ಕವಿ ಕಾವ್ಯ ಪರಂಪರೆ ರನ್ನ

Author : ವಿ. ಸೀತಾರಾಮಯ್ಯ

Pages 187

₹ 100.00




Year of Publication: 2012
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಖ್ಯಾತ ಸಾಹಿತಿ ಡಾ. ವಿ. ಸೀತಾರಾಮಯ್ಯ ಅವರು ಕವಿ ರನ್ನನ ಕುರಿತು ರಚಿಸಿದ ಕೃತಿ-ಕವಿ ಕಾವ್ಯ ಪರಂಪರೆ ರನ್ನ. ಮಹಾಭಾರತದ ದುರ್ಯೋಧನನ ಪೌರುಷವನ್ನು ಪ್ರಶಂಸಿಸಿ ಬರೆದ ‘ಗದಾಯುದ್ಧ’ ಕಾವ್ಯದ ಮೂಲಕ ಕಾವ್ಯ ಪರಂಪರೆಗೆ ತನ್ನದೇ ಕೊಡುಗೆ ನೀಡಿರುವ ಕವಿ ರನ್ನ, ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಮಿನುಗುವ ಹೆಸರು. ಕವಿಯಾಗಿ ರನ್ನ, ಆತನ ಮೂಲ, ಕಾವ್ಯ, ಪ್ರಾಚೀನ ಪರಂಪರೆಯ ಸಾಹಿತ್ಯಕ್ಕೆ ಆತನ ಕೊಡುಗೆ ಇತ್ಯಾದಿ ಅಂಶಗಳನ್ನು ಚರ್ಚಿಸಿ, ಸಂಶೋಧನಾ ಸಾಮಗ್ರಿ ಪೂರೈಸುವ ಈ ಕೃತಿಯು ವಿದ್ಯಾರ್ಥಿ-ಬೋಧಕರಿಗೂ ಉತ್ತಮ ಆಕರ ಗ್ರಂಥವಾಗಿದೆ.

About the Author

ವಿ. ಸೀತಾರಾಮಯ್ಯ
(02 October 1899 - 04 September 1983)

ಕವಿ, ವಿದ್ವಾಂಸ, ವಿಮರ್ಶಕ,  ಕಲಾರಾಧಕರಾಗಿದ್ದ ವಿ. ಸೀತಾರಾಮಯ್ಯ ಕನ್ನಡ ನವೋದಯ ಸಾಹಿತ್ಯದ ಪ್ರಮುಖ ಲೇಖಕರರಲ್ಲಿ ಒಬ್ಬರು. ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯಲ್ಲಿ 1899ರ ಅಕ್ಟೋಬರ್ 2ರಂದು ಜನಿಸಿದರು. ತಂದೆ ವೆಂಕಟರಾಮಯ್ಯ ಮತ್ತು ತಾಯಿ ದೊಡ್ಡ ವೆಂಕಮ್ಮ. ಬೆಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ಬಿ. ಎ. (1920), ಎಂ. ಎ. (1922) ಪದವಿ ಪಡೆದರು. ಮುಂಬಯಿಗೆ ತೆರಳಿ ಎಲ್. ಎಲ್.ಬಿ. ಪದವಿ ಗಳಿಸಿ ಮೈಸೂರಿಗೆ ಹಿಂತಿರುಗಿದರು. ಶಾರದಾ ವಿಲಾಸ ಕಾಲೇಜಿನಲ್ಲಿ ಉಪಾಧ್ಯಾಯ (1923) ರಾದರು. ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲೇಜು, ಸೆಂಟ್ರಲ್ ಕಾಲೇಜು, ಮೈಸೂರು ಮಹಾರಾಜ ಕಾಲೇಜು, ಚಿಕ್ಕಮಗಳೂರಿನ ...

READ MORE

Related Books