ಶಾಸ್ತ್ರ ಸಾಹಿತ್ಯ

Author : ದೇವರಕೊಂಡಾ ರೆಡ್ಡಿ

₹ 300.00




Published by: ಕನ್ನಡ ಸಾಹಿತ್ಯ ಪರಿಷತ್ತು

Synopsys

ಕನ್ನಡದ ಹಿರಿಯ ವಿದ್ವಾಂಸ ದೇವರ ಕೊಂಡಾರೆಡ್ಡಿ ಅವರ ಶಾಸ್ತ್ರ ಸಾಹಿತ್ಯ ಗ್ರಂಥವು ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ಬಗೆಗೆ ಮಾಹಿತಿ ನೀಡುವ ಮಹತ್ತರದ ಗ್ರಂಥವಾಗಿದೆ. ಕೃತಿಯ ಪರಿವಿಡಿಯಲ್ಲಿ ಕನ್ನಡ ಭಾಷಾ ವಿಜ್ಞಾನ ಕ್ಷೇತ್ರಕ್ಕೆ ಪಾಶ್ಚಾತ್ಯರ ಕೊಡುಗೆ, ವ್ಯಾಕರಣದಿಂದ ಭಾಷಾ ಶಾಸ್ತ್ರದ ಕಡೆಗೆ ಅಧ್ಯಯನಗಳು ನಡೆದುಬಂದ ದಾರಿ, ಭಾಷಾ ಶಾಸ್ತ್ರದ ವ್ಯಾಕರಣಗಳನ್ನು ಕುರಿತ ಮುಖ್ಯವಾದ ಕೃತಿಗಳು, ಕನ್ನಡದಲ್ಲಿ ಅರ್ವಾಚೀನ ನಿಘಂಟುಗಳು, ಲಕ್ಷಣಶಾಸ್ತ್ರ ನಿಘಂಟುಗಳು, ಸಾಹಿತ್ಯ ನಿಘಂಟುಗಳು, ಕನ್ನಡದ ವಿಶಿಷ್ಟ ಪದಕೋಶಗಳು, ಶಬ್ದಗಳಿಗೆ ಸಂಬಂಧಿಸಿದ ಪದಕೋಶಗಳು, ಕನ್ನಡ ಗ್ರಂಥ ಸಂಪಾದನಾ ಶಾಸ್ತ್ರದ ಇತಿಹಾಸ,ಕನ್ನಡ ಗ್ರಂಥ ಸಂಪಾದನೆ: ಒಂದು ಪರಿಶೀಲನೆ, ಹಸ್ತಪ್ರತಿಶಾಸ್ತ್ರ: ಅಧ್ಯಯನ ಚರಿತ್ರೆವಿಶ್ವಕೋಶಗಳು ಸೇರಿದಂತೆ 22 ಶೀರ್ಷಿಕೆಗಳಿವೆ.

About the Author

ದೇವರಕೊಂಡಾ ರೆಡ್ಡಿ
(10 May 1948)

ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಮತ್ತು ಕನ್ನಡದ ಹಿರಿಯ ವಿದ್ವಾಂಸ  ಡಾ. ದೇವರಕೊಂಡಾರೆಡ್ಡಿ ಅವರು ಶಾಸನ, ವಾಸ್ತುಶಿಲ್ಪ ಹಾಗೂ ಇತಿಹಾಸದಲ್ಲಿ ಪರಿಣಿತರು. ಮುನಿಸ್ವಾಮಿ ರೆಡ್ಡಿ ಹಾಗೂ ತಿಮ್ಮಕ್ಕ ದಂಪತಿಗಳ ಮಗನಾಗಿ ಬೆಂಗಳೂರಿನ ಅನೇಕಲ್ ತಾಲೂಕಿನ ವಣಕನಹಳ್ಳಿ ಅವರು 1948ರ ಮೇ 10ರಂದು ಜನಿಸಿದರು. 1971ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಪದವಿ ಪಡೆದ ಅವರು 1993 ರಲ್ಲಿ ತಲಕಾಡಿನ ಗಂಗರ ದೇವಾಲಯಗಳು  ಒಂದು ಅಧ್ಯಯನ ಎಂಬ ವಿಷಯದ ಕುರಿತು ಪಿ.ಎಚ್.ಡಿ ಪದವಿ ಪಡೆದರು. ಆರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೆಲಸ ಮಾಡಿದ ಅವರು, ನಂತರ ಹಂಪಿ ...

READ MORE

Related Books