ಶಿವರಾಮ ಕಾರಂತ

Author : ಟಿ.ಪಿ. ಅಶೋಕ

Pages 453

₹ 400.00




Year of Publication: 2021
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ (ಜಿಲ್ಲೆ: ವಿಜಯನಗರ)

Synopsys

ಕನ್ನಡ ಸಾಹಿತ್ಯ ಈ ಶತಮಾನದ ನೋಟ ಎಂಬ ಉಪಶೀರ್ಷಿಕೆಯಡಿ ವಿಮರ್ಶಕ ಡಾ., ಡಿ.ಪಿ. ಅಶೋಕ ಅವರು ಸಂಪಾದಿಸಿದ ಕೃತಿ-ಶಿವರಾಮ ಕಾರಂತ. 1902 ಅಕ್ಟೋಬರ್ 10 ರಂದು ಜನಿಸಿದ ಶಿವರಾಮ ಕಾರಂತರು 9 ಡಿಸೆಂಬರ್ 1997 ರಂದು ಮಣಿಪಾಲ್ ನಲ್ಲಿ ನಿಧನರಾದರು. ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲ. ಅವರು ಕನ್ನಡ ಸಾಹಿತ್ಯದಲ್ಲಿ ಬರಹ ಆರಂಭಿಸಿದ ಅಂದಿನಿಂದ ಮರಣದ ಕೊನೆಯ ದಿನಗಳವರೆಗೂ ಕ್ರಿಯಾಶೀಲರಾಗಿಯೇ ಇದ್ದರು ಎಂದರೆ ಅತಿಶಯೋಕ್ತಿಯಲ್ಲ. ಹೀಗಾಗಿ, ಸಾಹಿತ್ಯದ ಅವರ ಚಿಂತನೆ, ಅಭಿವ್ಯಕ್ತಿ ಇತ್ಯಾದಿ ಬರಹಗಳು, ಅವುಗಳ ಮೇಲೆ ಸಾಹಿತ್ಯಾಸಕ್ತರ ವಿಸ್ತೃತ ಅಭಿಪ್ರಾಯಭರಿತ ಲೇಖನಗಳು ಅಸಂಖ್ಯ. ಪ್ರಮುಖವಾದವುಗಳನ್ನು ಸಂಗ್ರಹಿಸಿ ಲೇಖಕ ಟಿ.ಪಿ. ಅಶೋಕ ಅವರು ಸಂಪಾದಿತ ಕೃತಿಯೇ ಇದು. ಕಾರಂತರ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ಪರಿಚಯಿಸುತ್ತದೆ ಮಾತ್ರವಲ್ಲ; ಕನ್ನಡ ಸಾಹಿತ್ಯ ವಿಮರ್ಶೆ ವಲಯದಲ್ಲಿ ಉತ್ತಮ ಬರಹಗಳಾಗಿಯೂ ಇಲ್ಲಿ ಸಂಪಾದಿತಗೊಂಡಿವೆ.

About the Author

ಟಿ.ಪಿ. ಅಶೋಕ
(26 August 1955)

ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...

READ MORE

Related Books