ಪುರುಷಾರ್ಥಸಿದ್ಧ್ಯುಪಾಯಃ

Author : ಎರ್ತೂರು ಶಾಂತಿರಾಜಶಾಸ್ತ್ರಿ

Pages 80

₹ 99.00




Year of Publication: 1997
Published by: ಪಂಡಿತರತ್ನ ಎ.ಶಾಂತಿರಾಜಶಾಸ್ತ್ರಿ ಟ್ರಸ್ಟ್
Address: ಜಯನಗರ, ಬೆಂಗಳೂರು- 560070

Synopsys

ಶ್ರೀಮದಮೃತಚಂದ್ರಸೂರಿವಿರಚಿತ ಪುರುಷಾರ್ಥಸಿದ್ಧ್ಯುಪಾಯಃ ಜಿನಪ್ರವಚನರಹಸ್ಯ-ಕೋಶಃ ವನ್ನು ಎರ್ತೂರು ಶಾಂತಿರಾಜಶಾಸ್ತ್ರಿಗಳು ವ್ಯಾಖ್ಯಾನಿಸಿದ್ದಾರೆ. ಶ್ರೀಅಮೃತಚಂದ್ರಸೂರಿಗಳು ರಚಿಸಿದ ಪುರುಷಾರ್ಥಸಿದ್ಧ್ಯುಪಾಯಃದಿಂದ ಜೀವನದ ಸಾರ್ಥಕತೆಯ ಬಗ್ಗೆ ಅರಿವು ಮೂಡುತ್ತದೆ. ಸಮ್ಯಗ್ದರ್ಶನ-ಜ್ಞಾನ-ಚಾರಿತ್ರಗಳು ಮೋಕ್ಷಮಾರ್ಗಕ್ಕೆ ಎಷ್ಟು ಅವಶ್ಯಕ ಎಂಬ ಸತ್ಯವು ಮನಗಾಣುವುದು ಇಂತಹ ಗ್ರಂಥಗಳ ಸ್ವಾಧ್ಯಾಯದಿಂದ ಸಾಧ್ಯವಾಗುತ್ತದೆ. ಪೂರ್ವಾಚಾರ್ಯರಿಂದ ರಚಿತವಾದ ವಿಫುಲ ಶಾಸ್ತ್ರ ಸಂಪತ್ತಿದೆ. ಎಂದಿಗೂ ನಾಶವಾಗದ ಈ ಸಂಪತ್ತನ್ನೇ ಅವರು ನಮಗಾಗಿ ಉಳಿಸಿಕೊಟ್ಟು ಹೋಗಿದ್ದಾರೆ. ಇದನ್ನು ಸಂರಕ್ಷಿಸುವ ಕಾರ್ಯದಲ್ಲಿ ಪಂಡಿತೋತ್ತಮರು, ವಿದ್ವಾಂಸರು, ಶ್ರಮಿಸುತ್ತಲೇ ಬಂದಿದ್ದು, ಈ ಪರಂಪರೆ ಅನೂಚಾನವಾಗಿ ಬೆಳೆದುಬರುತ್ತಿದೆ. ಈ ಕೃತಿಯನ್ನು ಎರ್ತೂರು ಶಾಂತಿರಾಜಶಾಸ್ತ್ರಿಗಳು ವ್ಯಾಖ್ಯಾನಿಸಿದ್ದಾರೆ.

About the Author

ಎರ್ತೂರು ಶಾಂತಿರಾಜಶಾಸ್ತ್ರಿ

ಎರ್ತೂರು ಶಾಂತಿರಾಜ ಶಾಸ್ತ್ರಿಗಳು ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಕಾರ್ಕಳ ತಾಲ್ಲೂಕಿನ ಜೈನಕಾಶಿ ಮೂಡುಬಿದರೆ ಬಳಿಯ ಎರ್ತೂರು ಎಂಬ ಸಣ್ಣ ಹಳ್ಳಿಯವರು. ಸಾಧಾರಣ ರೈತ ಕುಟುಂಬದಲ್ಲಿ 1888ರಲ್ಲಿ ಜನಿಸಿದರು. ತಂದೆ- ಧರಣಪ್ಪಾರ್ಯ ಮತ್ತು ತಾಯಿ- ಚೆಲುವಮ್ಮ. ಚಿಕ್ಕಂದಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಸುತ್ತಮುತ್ತಲಿನ ಪ್ರೀತಿಯ ತೊಟ್ಟಿಲಲ್ಲಿ ಬೆಳೆದರು. ಅವರ ಪ್ರಾರಂಭಿಕ ವಿದ್ಯಾಭ್ಯಾಸವೆಲ್ಲ ಎರ್ತೂರು ಮತ್ತು ಕಾರ್ಕಳದಲ್ಲಿ ನಡೆದವು. ಪೂರ್ವಾಶ್ರಮದಲ್ಲಿ ಅವರ ಅಜ್ಜ (ತಾಯಿಯ ತಂದೆ) ನವರಾಗಿದ್ದ ಆದಿಸಾಗರ(ಆದಿರಾಜಯ್ಯ) ಮುನಿಗಳು, ಕಾರ್ಕಳದ ಅಂದಿನ ಶ್ರೀಗಳು ಮತ್ತು ಶ್ರವಣಬೆಳಗೊಳದ ಸ್ವಸ್ತಿಶ್ರೀ ನೇಮಿಸಾಗರ ವರ್ಣಿಯವರ ಮಹದಾಶೀರ್ವಾದ ಮತ್ತು ಮಾರ್ಗದರ್ಶನದ ಫಲವಾಗಿ ವಿದ್ಯಾಭ್ಯಾಸವು ...

READ MORE

Related Books