ಸಮ್ಯಕ್ತ್ವ ಕೌಮುದಿ

Author : ಎರ್ತೂರು ಶಾಂತಿರಾಜಶಾಸ್ತ್ರಿ

Pages 200

₹ 141.00




Year of Publication: 2012
Published by: ಪಂಡಿತರತ್ನ ಎ.ಶಾಂತಿರಾಜಶಾಸ್ತ್ರಿ ಟ್ರಸ್ಟ್
Address: ಬೆಂಗಳೂರು

Synopsys

‘ಸಮ್ಯಕ್ತ್ವ ಕೌಮುದಿ’ ಪಂಡಿತ ಎರ್ತೂರು ಶಾಂತಿರಾಜಶಾಸ್ತ್ರಿಗಳ ಕೃತಿ. ಜೈನಸಿದ್ಧಾಂತಾನುಸಾರವಾಗಿ ಸಮ್ಯಗ್ದರ್ಶನ ಸಮ್ಯಜ್ಞಾನ ಸಮ್ಯಕ್ಚಾರಿತ್ರಗಳು ಮೋಕ್ಷಕ್ಕೆ ಮಾರ್ಗ. ದರ್ಶನಶಬ್ದಕ್ಕೆ ನೋಟವೆಂದು ಅರ್ಥವಿದ್ದರೂ ಮೋಕ್ಷ ಮಾರ್ಗ ಪ್ರಕರಣದಲ್ಲಿ ಅದಕ್ಕೆ ನಂಬಿಕೆಯೆಂದರ್ಥ. ಯಥಾರ್ಥವಾದ ದೇವ ಗುರು ಶಾಸ್ತ್ರಗಳಲ್ಲಿ ಮತ್ತು ತತ್ವ್ತಾರ್ಥಗಳಲ್ಲಿ ಶ್ರೇಷ್ಠವಾದ ನಂಬಿಕೆಗೆ ಸಮ್ಯಗ್ದರ್ಶನವೆಂದೂ ಸಂಶಯ ವಿಪರೀತಿ ಅನಿಶ್ಚಿತಗಳಲ್ಲದ- ಯಥಾರ್ಥಜ್ಞಾನಕ್ಕೆ ಸಮ್ಯಜ್ಞಾನವೆಂದೂ ಪ್ರಾಣಿಬಾಧಾರಹಿತವೂ ನಿರ್ದಿಷ್ಟವೂ ಆದ ಆಚರಣೆಗೆ ಸಮ್ಯಕ್ಚಾರಿತ್ರವೆಂದೂ ಹೆಸರು. ಈ ಮೂರಕ್ಕೆ ರತ್ನತ್ರಯವೆಂದು ಜೈನಸಿದ್ಧಾಂತದಲ್ಲಿ ಸಂಕೇತವಿದೆ. ಇವುಗಳಲ್ಲಿ ಸಮ್ಯಗ್ದರ್ಶನವು ಪ್ರಧಾನವಾದುದು. ಅದಿದ್ದರೇನೆ ಜ್ಞಾನ ಚಾರಿತ್ರಗಳಿಗೆ ಶ್ರೇಷ್ಠತೆ. ಇಲ್ಲವಾದರೆ ಅವು ಮಿಥ್ಯಾಜ್ಞಾನಚಾರಿತ್ರಗಳೆನ್ನಿಸುವುವು. ಇವು ಮೂರೂ ಆತ್ಮನ ಗುಣಗಳಾಗಿರುತ್ತವೆ. ಸಮೀಚೀನಶ್ರದ್ಧಾರೂಪಾದ ಸಮ್ಯಗ್ದರ್ಶನಕ್ಕೆ ಜೈನಾಗಮದಲ್ಲಿ ಸಮ್ಯಕ್ತ್ವವೆಂದೂ ಹೆಸರಿದೆ. ಅದೇ ಈ ಗ್ರಂಥದಲ್ಲಿ ಮುಖ್ಯವಾಗಿ ಪ್ರತಿಪಾದಿತವಾಗಿರುವ ವಿಷಯ. ಅದೇ ಈ ಗ್ರಂಥದಲ್ಲಿ ಮುಖ್ಯವಾಗಿ ಪ್ರತಿಪಾದಿತವಾಗಿರುವ ವಿಷಯ. ಬೆಳದಿಂಗಳಿಗೆ ಸಂಸ್ಕೃತದಲ್ಲಿ ಕೌಮುದಿಯೆಂದು ಹೆಸರು. ಅದು ಮನಸ್ಸಿಗೆ ಆಹ್ಲಾದವನ್ನುಂಟುಮಾಡುವಂತೆ ಮನೋರಂಜಕವಾದ ಕಥೆಗಳ ಮೂಲಕ ಈ ಸಮ್ಯಕ್ತ್ವವೆಂಬ ಕೌಮುದಿಯೂ ಇದನ್ನು ಪಠನ ಮಾಡುವವರ ಮನಸ್ಸಿಗೆ ಶಾಂತಿ ಸಂತೋಷಗಳನ್ನೂ ಕೊನೆಗೆ ಮುಕ್ತಿಸುಖವನ್ನೂ ಉಂಟುಮಾಡತಕ್ಕುದಾಗಿರುವುದರಿಂದ ಈ ಗ್ರಂಥಕ್ಕೆ ಸಮ್ಯಕ್ತ್ವಕೌಮುದಿಯೆಂಬ ಹೆಸರು ಸಾರ್ಥಕವಾಗಿದೆ. ಧರ್ಮ ನೀತಿ ಮೊದಲಾದ ವಿಷಯಗಳನ್ನು ಇಷ್ಟು ಮನೋರಂಜಕವಾದ ಸುಲಭ ರೀತಿಯಲ್ಲಿ ಬೋಧಿಸುವ ಗ್ರಂಥವು ದೊರೆಯುವುದು ಕಷ್ಟ. ಈ ಗ್ರಂಥವು ಸಂಸ್ಕೃತದಲ್ಲಿಯೂ, ಹಿಂದಿಯಲ್ಲಿಯೂ, ಮರಾಠಿಯಲ್ಲಿಯೂ, ಕನ್ನಡದಲ್ಲಿ ಷಟ್ಪದಿಯಲ್ವಿಯೂ ಸಾಂಗತ್ಯದಲ್ಲಿಯೂ ಇರುತ್ತದೆ. ಇದರಿಂದಲೂ ಸಮ್ಯಕ್ತ್ವಕೌಮುದಿಯೆಂಬ ಹೆಸರಿನಿಂದಲೂ ಈ ಗ್ರಂಥದ ಮಹತ್ತ್ವವೂ ಮನೋರಂಜಕತೆಯೂ ಅನುಮಿತವಾಗುವುವು.

