ಪದ್ಯಸಾರ ಪ್ರಥಮ ಭಾಗ

Author : ಎಸ್.ಜಿ. ನರಸಿಂಹಾಚಾರ್

Pages 217




Year of Publication: 1924
Published by: ಸಾರ್ವಜನಿಕ ವಿದ್ಯಾ ಇಲಾಖೆ
Address: ಮೈಸೂರು

Synopsys

ಚಿಂತಕ ಎಸ್.ಜಿ. ನರಸಿಂಹಾಚಾರ್ ಅವರು ಬರೆದ ಕೃತಿ ಪದ್ಯಸಾರ-ಪ್ರಥಮ ಭಾಗ. ಕೃತಿಯಲ್ಲಿ ದ್ವಿಪದಿ (ಪಾರ್ವತಿಯ ಕೊರವಂಜಿ, ದಾಸರ ಪದಗಳು) ತ್ರಿಪದಿ (ಸರ್ವಜ್ಞನ ವಚನಗಳು), ಚೌಪದಿಗಳು (ದಾಸರ ಪದಗಳು), ಸಾಂಗತ್ಯ ( ರಾಮನಾಥನ ಚರಿತೆ), ರಹಳೆ (ಕುಮುದೇಂದು ರಾಮಾಯಣ), ಲಲಿತಾ (ದೀಕ್ಷಾಬೋಧೆ) , ಕುಸುಮ ಷಟ್ಪದಿ (ಮುಪ್ಪಿನ ಷಡಕ್ಷರಿಯ ವಚನಗಳು), ಭೋಗ ಷಟ್ಪದಿ (ಮುಪ್ಪಿನ ಷಡಕ್ಷರಿಯ ವಚನಗಳು), ಭಾಮಿನಿ ಷಟ್ಪದಿ (ರಾಮಾಭ್ಯುದಯ ಕಥಾಮಂಜರಿ, ಪ್ರಭುಲಿಂಗ ಲೀಲೆ, ತೊರವಿ ರಾಮಾಯಣ ಇತ್ಯಾದಿ), ಪರಿವರ್ಧಿನಿ ಷಟ್ಪದಿ (ಕುಮುದೇಂದು ರಾಮಾಯಣ), ವಾರ್ಧಕ ಷಟ್ಪದಿ (ಜೈಮಿನಿ ಭಾರತ, ಹರಿಶ್ಚಂದ್ರ ಕಾವ್ಯ, ಚೆನ್ನಬಸವ ಪುರಾಣ), ಕಂದ ವೃತ್ತಾದಿಗಳು (ಸುಭಾಷಿತ, ಸೋಮೇಶ್ವರ ಶತಕ ಇತ್ಯಾದಿ), ಸಾಂಗತ್ಯ (ಹದಿಬದಿಯ ಧರ್ಮ, ರಗಳೆ, ಲಲಿತ), ರಾಜಶೇಖರ ವಿಳಾಸ, ಕಬ್ಬಿಗರ ಕಾವ್ಯ ಹೀಗೆ ವಿವಿಧ ಅಧ್ಯಾಯಗಳಡಿ ಇಡೀ ಕನ್ನಡ ಸಾಹಿತ್ಯದ ಪದ್ಯಸಾರವನ್ನು ನೀಡಿರುವ ಕೃತಿ ಇದು.

About the Author

ಎಸ್.ಜಿ. ನರಸಿಂಹಾಚಾರ್
(11 September 1862 - 22 December 1907)

ಶ್ರೀರಂಗಪಟ್ಟಣದಲ್ಲಿ ಎಸ್.ಜಿ. ನರಸಿಂಹಾಚಾರ್ಯರು 11-09-1862 ರಂದು ಜನಿಸಿದರು. ತಂದೆ ಪೂಜಾಳಂ ಮನೆತನದ ಅಳಸಿಂಗಾಚಾರ್ಯರು. ತಾಯಿ ಸೀತಮ್ಮ.ಶ್ರೀರಂಗಪಟ್ಟಣದಲ್ಲಿ ಪ್ರಾಥಮಿಕ ಶಿಕ್ಷಣದ ನಂತರ ಮೈಸೂರಿನಲ್ಲಿ ಬಿ.ಎ. ಪದವಿ ಹಾಗೂ 1892ರಲ್ಲಿ ಎಂ.ಎ. ಪದವೀಧರರು. ವಿದ್ಯಾ ಇಲಾಖೆಯಲ್ಲಿ ಸೇರಿ ಶ್ರೀರಂಗಪಟ್ಠಣದ ಶಾಲೆಯಲ್ಲೇ ಶಿಕ್ಷಕರು. ನಂತರ, ಮೈಸೂರು ಪ್ರಾಚ್ಯ ಕೋಶಾಗಾರದಲ್ಲಿ ಪಂಡಿತರಾಗಿ ಸೇರಿದರು.  ರಾಮಾನುಜ ಅಯ್ಯಂಗಾರ‍್ಯರೊಡನೆ ‘ಕರ್ನಾಟಕ ಕಾವ್ಯಮಂಜರಿ’ ಮಾಸಪತ್ರಿಕೆ ಆರಂಭಿಸಿದರು.  ನಂತರ, 1899ರಲ್ಲಿ ‘ಕರ್ನಾಟಕ ಕಾವ್ಯ ಕಲಾನಿ’ ಪತ್ರಿಕೆ ಪ್ರಾರಂಭಿಸಿದರು. ಕನ್ನಡ ಕವಿಗಳ ಚಂಪೂ, ಗದ್ಯ, ಪದ್ಯ, ನಾಟಕ, ಕೀರ್ತನೆ, ಶತಕ, ನಿಘಂಟುಗಳನ್ನು ಪರಿಷ್ಕರಿಸಿ ಪ್ರಕಟಿಸಿದರು. ಕರ್ನಾಟಕ ಕಾವ್ಯಮಂಜರಿಯಲ್ಲಿ ಗದಾಯುದ್ಧ, ಮಲ್ಲಿನಾಥ ಪುರಾಣ, ಲೀಲಾವತಿ ಪ್ರಬಂಧ, ಕರ್ನಾಟಕ ಪಂಚತಂತ್ರ, ಮಿತ್ರವಿಂದಾ ...

READ MORE

Related Books