ಹಳಗನ್ನಡ - ಸಂಗಂ ತಮಿಳ್ ಮತ್ತು ಸಂಗಂ ಕಾಲದ ತೀರ್ಮಾನ

Author : ಎನ್‌ ಶಂಕರಪ್ಪ ತೋರಣಗಲ್ಲು

Pages 416

₹ 500.00




Year of Publication: 2021
Published by: ಕಾವ್ಯಕಲಾ ಪ್ರಕಾಶನ
Address: # 12873, 7ನೇ ಕ್ರಾಸ್, ಚಂದ್ರ‌ ಲೇಔಟ್ ವಿಜಯನಗರ, ಬೆಂಗಳೂರು-560040
Phone: 9964124831

Synopsys

ಲೇಖಕ ಎನ್. ಶಂಕರಪ್ಪ ತೋರಣಗಲ್ಲು ಅವರ ಕೃತಿ ʼಹಳಗನ್ನಡ -ಸಂಗಂ ತಮಿಳ್ ಮತ್ತು ಸಂಗಂ ಕಾಲದ ತೀರ್ಮಾನʼ. ತಮಿಳ್ ಸಂಸ್ಕೃತಿಯ ಮೂಲ ಕೃತಿ ಇದು. ಶತಮಾನದ ಭಾಷೆ, ಸಾಹಿತ್ಯ ಹಾಗೂ ರಾಜಕೀಯ ಕುರಿತಾದ ವಿಚಾರಗಳನ್ನು ಪ್ರಸ್ತುತ ಕಾಲ ಘಟ್ಟದಲ್ಲಿ ಪಡೆಯಬೇಕಾದರೆ ಕಲ್ಬರಗಳು ಪ್ರಮುಖವಾಗಿರುತ್ತದೆ. ಹಿಂದಿನ ಕಾಲಕ್ಕೆ ಸೇರಿದ ಮಾಹಿತಿಗಳು ಸಿಗುವುದು ವಿರಳ ಹಾಗೂ ಅಸ್ಪಷ್ಟವಾಗಿರುತ್ತದೆ. ಆದರೆ ʼಸಂಗಂ ಸಾಹಿತ್ಯʼ ಇತಿಹಾಸದ ಸಾಂಸ್ಕೃತಿಕ ಕುರುಹುಗಳನ್ನು ಹಾಗೂ ರಾಜಕೀಯ ಕುರಿತಾದ ಚಾರಿತ್ರಿಕ ಮಾಹಿತಿಗಳನ್ನು ಸ್ಪಷ್ಟವಾಗಿ ಕಲೆಹಾಕಿದೆ. ಹಳಗನ್ನಡ ಮತ್ತು ಸಂಗಂ ತಮಿಳಿನ ಹೋಲಿಕೆಯಂತಹ ಭಾಷಾ ವೈಜ್ಞಾನಿಕ ತಳಹದಿ , ಪಾಣಾರ- ಮೂವೇಂದರರ ನಿರುಗೆಗಳ ಬಳಕೆ ಮುಂತಾದ ಹೊಸ ಬಗೆಯ ವಿಶ್ಲೇಷಣೆಯ ಸಲಕರಣೆಗಳನ್ನು ಬಳಸಿ, ಸಂಗಂ ಕಾಲವನ್ನು ಈ ಕೃತಿಯಲ್ಲಿ ತೀರ್ಮಾನ ಮಾಡಲಾಗಿದೆ. ಚೋಳ, ಚೇರ, ಪಾಂಡ್ಯರು ಆಸ್ಥಾನ ಕವಿಗಳ ಮೂಲಕ ಹಿಂದಿನ ಕೆಲ ಐತಿಹಾಸಿಕ ಸಂಗತಿಗಳ ಎಳೆಯನ್ನು ಹಿಡಿದು ʼಸಂಗಂʼ ಹಾಡುಗಳನ್ನು ಈ ಕೃತಿಯ ಮೂಲಕ ಕಟ್ಟಿಕೊಡಲಾಗಿದೆ.

 

About the Author

ಎನ್‌ ಶಂಕರಪ್ಪ ತೋರಣಗಲ್ಲು

ಲೇಖಕ ಎನ್‌ ಶಂಕರಪ್ಪ ತೋರಣಗಲ್ಲು ಮೂಲತಃ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಗ್ರಾಮದವರು. ಬೆಂಗಳೂರಿನ ವಿಶ್ವೇಶ್ವರಯ್ಯ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ ವಿ.ವಿ.ಯಿಂದ ಸ್ನಾತಕೋತ್ತರ ಪದವೀಧರರು. ವೃತ್ತಿಯಲ್ಲಿ ಸಮಾಲೋಚಕ ಇಂಜಿನಿಯರ್‌ ಆಗಿದ್ದಾರೆ.  ಕೃತಿಗಳು: ಸ್ವಾಮಿ ವಿವೇಕಾನಂದ ; ಕಪ್ಪು ಬಿಳುಪು (ಜನಪ್ರಿಯ ರಾಷ್ಟ್ರೀಯ ನಾಯಕ ವಿವೇಕಾನಂದ ಮತ್ತು ಅಜ್ಞಾತ ಸ್ವಾಮಿ ವಿವೇಕಾನಂದರನ್ನು ಬೇರ್ಪಡಿಸಿ ನೋಡಿದ್ದಾರೆ),  ವಿಜ್ಞಾನ- ಏನು? ಹೇಗೆ? , ಸಂಗಂ - ತಮಿಳಗಂ, ಲಿಪಿ ನಿಗೂಢ, ಭಗವದ್ಗೀತೆ ಬೆಳಕು ನೀಡುವುದೇ?, ವಾಸ್ತು ಎಂಬ ವ್ಯಾಧಿ, ತಂತ್ರಜ್ಞಾನದ ದೇಸೀಕರಣ- ಕನ್ನಡದ ಜಾಗತೀಕರಣ, ಹಳಗನ್ನಡ- ಸಂಗಂ ತಮಿಳ್ ಮತ್ತು ಸಂಗಂ ಕಾಲದ ತೀರ್ಮಾನ .ಆರ್ಯರು ಯಾರು ? ...

READ MORE

Related Books