ನಾಗಚಂದ್ರ ಕವಿಯ ಪಂಪ ರಾಮಾಯಣ

Author : ಪಿ. ವಿ. ನಾರಾಯಣ

Pages 232

₹ 200.00




Year of Publication: 2013
Published by: ಕಾಮಧೇನು ಪುಸ್ತಕ ಭವನ
Address: ನಂ-5/1, ನಾಗಪ್ಪ ಸ್ಟ್ರೀಟ್, ಶೇಷಾದ್ರಿಪುರ, ಬೆಂಗಳೂರು- 560020
Phone: 9449446328

Synopsys

ಅಭಿನವ ಪಂಪ ಎಂಬ ಬಿರುದನ್ನು ಪಡೆದ ನಾಗಚಂದ್ರ ಕವಿಯ ರಾಮಚಂದ್ರ ಚರಿತ ಪುರಾಣ ಕಾವ್ಯ ಹಲವಾರು ವೈಶಿಷ್ಟ್ಯಗಳಿಗೆ ಕಾರಣವಾಗಿದೆ. ವಾಲ್ಮೀಕಿ ರಾಮಾಯಣವನ್ನು ಜೈನ ಧರ್ಮದಲ್ಲಿ ಬರುವ ಶಲಾಕ ಪುರುಷರಿಗೆ ಹೊಲಿಸಿ ಬರೆದಿರುವ ಈ ಕೃತಿಯನ್ನು ಜೈನ ರಾಮಾಯಣ ಎಂದೂ ಕರೆಯಲಾಗುತ್ತೆ. ಅಂತಹ ಮಹಾನ್ ಕೃತಿಯ ಕುರಿತಾಗಿ ಬರೆದಿರುವ ಕೃತಿ ‘ನಾಗಚಂದ್ರ ಕವಿಯ ಪಂಪ ರಾಮಾಯಣ’ ಈ ಕೃತಿಯನ್ನು ಹಿರಿಯ ಲೇಖಕ ಪಿ.ವಿ. ನಾರಾಯಣ ಅವರು ರಚಿಸಿದ್ದಾರೆ.

About the Author

ಪಿ. ವಿ. ನಾರಾಯಣ
(18 December 1942)

ಡಾ. ಪಿ. ವಿ. ನಾರಾಯಣ, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಪ್ರವಾಚಕರಾಗಿದ್ದರು. ತಂದೆ ಪಿ.ವೆಂಕಪ್ಪಯ್ಯ, ತಾಯಿ ನರಸಮ್ಮ. ಬೆಂಗಳೂರಿನಲ್ಲಿ 1942ರ ಡಿ.18 ರಂದು ಹುಟ್ಟಿದರು.  ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್), “ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ” ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ.. ವಿಮರ್ಶೆ/ಸಂಶೋಧನೆ-ಬಳ್ಳಿಗಾವೆ, ಕಾಯತತ್ತ್ವ, ಚಂಪೂಕವಿಗಳು, ವಚನ ಚಳವಳಿ, ವಚನ ವ್ಯಾಸಂಗ ಮೊದಲಾದ 16ಕೃತಿಗಳು. ಸಂಪಾದಿತ-ಬಸವ ಪುರಾಣ ಸಂಗ್ರಹ, ಪದ್ಮಿನೀ ಪರಿಣಯ ಮೊದಲಾದ 5 ಕೃತಿಗಳು. ಅನುವಾದ-ಮದುವೆ ಮತ್ತು ನೀತಿ, ಹನ್ನೆರಡನೇ ರಾತ್ರಿ, ಅಶ್ವತ್ಥಾಮನ್, ಬುವಿಯ ಬಸಿರಿಗೆ ಪಯಣ, ಪಂಪ ರಾಮಾಯಣ  ಮುಂತಾದ 12 ಕೃತಿಗಳು. ಕಾದಂಬರಿಗಳು-ಸಾಮಾನ್ಯ, ...

READ MORE

Related Books