ಕನ್ನಡ ಜಾನಪದ ನಿಘಂಟು

Author : ಕೆ. ಆರ್‌. ಸಂಧ್ಯಾರೆಡ್ಡಿ

Pages 324

₹ 450.00




Year of Publication: 2014
Published by: ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
Address: ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ- 581197, ಶಿಗ್ಗಾವಿ ತಾಲೂಕು, ಹಾವೇರಿ ಜಿಲ್ಲೆ
Phone: 0836 225 5180

Synopsys

ಕನ್ನಡ ಜಾನಪದ ನಿಘಂಟು-  ವಿಸ್ತೃತ ನೆಲೆಯಲ್ಲಿ ಕನ್ನಡ ಜಾನಪದ ನಿಘಂಟನ್ನು ರೂಪಿಸುವ ಉದ್ದೇಶದಿಂದ ರಚನೆಯಾದ ಕೃತಿ ‘ಕನ್ನಡ ಜಾನಪದ ನಿಘಂಟು’. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ, ‘ಕನ್ನಡ ಜಾನಪದ ನಿಘಂಟು ಸಂಪುಟಗಳ ಪ್ರಕಟಣಾ ಕಾರ್ಯದ ಭಾಗವಾಗಿ, ಡಾ.ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದ ನಿಘಂಟನ್ನು ರಚಿಸಿದ್ದಾರೆ. ಭಾಷೆಯಲ್ಲಿನ ಧ್ವನಿವ್ಯತ್ಯಾಸ, ಅಕ್ಷರ ಪಲ್ಲಟ, ಪದಪ್ರಯೋಗಗಳ ಸ್ವರೂಪ, ಭಿನ್ನತೆ, ಉಪಯೋಗಿಸುವ ಪದಗಳಿಗೆ ಇರುವ ಪ್ರಾದೇಶಿಕ ಅರ್ಥವಿಸ್ತಾರ ಇತ್ಯಾದಿ ಅಂಶಗಳ ಕುರಿತು ಮಾಹಿತಿ ನೀಡುವ ಪ್ರಾಮಾಣಿಕ ಪ್ರಯತ್ನದಲ್ಲಿ ಸಂಧ್ಯಾರೆಡ್ಡಿಯವರು ಯಶಸ್ವಿಯಾಗಿದ್ದಾರೆ. ಸ್ವರಾಕ್ಷರ, ವರ್ಗೀಯ ವ್ಯಂಜನಗಳು ಹಾಗೂ ಅವರ್ಗೀಯ ವ್ಯಂಜನಗಳು ಎಂಬ ವಿಂಗಡಣೆಗೆ ಅನುಗುಣವಾಗಿ ಈಗಾಗಲೇ ಮೂರು ಸಂಪುಟಗಳು ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ಪ್ರಕಟವಾಗಿವೆ. ಇನ್ನೂ ವಿಸ್ತೃತ ನೆಲೆಯಲ್ಲಿ ಈ ಜಾನಪದ ನಿಘಂಟನ್ನು ರಚಿಸುವ ಉದ್ದೇಶದಿಂದ ವಿಶ್ವವಿದ್ಯಾಲಯವು ಡಾ. ಸಂಧ್ಯಾರೆಡ್ಡಿ ಅವರ ನೇತೃತ್ವದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ನೆಲಮೂಲ ಜ್ಞಾನ ಪರಂಪರೆಗಳ ಹಾಗೂ ಭಾಷಾಶಾಸ್ತ್ರೀಯ ನೆಲೆಯ ಅಧ್ಯಯನಗಳಿಗೆ ಪ್ರಸ್ತುತ ನಿಘಂಟು ಉತ್ತಮ ಆಕರ. 

About the Author

ಕೆ. ಆರ್‌. ಸಂಧ್ಯಾರೆಡ್ಡಿ

ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿರುವ ಕನ್ನಡಿಗರ ನೆಚ್ಚಿನ ಲೇಖಕಿ ಕೆ.ಆರ್.ಸಂಧ್ಯಾರೆಡ್ಡಿ ಅವರು ಜನಿಸಿದ್ದು 1953 ಜೂನ್  22ರಂದು ಚಿತ್ರದುರ್ಗದಲ್ಲಿ. ಎನ್‌ಜಿಇಎಫ್‌ ನಲ್ಲಿ ಉಪ ನಿರ್ವಹಕರಾಗಿ ಸೇವೆ ಸಲ್ಲಿಸಿರುವ ಅವರು ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು.  ಇವರ ಅನುವಾದಿತ ಕೃತಿಗಳೆಂದರೆ - ಬರ್ಕ್ ವೈಟ್‌ ಕಂಡ ಭಾರತ, Half way to Freedom, ಆಸನ ಪ್ರಾಣಾಯಾಮ ಮುದ್ರಾಬಂಧ, ನೆಹರೂವಾದದ ಹುಟ್ಟು ಮತ್ತು ಬೆಳವಣಿಗೆ, ಉಗ್ರಾಣ ನಿರ್ವಹಣೆ, ಸೃಜನಶೀಲ ಪ್ರತಿಭೆ, ದೇಹದ ರಚನಾ ವ್ಯವಸ್ಥೆಗಳು, ಹೊಸ ಬಗೆಯ ಶಕ್ತಿ ವ್ಯವಸ್ಥೆಗಳು.  ಸಂಪಾದಿತ ಕೃತಿಗಳು : ಗ್ರಾಮೀಣ ಪಶುಸಾಕಣೆ, ಗ್ರಾಮೀಣ ...

READ MORE

Related Books