ನಯಸೇನನ ಸರಳ ಧರ್ಮಾಮೃತ ಸಂಗ್ರಹ

Author : ಎಸ್.ಎಸ್. ಅಂಗಡಿ

Pages 148

₹ 110.00




Year of Publication: 2019
Published by: ಸಪ್ನ ಬುಕ್ಸ್‌
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 08040114455

Synopsys

ನಯಸೇನನ ಸರಳ ಧರ್ಮಾಮೃತ ಸಂಗ್ರಹ ಕೃತಿಯು ಅರ್ಥಾನುಗತ ವಿಂಗಡಣೆ ಸಂಗ್ರಹದ ಪೂರ್ಣಪಾಠವಾಗಿದೆ. ಈ ಕೃತಿಯ ಬಗ್ಗೆ ಲೇಖಕರು ಬರೆಯುತ್ತಾ, ’ನಯಸೇನ, ಆಧುನಿಕ ಪೂರ್ವ ಕನ್ನಡ ಸಾಹಿತ್ಯದ ಅಪ್ಪಟ ದೇಸಿಕವಿ. ಅವನ ಧರ್ಮಾಮೃತ ಅಪ್ಪಟ ದೇಸಿಕಾವ್ಯ. ನಯಸೇನ ತನ್ನ ಕಾಲದ ಬದುಕಿನ ಸೂಕ್ಷ್ಮ ವಿವರಗಳನ್ನು ದೇಸಿ ಸೊಗಡಿನಲ್ಲಿ ಅರ್ಥಪೂರ್ಣವಾಗಿ ನಿರೂಪಿಸಿದ್ದಾನೆ.

ಜೈನ ಧರ್ಮಿಯನಾಗಿ ಸ್ವಧರ್ಮದಲ್ಲಿ ನಿಷ್ಠೆ, ಪರಧರ್ಮದಲ್ಲಿ ಕುತೂಹಲ ಬೆಳೆಸಿಕೊಂಡು ಸಾಮಾನ್ಯ ಜನರಿಗೂ ತಲುಪುವಂತಹ ರೀತಿಯಲ್ಲಿ ಸುಲಭ ಭಾಷಾ ಶೈಲಿಯಲ್ಲಿ ಧರ್ಮದ ವಿಚಾರಗಳನ್ನು ಹೇಳುವುದು ನಯಸೇನನ ವಿಶೇಷ ಸಾಧನೆ. ಅಚ್ಚಗನ್ನಡವನ್ನು ಪ್ರತಿಪಾದಿಸಿದವರಲ್ಲಿ ನಯಸೇನ ಮೊದಲಿಗ. ಹನ್ನೆರಡನೆಯ ಶತಮಾನದ ಜನಪದ ನಡೆ-ನುಡಿ ಆಡುಮಾತಿನ ಸಾಮಾಜಿಕ ಚಹರೆ ಇವು ”ಧರ್ಮಾಮೃತ’ಕ್ಕೆ ಸಾರ್ವಕಾಲೀನತೆಯನ್ನು ಗಳಿಸಿಕೊಟ್ಟಿವೆ. ಆ ಪಠ್ಯದ ಸಂಗ್ರಹವನ್ನು ಇಲ್ಲಿ ಸಂಪಾದಿಸಲಾಗಿದೆ’ ಎಂದಿದ್ದಾರೆ.

About the Author

ಎಸ್.ಎಸ್. ಅಂಗಡಿ
(10 June 1966)

ಪ್ರೊ. ಎಸ್.ಎಸ್. ಅಂಗಡಿ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು. ಪ್ರಾಚೀನ ಸಾಹಿತ್ಯ, ಹಸ್ತಪ್ರತಿ ಗ್ರಂಥ ಸಂಪಾದನೆ, ಭಾಷಾಶಾಸ್ತ್ರ ಬಗೆಗೆ ಅಪಾರ ಪಾಂಡಿತ್ಯ ಹೊಂದಿರುವ ಅವರು 'ಸರಳ ಶಬ್ದಮಣಿ ದರ್ಪಣ', 'ಕನ್ನಡ  ಹಸ್ತಪ್ರತಿ ಭಾಷಿಕ ವಿವೇಚನೆ', 'ಕರ್ನಾಟಕ ಗ್ರಂಥ ಸಂಪಾದನೆ', 'ಸರಳ ಕವಿರಾಜಮಾರ್ಗ' ಕೃತಿಗಳನ್ನು ಪ್ರಕಟಿಸಿದ್ದಾರೆ.  ಅವರು ಪ್ರಕಟಿಸಿದ ಸಂಶೋಧನಾ ಲೇಖನಗಳು ಹೀಗಿವೆ: ಗ್ರಂಥಸಂಪಾದನೆ : ಕೆ.ಜಿ.ಕುಂದಣಗಾರ, ಕೆ.ಜಿ.ಕುಂದಣಗಾರ ಅಧ್ಯಯನ ವಿಧಾನ, ಹರ್ಮನ್ ಮೋಗ್ಲಿಂಗ್ ಸಂಶೋಧನ ವೈಧಾನಿಕತೆ, ಗ್ರಂಥ ಸಂಪಾದನೆ: ಶಿ.ಚ.ನಂದಿಮಠ, ಗ್ರಂಥ ಸಂಪಾದನೆ: ಗೊರೆಬಾಳ್ ಹನುಮಂತರಾಯ, ಗ್ರಂಥ ಸಂಪಾದನೆ: ಎನ್.ಅನಂತರಂಗಾಚಾರ್, ಕರ್ನಾಟಕ ಕವಿಚರಿತೆ: ರಚನೆಯ ...

READ MORE

Related Books