಷಯಗಳ ಬರವಿದೆ.

About the Author

ವಿಶ್ವೇಶ್ವರ ಭಟ್

ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ  ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್‌ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ,  “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...

READ MORE

Related Books