ಎಚ್. ಎಸ್. ಶಿವಪ್ರಕಾಶ್

Author : ಬಿದರಹಳ್ಳಿ ನರಸಿಂಹಮೂರ್ತಿ

Pages 132

₹ 70.00

Buy Now


Published by: ನವಕರ್ನಾಟಕ ಪ್ರಕಾಶನ

Synopsys

ಬಿದರ ಹಳ್ಳಿ ನರಸಿಂಹ ಮೂರ್ತಿ ಇಲ್ಲಿ ಶಿವಪ್ರಕಾಶ್ ಬದುಕು ಬರಹಗಳನ್ನು ಸಂಗ್ರಹಿಸಿದ್ದಾರೆ. ಇಲ್ಲಿ ಶಿವಪ್ರಕಾಶ್ ಅವರ ವ್ಯಕ್ತಿತ್ವವನ್ನು ಮೂರು ಹಂತಗಳಲ್ಲಿ ಸಂಗ್ರಹಿಸಲಾಗಿದ್ದು, ಮೊದಲನೆಯ ಬದುಕು ಭಾಗದಲ್ಲಿ ಅವರ ಬದುಕಿನ ಪ್ರಾಥಮಿಕ ವಿವರ, ಆತ್ಮನಿವೇದನೆ, ವೈಯಕ್ತಿಕ ಒಡನಾಟಗಳ ಮೂಲಕ ವಿವರಗಳನ್ನು ತೆರೆದಿಡಲಾಗಿದೆ. ಶಿವಪ್ರಕಾಶ್ ಅವರನ್ನು ಕವಿಯಾಗಿ ರೂಪಿಸಿದ ಅವರ ಬಾಲ್ಯ, ಪರಿಸರ, ಒಡನಾಟಗಳ ಕಥನಗಳು ಇಲ್ಲಿವೆ. ವಿವಿಧ ಸಾಹಿತಿಗಳು, ಲೇಖಕರ ಮೂಲಕವೂ ಶಿವಪ್ರಕಾಶ್ ಅವರನ್ನು ಕಟ್ಟಿಕೊಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಎರಡನೇ ಅಧ್ಯಾಯ ಅವರ ಬರಹಗಳಿಗೆ ಮೀಸಲಾಗಿದೆ. ಕಾವ್ಯ, ನಾಟಕ, ವಿಮರ್ಶ, ಆತ್ಮಕಥೆ, ಅನುವಾದ, ಸಂಪಾದನೆ, ಅಂಕಣ ಬರಹ ಹೀಗೆ ಶಿವಪ್ರಕಾಶ್ ತೊಡಗಿಕೊಂಡಿರುವ ಅಗಾಧ ಸಾಹಿತ್ಯಕ ಕಾರ್ಯಗಳನ್ನು ಬೇರೆ ಬೇರೆ ನೆಲೆಗಳಲ್ಲಿ ಪರಿಚಯಿಸಲಾಗಿದೆ. ಮೂರನೇ ಅಧ್ಯಾಯದಲ್ಲಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ತಂದುಕೊಟ್ಟ 'ಮಬ್ಬಿನ ಹಾಗೆ ಕಣಿವೆಯಾಸಿ' ಕೃತಿಯನ್ನು ಮುಖ್ಯವಾಗಿಟ್ಟುಕೊಂಡು ವಿಶ್ಲೇಷಿಸಲಾಗಿದೆ.

About the Author

ಬಿದರಹಳ್ಳಿ ನರಸಿಂಹಮೂರ್ತಿ
(05 February 1950)

ಕವಿ, ಕತೆಗಾರ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಸಂಪಾದಕ, ಅನುವಾದಕ ಹೀಗೆ ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಬಿದರಹಳ್ಳಿ ನರಸಿಂಹಮೂರ್ತಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ. ಇಂಗ್ಲಿಷ್ ಉಪನ್ಯಾಸಕರಾಗಿ ಸರ್ಕಾರಿ ಸೇವೆಗೆ ಸೇರಿ ಪ್ರಿನ್ಸಿಪಲ್ ಆಗಿ ನಿವೃತ್ತರಾಗಿ ಹೊನ್ನಾಳಿಯಲ್ಲೇ ನೆಲೆಸಿದ್ದ ಬಿದರಹಲ್ಳಿಯವರು ಹೆಚ್ಚೂ ಕಡಿಮೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿಮಾಡಿದ್ದಾರೆ. ಅವರ ಪ್ರಕಟಿತ ಕೃತಿಗಳು:  ಕಾವ್ಯ: ಕಾಡಿನೊಳಗಿದೆ ಜೀವ(1979), ಸೂರ್ಯದಂಡೆ(1996), ಅಕ್ಕಿಕಾಳು ನಕ್ಕಿತಮ್ಮ(2001),  ಭಾವಕ್ಷೀರ(2006), ಅಕ್ಕನೆಂಬ ಅನುಭಾವಗಂಗೆ(2017) ಕಥಾಸಂಕಲನ: ಶಿಶು ಕಂಡ ಕನಸು(1993, 2005), ಹಂಸೆ ಹಾರಿತ್ತು(2000, 2010), ನೀರಾಳ ಸೊಲ್ಲು(2017), ಸಸಿಯ ...

READ MORE

Related Books