About the Author

ಎರ್ತೂರು ಶಾಂತಿರಾಜಶಾಸ್ತ್ರಿ

ಎರ್ತೂರು ಶಾಂತಿರಾಜ ಶಾಸ್ತ್ರಿಗಳು ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಕಾರ್ಕಳ ತಾಲ್ಲೂಕಿನ ಜೈನಕಾಶಿ ಮೂಡುಬಿದರೆ ಬಳಿಯ ಎರ್ತೂರು ಎಂಬ ಸಣ್ಣ ಹಳ್ಳಿಯವರು. ಸಾಧಾರಣ ರೈತ ಕುಟುಂಬದಲ್ಲಿ 1888ರಲ್ಲಿ ಜನಿಸಿದರು. ತಂದೆ- ಧರಣಪ್ಪಾರ್ಯ ಮತ್ತು ತಾಯಿ- ಚೆಲುವಮ್ಮ. ಚಿಕ್ಕಂದಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಸುತ್ತಮುತ್ತಲಿನ ಪ್ರೀತಿಯ ತೊಟ್ಟಿಲಲ್ಲಿ ಬೆಳೆದರು. ಅವರ ಪ್ರಾರಂಭಿಕ ವಿದ್ಯಾಭ್ಯಾಸವೆಲ್ಲ ಎರ್ತೂರು ಮತ್ತು ಕಾರ್ಕಳದಲ್ಲಿ ನಡೆದವು. ಪೂರ್ವಾಶ್ರಮದಲ್ಲಿ ಅವರ ಅಜ್ಜ (ತಾಯಿಯ ತಂದೆ) ನವರಾಗಿದ್ದ ಆದಿಸಾಗರ(ಆದಿರಾಜಯ್ಯ) ಮುನಿಗಳು, ಕಾರ್ಕಳದ ಅಂದಿನ ಶ್ರೀಗಳು ಮತ್ತು ಶ್ರವಣಬೆಳಗೊಳದ ಸ್ವಸ್ತಿಶ್ರೀ ನೇಮಿಸಾಗರ ವರ್ಣಿಯವರ ಮಹದಾಶೀರ್ವಾದ ಮತ್ತು ಮಾರ್ಗದರ್ಶನದ ಫಲವಾಗಿ ವಿದ್ಯಾಭ್ಯಾಸವು ...

READ MORE

Related Books