ದ.ರಾ. ಬೇಂದ್ರೆ ಸಮಗ್ರ ಕಾವ್ಯ ನಿಘಂಟು

Author : ಬಿ.ಬಿ. ರಾಜಪುರೋಹಿತ

Pages 216

₹ 140.00




Year of Publication: 2010
Published by: ಶ್ರೀಮಾತಾ ಪ್ರಕಾಶನ
Address: ಅಂಬಿಕಾತನಯದತ್ತ ವೇದಿಕೆ, ವಿಶ್ವಶ್ರಮ ಚೇತನ, ಗೋಕುಲ ರಸ್ತೆ, ಹುಬ್ಬಳ್ಳಿ-580030

Synopsys

ಬೇಂದ್ರೆಯವರ ಕವಿತೆಗಳಲ್ಲಿ ಪ್ರಸ್ತಾಪ ಆಗಿರುವ ಪದಗಳ ಅರ್ಥ ನೀಡುವ ವಿಶಿಷ್ಟ ಪದಕೋಶ. ಬೇಂದ್ರೆಯವರ ಸಮಗ್ರ ಕಾವ್ಯ ಔದುಂಬರಗಾಥೆಯ ಆರು ಸಂಪುಟಗಳಲ್ಲಿ ಪ್ರತಿ ಪದ್ಯದ ಕೊನೆಗೆ ವಾಮನ ಬೇಂದ್ರೆಯವರು ಕೊಟ್ಟ ಶಬ್ದಾರ್ಥಗಳನ್ನು ಈ ನಿಘಂಟು ಒಳಗೊಂಡಿದೆ. ಇದು ಕೇವಲ ಶಬ್ದಾರ್ಥ ಕೋಶ ಮಾತ್ರವಲ್ಲ. ಬೇಂದ್ರೆ ಕಾವ್ಯದಲ್ಲಿ ಬರುವ ವಿಶೇಷತೆಗಳನ್ನು, ವಿಶಿಷ್ಟ ಉಲ್ಲೇಖಗಳನ್ನು ಅವುಗಳ ಮೂಲ ಸಂದರ್ಭಗಳೊಡನೆ ವಿವರಿಸಲಾಗಿದೆ.

About the Author

ಬಿ.ಬಿ. ರಾಜಪುರೋಹಿತ
(20 May 1935 - 24 June 2020)

ಭಾಷಾ ವಿಜ್ಞಾನಿ ಬಿ.ಬಿ. ರಾಜಪುರೋಹಿತ  ಅವರು  ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳದವರು. 1935ರ ಮೇ 20ರಂದು ಜನಿಸಿದರು.  ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪಿಎಚ್.ಡಿ. ಪಡೆದಿರುವ ಅವರು ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು. ಕನ್ನಡ ವ್ಯಾಕರಣ, ಛಂದಸ್ಸು ಮತ್ತು ಅಲಂಕಾರ; ವಚನ ವ್ಯಾಕರಣ (ವ್ಯಾಕರಣ), ಬೇಂದ್ರೆ ಕಾವ್ಯ ಭಾಷೆ; ಕನ್ನಡವೆಲ್ಲ ಒಂದೇ, ಭಾಷೆ ಮತ್ತು ಅರ್ಥಗಳ ಗುಟ್ಟು; ಧ್ವನಿ ವಿಜ್ಞಾನ; ವ್ಯಾ-ಸಾ-ನು-ಭಾವ; ಧ್ವನಿಯ ಶ್ರಾವಣ ಮತ್ತು ಚಾಕ್ಷುಷ ರೂಪ; ವಚನ ಸಾಹಿತ್ಯದ ಭಾಷಾ ಶೈಲಿ (ಭಾಷಾ ವಿಜ್ಞಾನ). ಏಳು ಬೀಳಿನ ಕಡಲು; ಗಂಗಾವತರಣ; ಬೇಂದ್ರೆ ಕಾವ್ಯ ನಿಘಂಟು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. A ...

READ MORE

Related Books