ಮಹಾಕವಿ ಷಡಕ್ಷರದೇವನ ಬಸವರಾಜ ವಿಜಯ

Author : ಎಸ್. ವಿದ್ಯಾಶಂಕರ

Pages 828

₹ 500.00




Year of Publication: 2011
Published by: ಪ್ರಿಯದರ್ಶಿನಿ ಪ್ರಕಾಶನ
Address: #138, 7ನೇ ಸಿ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು-560104

Synopsys

ಖ್ಯಾತ ಸಾಹಿತಿ -ಅನುವಾದಕ ಡಾ. ಎಸ್. ವಿದ್ಯಾಶಂಕರ ಅವರು ಸಂಪಾದಿಸಿದ ಕೃತಿ-ಮಹಾಕವಿ ಷಡಕ್ಷರಿದೇವನ ಬಸವರಾಜ ವಿಜಯ. ಈತನು ಕ್ರಿ.ಶ.1650ರ ಆಸುಪಾಸಿನಲ್ಲಿ ಜೀವಿಸಿದ್ದನು. ಮಂಡ್ಯಜಿಲ್ಲೆಯ ಮಳವಳ್ಳಿ ತಾಲೂಕಿನ ದನಗೂರು ಗ್ರಾಮದಲ್ಲಿ ಜನಿಸಿದ್ದು, ಸಂಸ್ಕೃತ -ಕನ್ನಡ ಪಾಂಡಿತ್ಯದೊಂದಿಗೆ ರಾಜಗೌರವಕ್ಕೆ ಪಾತ್ರನಾಗಿದ್ದ. ಮಾತ್ರವಲ್ಲ; ಈ ಕವಿ ಯಳಂದೂರು ಮಠದ ಮಠಾದಿಪತಿಯಾಗಿದ್ದರು. ಈ ಮಠದಲ್ಲಿ ಅವರ ಸಮಾಧಿ ಇದೆ. ಷಡಕ್ಷರದೇವನ ಅಲಂಕಾರ ಶೈಲಿ ‘ಉತ್ಪ್ರೆಕ್ಷೆ’ಗೆ ಹೆಸರುವಾಸಿ. ಈತನ ಕಾವ್ಯವೂ ಮಧುರವಾಗಿದ್ದು, ಐಹಿಕ ಹಾಗೂ ಪಾರಲೌಕಿಕ ದೃಷ್ಟಿಯಿಂದ ಕೂಡಿದೆ. ಸಂಸ್ಕೃತದಲ್ಲಿ ರಸವತ್ ಮಹಾಕಾವ್ಯ ಎಂಬ ಎರಡು ಲಘುಕಾವ್ಯಗಳನ್ನು, ಹಲವಾರು ಸ್ತೋತ್ರ ಕಾವ್ಯಗಳನ್ನು ಹಾಗೂ ಕನ್ನಡದಲ್ಲಿ ಸಂಸ್ಕೃತಭೂಯಿಷ್ಠವಾದ ಮೂರು ಮಹಾಕಾವ್ಯಗಳನ್ನು ರಚಿಸಿದ್ದಾನೆ. ಆತನ ‘ಬಸವರಾಜ ವಿಜಯ’ ಮಹತ್ವದ ಕೃತಿ ಎಂದು ಪರಿಗಣಿತವಾಗಿದೆ.

About the Author

ಎಸ್. ವಿದ್ಯಾಶಂಕರ

ಎಸ್. ವಿದ್ಯಾಶಂಕರ ಅವರು ಚಾಮರಾಜ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿಯಲ್ಲಿ ಜನಿಸಿದರು. ತಂದೆ ವಿದ್ವಾನ್' ಸ.ಸ. ಶಿವಶಂಕರಪ್ಪ ತಾಯಿ ವಿಶಾಲಾಕ್ಷಮ್ಮ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು ೧೯೬೬ರಲ್ಲಿ ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಎಂ.ಎ. ಪದವಿ ಗಳಿಸಿ ೧೯೭೧ರಲ್ಲಿ ಬೆಂಗಳೂರು ವಿ.ವಿ. ಪಿಎಚ್.ಡಿ. ಪದವಿ ಗಳಿಸಿದರು. ಬೆಂಗಳೂರು ವಿ.ವಿ. ಕನ್ನಡ ವಿಭಾಗದ ಸ್ನಾತಕೋತ್ತರ ಸಂಶೋಧನ ಸಹಾಯಕರಾಗಿ ಸೇವೆ ಸಲ್ಲಿಸಿ ೧೯೭೦ ರಿಂದ ೮೫ರರಿಗೆ ಕನ್ನಡ ಅಧ್ಯಯನ ಕೇಂದ್ರದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ನಂತರ ನಿರ್ದೇಶಕರಾಗಿ ಸೇವೆ ಸಲ್ಲಿಸಿ ೨೦೦೧ರಲ್ಲಿ ವೃತ್ತಿಯಿಂದ ವಿಶ್ರಾಂತಿ ಪಡೆದರು. ೧೯೯೫೪-೯೭ರಲ್ಲಿ ಹಂಪಿಯ ಕನ್ನಡ ...

READ MORE

Related Books