ಯಶವಂತ ಚಿತ್ತಾಲ

Author : ಕೆ.ಎಲ್. ಗೋಪಾಲಕೃಷ್ಣಯ್ಯ

Pages 128

₹ 75.00




Year of Publication: 2005
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 7353530805 / 080 - 20161913

Synopsys

ಯಶವಂತ ಚಿತ್ತಾಲರು ಪಾಲಿಮರ್ ತಂತ್ರಜ್ಞಾನದಲ್ಲಿ ವಿಶೇಷ ಪರಿಣತಿಯನ್ನು ಗಳಿಸಿರುವ ವಿಜ್ಞಾನಿ. ಸೃಜನಶೀಲ ಸಾಹಿತ್ಯ ಅವರ ಆಸಕ್ತಿಯ ಕ್ಷೇತ್ರ. ತಮ್ಮ ಹುಟ್ಟೂರಾಗಿರುವ ಹನೇಹಳ್ಳಿ ಮತ್ತು ನೆಲೆಸಿದ ನಗರ ಮುಂಬೈಯನ್ನು ತಮ್ಮ ಕ್ರಿಯಾಶೀಲತೆಯ ಕೇಂದ್ರವಾಗಿರಿಸಿಕೊಂಡ ಚಿತ್ತಾಲರು ಕನ್ನಡದ ಅತ್ಯುತ್ತಮ ಕತೆಗಾರರು. ನವ್ಯರಿಗಿಂತಲೂ ಭಿನ್ನವಾದ ಕಥನಶೈಲಿ ಅವರದಾಗಿತ್ತು. ಕನ್ನಡದ ಹಿರಿಮೆಯನ್ನು ಇತರ ಭಾಷಾವಲಯಗಳಿಗೆ ವಿಸ್ತರಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. 1983 ರಲ್ಲಿ ತಮ್ಮ 'ಕಥೆಯಾದಳು ಹುಡುಗಿ' ಕಥಾಸಂಕಲನಕ್ಕೆ ಯಶವಂತ ಚಿತ್ತಾಲರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. 

ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಪ್ರಸ್ತುತ ಕೃತಿ ಯಶವಂತ ಚಿತ್ತಾಲರ ಜೀವನ ಮತ್ತು ಸಾಧನೆಯನ್ನು ವಿವರಿಸುತ್ತದೆ. ಲೇಖಕ, ವಿಮರ್ಶಕ, ಅನುವಾದಕ ಡಾ. ಕೆ.ಎಲ್. ಗೋಪಾಲಕೃಷ್ಣಯ್ಯ ಅವರು ಈ ಪರಿಚಯಾತ್ಮಕ ಪುಸ್ತಕದ ಲೇಖಕರು. 

About the Author

ಕೆ.ಎಲ್. ಗೋಪಾಲಕೃಷ್ಣಯ್ಯ

ಡಾ. ಕೆ.ಎಲ್. ಗೋಪಾಲಕೃಷ್ಣಯ್ಯ ಅವರು ಮೂಲತಃ (ಜನನ: 18-07-1938) ಕಳಸಪುರದವರು. ಎಂ.ಎ. ಹಾಗೂ ಪಿಎಚ್ ಡಿ ಪದವೀಧರರು. ಕಾಲೇಜು ಅಧ್ಯಾಪಕರಾಗಿ ನಿವೃತ್ತರು. ಚಿಂತಕರು. ಹೊಸತು ಮಾಸಪತ್ರಿಕೆಯ ಸಹ ಸಂಪಾದಕರು. ಕೃತಿಗಳು: ತಿರುವುಗಳು (ಕಾದಂಬರಿ), ಸಮಾಜವಾದ ಪರಿಚಯ; ಶತಮಾನದ ಅಂಚಿನಲ್ಲಿ ಶಿಕ್ಷಣ; ಧರ್ಮ ನಿರಪೇಕ್ಷತೆ ಮತ್ತು ಅಲ್ಪಸಂಖ್ಯಾತರು, ಭಾರತೀಯ ಇತಿಹಾಸದ ವೈಲಕ್ಷಣಗಳು (ಅನುವಾದಿತ ಕೃತಿಗಳು), ಕನ್ನಡ ಸಾಹಿತ್ಯದಲ್ಲಿ ಪುರಾಣ ಪ್ರಜ್ಞೆ(ಪಿಎಚ್ ಡಿ ಮಹಾಪ್ರಬಂಧ)  ಸಾಹಿತ್ಯ ಸಂವಾದ, ಇತಿಹಾಸದ ರಾಜಕೀಯ (ವಿಮರ್ಶೆ/ಸಂಶೋಧನೆ),  ಪುರಾಣ (ವಿಮರ್ಶೆ)  ಭೌತವಾದೀಯ ಚಿಂತನೆಗಳು, ಯಶವಂತ ಚಿತ್ತಾಲ (ಜೀವನ ಚಿತ್ರಣ), ವಿಮರ್ಶೆಯ ದಾರಿ-1, ಪ್ರೌಢಶಾಲಾ ಕನ್ನಡ ಕೈಪಿಡಿ,ಭಾಷೆಯ ಬೆಳಕು, ...

READ MORE

Related Books