ಕಿರಾತ ರುದ್ರ ಲೀಲೆ ಅಥವಾ ಶಬರ ಶಂಕರ ವಿಳಾಸಂ

Author : ಶಿ.ಶಿ. ಬಸವನಾಳ

Pages 191




Year of Publication: 1939
Published by: ಸಾಹಿತ್ಯ ಸಮಿತಿ
Address: ಲಿಂಗಾಯತ ಅಭಿವೃದ್ಧಿ ಸಂಸ್ಥೆ, ಧಾರವಾಡ

Synopsys

ಕನ್ನಡ ಸಾಹಿತ್ಯವನ್ನು ಚಂಪೂಕಾವ್ಯದಲ್ಲಿ ರಚಿಸಿದ ಖ್ಯಾತಿಯ ಕವಿ ಶ್ರೀ ಷಡಕ್ಷರ ದೇವನ ಶಬರ ಶಂಕರ ವಿಳಾಸಂ ಅಥವಾ ಕಿರಾತ ರುದ್ರ ಲೀಲೆ ಕೃತಿಯನ್ನು ಪರಿಷ್ಕರಿಸಿ ಸಂಪಾದಿಸಿದವರು ಶಿ.ಶಿ. ಬಸವನಾಳರು. ಮಂಡ್ಯ ಜಿಲ್ಲೆಯ ಮಳವಳ್ಳಿಗೆ ಸೇರಿದ ಷಡಕ್ಷರದೇವ, ಶ್ರೀ ರೇಣುಕಾಚಾರ್ಯರ ಗುರು ಸಂಪ್ರದಾಯಕ್ಕೆ ಸೇರಿದವರೆಂದೂ, ಬ್ರಹ್ಮಚಾರಿಗಳಾಗಿ ಗುರುಸ್ಥಲ ಮಠದ ಪಟ್ಟಾಧಿಕಾರಿಯಾಗಿದ್ದು, ಈತನ ರಾಜಶೇಖರ ವಿಳಾಸ, ವೃಷಭೇಂದ್ರ ವಿಜಯ ಮುಂತಾದ ಕೃತಿಗಳ ವಿವರಣೆಸಹಿತ ವಿಶ್ಲೇಷಣೆಯೂ ಹಾಗೂ  ಷಡಕ್ಷರ ದೇವ ಅವರ ಬಾಲ್ಯ, ಜೀವನ, ಸಾಹಿತ್ಯ ರಚನೆಯ ವಿಸ್ತೃತ ಅಧ್ಯಯನವು ಈ ಕೃತಿ ಒಳಗೊಂಡಿದೆ.

About the Author

ಶಿ.ಶಿ. ಬಸವನಾಳ
(07 November 1893 - 22 February 1951)

ಸಾರ್ವಜನಿಕ ಬದುಕು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳ ಅವರು ವಚನ ಸಾಹಿತ್ಯ ಮತ್ತು ವೀರಶೈವ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. 1893ರ ನವೆಂಬರ್ 7ರಂದು ಜನಿಸಿದ ಅವರ ತಂದೆ ಶಿವಯೋಗಪ್ಪ ತಾಯಿ ಸಿದ್ಧಮ್ಮ. ಮೆಟ್ರಿಕ್ ಪರೀಕ್ಷೆ (1910) ಮುಗಿಸಿದ ನಂತರ ಪುಣೆಗೆ ತೆರಳಿದ್ದು, ಅಲ್ಲಿಯ ಡೆಕ್ಕನ್ ಕಾಲೇಜಿನಲ್ಲಿ ಎಂ. ಎ. (1915) ಪೂರ್ಣಗೊಳಿಸಿದರು.  ಸರ್ಕಾರಿ ಕೆಲಸಕ್ಕೆ ಸೇರದೆ ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಧಾರವಾಡದಲ್ಲಿ ಕೆಎಲ್ಇ ಸೊಸೈಟಿ ಸ್ಥಾಪಿಸಿ, ಕೆಲವು ಕಾಲ ಧಾರವಾಡದ ಆರ್. ಎಲ್. ಎಸ್. ಹೈಸ್ಕೂಲ್ ಮುಖ್ಯೋಪಾಧ್ಯಾಯರಾಗಿ, ಲಿಂಗರಾಜ ಕಾಲೇಜಿನಲ್ಲಿ ...

READ MORE

Related Books