ಸರಸ ಸೌಗಂಧಿಕದ ಪರಿಮಳ

Author : ಕೃಷ್ಣಮೂರ್ತಿ ಹನೂರು

Pages 450

₹ 400.00




Year of Publication: 2020
Published by: ಅಹರ್ನಿಶಿ ಪ್ರಕಾಶನ
Address: ಜ್ಞಾನವಿಹಾರ ಬಡಾವಣೆ, ಕಂಟ್ರಿಕ್ಲಬ್ ಎದುರು, ವಿದ್ಯಾನಗರ, ಶಿವಮೊಗ್ಗ- 577203
Phone: 9449174662

Synopsys

‘ಸರಸ ಸೌಗಂಧಿಕದ ಪರಿಮಳ’ ಕುಮಾರವ್ಯಾಸ ಭಾರತ ಸಂಗ್ರಹ ಈ ಕೃತಿಯನ್ನು ಲೇಖಕ ಕೃಷ್ಣಮೂರ್ತಿ ಹನೂರು ಅವರು ಸಂಪಾದಿಸಿದ್ದಾರೆ. ಇದು ಕುಮಾರವ್ಯಾಸ ಭಾರತ ಕಾವ್ಯ ಕುರಿತ ಸಮಗ್ರ ಮಾಹಿತಿಗಳನ್ನು ಒಳಗೊಂಡ 450 ಪುಟಗಳ ಚಿತ್ರವತ್ತಾದ ವಾಚಿಕೆ. ಈ ಕೃತಿಗೆ ಪ್ರೊ.ಕೆ. ಮರುಳಸಿದ್ದಪ್ಪ ಬೆನ್ನುಡಿ ಬರೆದಿದ್ದಾರೆ. ‘ಮಾನವ ಧರ್ಮವೇ ಕುಮಾರವ್ಯಾಸನ ಧರ್ಮ ಎಂದು ತೀರ್ಮಾನಿಸಿರುವ ಪ್ರೊ. ಕೃಷ್ಣಮೂರ್ತಿ ಹನೂರು, ಪ್ರಭುತ್ವ ವಿರೋಧ, ಯುದ್ಧ ವಿರೋಧ, ಸ್ತ್ರೀ ಪಕ್ಷಪಾತ, ಭಕ್ತಿಪರತೆಗಳತ್ತ ಗಮನ ಸೆಳೆಯುತ್ತಾರೆ. ಗದುಗಿನ ಭಾರತವನ್ನು ಸಂಗ್ರಹಿಸುವ ಅವರ ಕಾರ್ಯಕ್ಕೆ ಇದು ದಾರಿದೀಪವಾಗಿರುವಂತಿದೆ ಎನ್ನುತ್ತಾರೆ ಮರುಳಸಿದ್ದಪ್ಪ. ತಮ್ಮ ಪ್ರಸ್ತಾವನೆಯಲ್ಲಿ ಕುಮಾರವ್ಯಾಸ ಸಂಪಾದನಾ ಪರಂಪರೆಯನ್ನು ಪರಿಚಯಿಸಿದ್ದಾರೆ. ಕವಿಯ ಹುಟ್ಟೂರು ಕೋಳಿವಾಡ-ಗದುಗಿನ ಭಾಗದಲ್ಲಿ ಸಂಚರಿಸಿ ಮಾಹಿತಿ ಕಲೆ ಹಾಕಿ, ಛಾಯಾಚಿತ್ರಗಳು, ಅರ್ಥಕೋಶ, ಕೃತಿ ಸೂಚಿಗಳನ್ನು ಅನುಬಂಧವಾಗಿ ಸೇರಿಸಿದ್ದಾರೆ.

About the Author

ಕೃಷ್ಣಮೂರ್ತಿ ಹನೂರು

ಜಾನಪದ ತಜ್ಞ, ಕತೆಗಾರ, ಕಾದಂಬರಿಕಾರ ಕೃಷ್ಣಮೂರ್ತಿ ಹನೂರು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಮಾಡಿ ಸಂದರ್ಶಕ ಪ್ರಾಧ್ಯಾಪಕರಾಗಿ. 40 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ಆಜ್ಞಾತನೊಬ್ಬನ ಆತ್ಮ ಚರಿತ್ರೆ ಕಾದಂಬರಿ ಓದುಗರ ಮೇರೆಯಿಲ್ಲದ ಮೆಚ್ಚುಗೆ ಪಡೆದಿದೆ. ಅದೀಗ ಇಂಗ್ಲೀಷ್ ಗೆ ಅನುವಾದಗೊಂಡು ಪ್ರಕಟವಾಗಿದೆ. ಕೇರಿಗೆ ಬಂದ ಹೋರಿ, ಕತ್ತಲಲ್ಲಿ ಕಂಡ ಮುಖ ಮತ್ತು ಕಳೆದ ಮಂಗಳವಾರ ಮುಸ್ಸಂಜೆ ಅವರ ಕಥಾಸಂಕಲನಗಳು. ಬಾರೋ ಗೀಜಗನೆ, ನಿಕ್ಷೇಪ ಅವರ ಕಾದಂಬರಿಗಳು. ಜಾನಪದಕ್ಕೆ ಸಂಬಂಧಿಸಿದಂತೆ ಹಲವಾರು ಕೃತಿಗಳನ್ನು ಸಂಪಾದಿಸಿದ್ದಾರೆ. ಅವರು ಸಂಪಾದಿಸಿದ ವಿಶ್ವಕೋಶ ಎನ್ ಸೈಕ್ಲೋಪೀಡಿಯಾ ಆಫ್ ಫೋಕ್ ಕಲ್ಚರ್ ...

READ MORE

Related Books