ಹರಿಶ್ಚಂದ್ರ ಕಾವ್ಯ ಸಂಗ್ರಹ

Author : ಟಿ.ಎಸ್. ವೆಂಕಣ್ಣಯ್ಯ

Pages 202




Year of Publication: 1931
Published by: ಗವರ್ನಮೆಂಟ್ ಬ್ಯ್ರಾಂಚ್ ಪ್ರೆಸ್
Address: ಮೈಸೂರು

Synopsys

ಕನ್ನಡದ ಹಳೆಯ ಕಾವ್ಯ ಗ್ರಂಥಗಳನ್ನು ಪರಿಶೀಲಿಸಿ, ಸಂಗ್ರಹಿಸಿ, ಸಂಪಾದಿಸುವ ಮೈಸೂರು ವಿಶ್ವವಿದ್ಯಾಲಯ ಸಂಕಲ್ಪದ ಅನುಗುಣವಾಗಿ ತೀ.ನಂ. ಶ್ರೀಕಂಠಯ್ಯ ಪ್ರಧಾನ ಸಂಪಾದಕತ್ವದಡಿ ಪ್ರೊ. ಟಿ.ಎಸ್.ವೆಂಕಣ್ಣಯ್ಯ ಹಾಗೂ ಎ.ಆರ್. ಕೃಷ್ಣಶಾಸ್ತ್ರಿ ಅವರು ಸಂಪಾದಿಸಿದ ಕೃತಿಯೇ-ಹರಿಶ್ಚಂದ್ರ ಕಾವ್ಯ ಸಂಗ್ರಹ.’ ರಾಘವಾಂಕನು ಬರೆದ ಈ ಕೃತಿಯನ್ನು ಸಂಪಾದಿಸಲಾಗಿದೆ. ಸಿದ್ಧರಾಮ ಪುರಾಣ, ಸೋಮನಾಥ ಚರಿತೆ ಹೀಗೆ ಈ ಕವಿಯು ಬೇರೆ ಬೇರೆ ಕೃತಿಗಳನ್ನು ಬರೆದಿದ್ದು, ಈತನ ಹರಿಶ್ಚಂದ್ರ ಕಾವ್ಯ, ಕಾವ್ಯಾಂಶದಿಂದ ಮಹತ್ವದ್ದು ಎನಿಸಿದೆ. ರಾಘವಾಂಕನ ಜನನ, ಬಾಲ್ಯ ಸಮೇತ ಆತನ ಕೃತಿಗಳ ಸವಿವರವಾದ ಪೀಠಿಕೆಯೊಂದಿಗೆ ಕೃತಿಯನ್ನು ವಿಷಯ ಸಮೃದ್ಧವನ್ನಾಗಿಸಿದೆ.

About the Author

ಟಿ.ಎಸ್. ವೆಂಕಣ್ಣಯ್ಯ
(01 October 1885 - 28 February 1939)

ಲೇಖಕ, ಅನುವಾದಕ ಟಿ.ಎಸ್. ವೆಂಕಣ್ಣಯ್ಯನವರು (ಜನನ:01-10-1885) ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳೇಕೆರೆ ತಾಲ್ಲೂಕಿನ ತಳಕು ಗ್ರಾಮದಲ್ಲಿ. ಮೈಸೂರಿನಲ್ಲಿ ಕನ್ನಡ, ತೆಲುಗು ಸಾಹಿತ್ಯಾಧ್ಯಯನ ಮಾಡಿ, ಮದರಾಸು ವಿಶ್ವವಿದ್ಯಾಲಯದಿಂದ 1914ರಲ್ಲಿ ಎಂ.ಎ. ಪದವಿ ಪಡೆದರು. ಉದ್ಯೋಗಕ್ಕಾಗಿ ಸೇರಿದ್ದು ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿ. ಬೆಂಗಳೂರು ಸೇಂಟ್ ಜೋಸೆಫ್ ಕಾಲೇಜು, ದೊಡ್ಡಬಳ್ಳಾಪುರ ಮುಂತಾದೆಡೆ ಶಿಕ್ಷಕ ವೃತ್ತಿ. ಬಹುಭಾಷಾ ವಿಶಾರದರು ಅವರು ಕನ್ನಡ, ತೆಲುಗು, ತಮಿಳು, ಸಂಸ್ಕೃತ, ಬಂಗಾಳಿ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದಾರೆ. ’ಶ್ರೀ ರಾಮಕೃಷ್ಣ ಲೀಲಾ ಪ್ರಸಂಗದ ಭಾಗ, ರವೀಂದ್ರರ ಪ್ರಬಂಧಗಳನ್ನಾಧರಿಸಿ ಬರೆದ ‘ಪ್ರಾಚೀನ ಸಾಹಿತ್ಯ’ ಅನುವಾದ ಕೃತಿಗಳು. ’ಹರಿಹರನ ...

READ MORE

Related Books