ಪ್ರಾಂತಭಾಷೆ-ರಾಷ್ಟ್ರಭಾಷೆ

Author : ರಂಗನಾಥ ದಿವಾಕರ

Pages 69

₹ 0.00




Year of Publication: 1945
Published by: ಹ.ರಾ. ಮೊಹರೆ
Address: ಸಂಯುಕ್ತ ಕರ್ನಾಟಕ ಮುದ್ರಣಾಲಯ, ಹುಬ್ಬಳ್ಳಿ.

Synopsys

ಕಾಂಗ್ರೆಸ್ ರತ್ನ ಮಹೋತ್ಸವ ಅಂಗವಾಗಿ ಕಾಂಗ್ರೆಸ್ ಸ್ವರೂಪ ದರ್ಶನವಾಗಿ ಪ್ರಾಂತಭಾಷೆ-ರಾಷ್ಟ್ರಭಾಷೆ’ ಕೃತಿಯನ್ನು ರಂಗರಾವ್ ದಿವಾಕರ ಬರೆದಿದ್ದಾರೆ. ಸ್ವಾತಂತ್ಯ್ರ, ಶಾಂತಿ, ಜನಸಾಮಾನ್ಯರ ವಿಕಾಸ ಹಾಗೂ ಸುಖಗಳಿಗಾಗಿ ಕಾಂಗ್ರೆಸ್ ನ ತ್ಯಾಗಮಯ ಜೀವನ ಹೋರಾಟವನ್ನು ಬಿಂಬಿಸುವ ಕೃತಿ ಇದು. ಪ್ರಾಂತಭಾಷೆಗಳ ರಕ್ಷಣೆ, ಆದ್ಯತೆ ಹಾಗೂ ರಾಷ್ಟ್ರಭಾಷೆಯ ಅಗತ್ಯ ಹಾಗೂ ಅನಿವಾರ್ಯತೆ ಬಗ್ಗೆ ಇಲ್ಲಿ ಲೇಖಕರು ಚರ್ಚಿಸಿದ್ದಾರೆ.

About the Author

ರಂಗನಾಥ ದಿವಾಕರ
(30 September 1894 - 15 January 1990)

ಕೇಂದ್ರ ವಾರ್ತಾ ಸಚಿವರೂ, ಜನಪ್ರತಿನಿಧಿಗಳೂ, ಏಕೀಕರಣದ ನೇತಾರರೂ, ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ರಂಗರಾವ್ ರಾಮಚಂದ್ರ ದಿವಾಕರ್, ಕರ್ನಾಟಕದ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಜೀವನದ ಪ್ರಮುಖರು. ಧಾರವಾಡದಲ್ಲಿ 1894ರ ಸೆಪ್ಟೆಂಬರ್ 30ರಂದು ಜನಿಸಿದ ರಂ.ರಾ. ದಿವಾಕರ, ಧಾರವಾಡ, ಬೆಳಗಾವಿ, ಪುಣೆ, ಹುಬ್ಬಳ್ಳಿ, ಮುಂಬಯಿಗಳಲ್ಲಿ ವ್ಯಾಸಂಗ ಮಾಡಿದರು. ತಂದೆ ರಾಮಚಂದ್ರರಾವ್, ತಾಯಿ ಸೀತಮ್ಮ. ಎಲ್ಎಲ್ ಬಿ ಪದವಿ (1919, ನಂತರ 1920ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು.  ಕರ್ಮವೀರ (1921) ವಾರಪತ್ರಿಕೆ ಪ್ರಾರಂಭಿಸಿ, ಅನಂತರ ಸಂಯುಕ್ತ ಕರ್ನಾಟಕ ದಿನಪತ್ರಿಕೆ ಆರಂಭಿಸಿದರು. ಭಾರತದ ಸಂವಿಧಾನ ರಚನೆಯಲ್ಲಿ ಘಟನಾ ಸಮಿತಿಯ ಸದಸ್ಯರಾಗಿದ್ದರು.  1948-52ರ ವರೆಗೆ ಕೇಂದ್ರ ಸರ್ಕಾರದಲ್ಲಿ ವಾರ್ತಾ ಇಲಾಖೆ ಸಚಿವರಾದರು. ...

READ MORE

Related Books