ಚಿಕ್ಕದೇವೇಂದ್ರ ವಂಶಾವಳಿ

Author : ಎಸ್.ಜಿ. ನರಸಿಂಹಾಚಾರ್

Pages 47




Year of Publication: 1901
Published by: ಎಸ್.ಜಿ. ನರಸಿಂಹಾಚಾರ್
Address: ಓರಿಯೆಂಟಲ್ ಲೈಬ್ರರಿ, ಮೈಸೂರು

Synopsys

ಕನ್ನಡ ನಾಡು -ನುಡಿ ಹಿತ ಚಿಂತಕರಾದ ಎಸ್.ಜಿ. ನರಸಿಂಹಾಚಾರ್ ಹಾಗೂ ಎಂ.ಎ. ರಾಮಾನುಜಯ್ಯಂಗಾರ್ಯ ಅವರು ಸಂಯುಕ್ತವಾಗಿ ಚಿಕ್ಕದೇವೇಂದ್ರ ವಂಶಾವಳಿ ಕೃತಿ ರಚಿಸಿದ್ದು, ಈ ಗ್ರಂಥವು ಚಂದ್ರ ರೂಪದಲ್ಲಿದೆ. ಮೂಲ ಕೃತಿಕಾರನ ಹೆಸರು ತಿಳಿದು ಬಂದಿಲ್ಲ. ಕವಿಯು ಚಿಕ್ಕಮಹಾದೇವನ ಕಾಲದಲ್ಲಿ ಶ್ರೀರಂಗಪಟ್ಟಣದಲ್ಲಿ ಇದ್ದನೆಂದೂ ಹೇಳಲಾಗುತ್ತಿದೆ. ಕೃತಿಯಲ್ಲಿ 137 ಪದ್ಯಗಳಿವೆ. ಮೈಸೂರು ಮಹಾರಾಜರ ವಂಶಾವಳಿಯು ಹಾಗೂ ಚರಿತ್ರೆಯು ಸಂಗ್ರಹಿತವಾಗಿದೆ. ಸಣ್ಣ ಗ್ರಂಥವಾಗಿದ್ದರೂ ವಿಶೇಷ ವರ್ಣನಾ ವೈಖರಿಗಳಿಂದ ಕೂಡಿದೆ. 

About the Author

ಎಸ್.ಜಿ. ನರಸಿಂಹಾಚಾರ್
(11 September 1862 - 22 December 1907)

ಶ್ರೀರಂಗಪಟ್ಟಣದಲ್ಲಿ ಎಸ್.ಜಿ. ನರಸಿಂಹಾಚಾರ್ಯರು 11-09-1862 ರಂದು ಜನಿಸಿದರು. ತಂದೆ ಪೂಜಾಳಂ ಮನೆತನದ ಅಳಸಿಂಗಾಚಾರ್ಯರು. ತಾಯಿ ಸೀತಮ್ಮ.ಶ್ರೀರಂಗಪಟ್ಟಣದಲ್ಲಿ ಪ್ರಾಥಮಿಕ ಶಿಕ್ಷಣದ ನಂತರ ಮೈಸೂರಿನಲ್ಲಿ ಬಿ.ಎ. ಪದವಿ ಹಾಗೂ 1892ರಲ್ಲಿ ಎಂ.ಎ. ಪದವೀಧರರು. ವಿದ್ಯಾ ಇಲಾಖೆಯಲ್ಲಿ ಸೇರಿ ಶ್ರೀರಂಗಪಟ್ಠಣದ ಶಾಲೆಯಲ್ಲೇ ಶಿಕ್ಷಕರು. ನಂತರ, ಮೈಸೂರು ಪ್ರಾಚ್ಯ ಕೋಶಾಗಾರದಲ್ಲಿ ಪಂಡಿತರಾಗಿ ಸೇರಿದರು.  ರಾಮಾನುಜ ಅಯ್ಯಂಗಾರ‍್ಯರೊಡನೆ ‘ಕರ್ನಾಟಕ ಕಾವ್ಯಮಂಜರಿ’ ಮಾಸಪತ್ರಿಕೆ ಆರಂಭಿಸಿದರು.  ನಂತರ, 1899ರಲ್ಲಿ ‘ಕರ್ನಾಟಕ ಕಾವ್ಯ ಕಲಾನಿ’ ಪತ್ರಿಕೆ ಪ್ರಾರಂಭಿಸಿದರು. ಕನ್ನಡ ಕವಿಗಳ ಚಂಪೂ, ಗದ್ಯ, ಪದ್ಯ, ನಾಟಕ, ಕೀರ್ತನೆ, ಶತಕ, ನಿಘಂಟುಗಳನ್ನು ಪರಿಷ್ಕರಿಸಿ ಪ್ರಕಟಿಸಿದರು. ಕರ್ನಾಟಕ ಕಾವ್ಯಮಂಜರಿಯಲ್ಲಿ ಗದಾಯುದ್ಧ, ಮಲ್ಲಿನಾಥ ಪುರಾಣ, ಲೀಲಾವತಿ ಪ್ರಬಂಧ, ಕರ್ನಾಟಕ ಪಂಚತಂತ್ರ, ಮಿತ್ರವಿಂದಾ ...

READ MORE

Related Books