ಪಿ. ಲಂಕೇಶ್

Author : ಹಾಲತಿ ಸೋಮಶೇಖರ್‌

Pages 112

₹ 80.00




Year of Publication: 2017
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 7353530805 / 080 - 20161913

Synopsys

’ಆನೆ ನಡೆದದ್ದೇ ಹಾದಿ’ ಎಂಬಂತೆ ಸೃಜನಾತ್ಮಕವಾಗಿ ಚಲಿಸಿದವರು ಪಿ. ಲಂಕೇಶ್‌. ಸಾಹಿತ್ಯ, ಅಧ್ಯಾಪನ, ಪತ್ರಿಕೋದ್ಯಮ, ಸಿನಿಮಾ, ರಂಗಭೂಮಿ, ಅನುವಾದ ಹೀಗೆ ಅವರು ಕೈಯಾಡಿಸದ ಕ್ಷೇತ್ರಗಳೇ ಇಲ್ಲ. ಸುಮಾರು ಎರಡು ದಶಕಗಳ ಕಾಲ ಕನ್ನಡದ ಮಟ್ಟಿಗೆ ಒಂದು ವಿದ್ಯಮಾನವೇ ಆಗಿದ್ದವರು ಲಂಕೇಶ್. ಸದಾ ಒಂದಿಲ್ಲೊಂದು ಹೋರಾಟಗಳಿಂದಾಗಿ ಸುದ್ದಿಯಲ್ಲಿರುತ್ತಿದ್ದ ಲಂಕೇಶರು ರಾಜಕೀಯ ಸಾಹಸಕ್ಕೂ ಮುಂದಾದವರು. ಕರ್ನಾಟಕ ಪ್ರಗತಿ ರಂಗ ಅವರ ನೇತೃತ್ವದಲ್ಲಿ ಹುಟ್ಟಿದ ರಾಜಕೀಯ ಸಂಘಟನೆ. ಈಗಲೂ ಯುವ ಲೇಖಕರು, ಪತ್ರಕರ್ತರ ಪಾಲಿಗೆ ಸ್ಫೂರ್ತಿಯ ಚಿಲುಮೆ. ಅವರ ’ಕಲ್ಲು ಕರಗುವ ಸಮಯ’ ಕಥಾಸಂಕಲನ 1993ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಪಾತ್ರವಾಗಿದೆ. 

ಕೃತಿಯಲ್ಲಿ ಹಾಲತಿ ಸೋಮಶೇಖರ್‌ ಲಂಕೇಶ್ ಅವರ ಬದುಕು, ಬರಹವನ್ನು ಕಟ್ಟಿಕೊಟ್ಟಿದ್ದಾರೆ. 

About the Author

ಹಾಲತಿ ಸೋಮಶೇಖರ್‌
(25 February 1963)

ಖ್ಯಾತ ಕತೆಗಾರ-ಪತ್ರಕರ್ತ ಪಿ. ಲಂಕೇಶ್ ಅವರ ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಿರುವ ಡಾ. ಹಾಲತಿ ಸೋಮಶೇಖರ ಅವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹಾಲತಿಯವರು. 1963ರ ಫೆಬ್ರುವರಿ 25ರಂದು ಜನಿಸಿದ ಅವರು ಎಂ.ಎ., ಪಿಎಚ್.ಡಿ., ಎಂ.ಎಡ್. ಮಾಡಿ ಶಿಕ್ಷಣಾಧಿಕಾರಿ ಆಗಿದ್ದಾರೆ. ಪಿ. ಲಂಕೇಶ, ಮಹಿಳಾ ಚಳವಳಿ, ಸ್ತ್ರೀಪರ, ಓದುವ ಸುಖ, ಸಾಯೋಆಟ-ವಿಮರ್ಶೆ (ವಿಮರ್ಶೆ) ಅವರ ಪ್ರಕಟಿತ ಕೃತಿಗಳು. ಪಿ. ಲಂಕೇಶ ಸಾಹಿತ್ಯ  ಅವರ ಪಿಎಚ್.ಡಿ. ಮಹಾಪ್ರಬಂಧ. ...

READ MORE

Related Books