ಡಿ.ಆರ್. ನಾಗರಾಜ

Author : ವಿ. ಚಂದ್ರಶೇಖರ ನಂಗಲಿ

Pages 96

₹ 60.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: ನವಕರ್ನಾಟಕ ಪಬ್ಲಿಕೇಷನ್ಸ್‌ (ಪ್ರೈ.) ಲಿ. ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: (080-22203580/01/02)

Synopsys

ಕನ್ನಡದ ಅನನ್ಯ ವಿಮರ್ಶಕರಲ್ಲಿ ಒಬ್ಬರಾಗಿದ್ದ ಡಿ.ಆರ್‌. ನಾಗರಾಜ ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಮಿಂಚಬಹುದಾಗಿದ್ದ ಪ್ರತಿಭೆ. ಅವರ ಅಕಾಲಿಕ ಮರಣ ಕನ್ನಡ ಲೋಕವನ್ನು ಬರಡಾಗಿಸಿದ್ದು ಸುಳ್ಳಲ್ಲ. 

’ಅಮೃತ ಮತ್ತು ಗರುಡ’, ’ಶಕ್ತಿ ಶಾರದೆಯ ಮೇಳ’, 'The flaming poet', ’ನಾಗಾರ್ಜುನ’, 'Recreating each other', ’ಸಾಹಿತ್ಯ ಕಥನ’, ’Shiva’s plight’,  ’ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ’ ಅವರ ಪ್ರಮುಖ ಕೃತಿಗಳು.  ’ಕತ್ತಲೆ ದಾರಿ ಬಹುದೂರ’  ಅವರ ನಾಟಕ ಕೃತಿ. 

’ಅಮೃತ ಮತ್ತು ಗರುಡ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ. ಆರ್ಯಭಟ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ ಅವರಿಗೆ ದೊರೆತ ಇನ್ನಿತರ ಗೌರವಗಳು. 

ಅವರ ಬದುಕು ಬರಹವನ್ನು ಈ ಕೃತಿಯ ಮೂಲಕ ಪರಿಚಯಿಸಿದ್ದಾರೆ ಸಾಹಿತಿ ವಿ ಚಂದ್ರಶೇಖರ ನಂಗಲಿ. 

About the Author

ವಿ. ಚಂದ್ರಶೇಖರ ನಂಗಲಿ
(24 September 1956)

ಡಾ.ವಿ.ಚಂದ್ರಶೇಖರ ನಂಗಲಿ  ಅವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಇವರು  ಶ್ರೀಮತಿ ಗೌರಮ್ಮ ಮತ್ತು ಶ್ರೀ ವೆಂಕಟಾಚಲಪತಿ. ಎನ್, ಇವರ ಮಗನಾಗಿ 24.09.1956 ರಂದು ಜನಿಸಿದರು. ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆಯಲ್ಲಿ. ಬೆಳೆದದ್ದು ಕೋಲಾರ ಜಿಲ್ಲೆಯ ಮುಳುಬಾಗಲ್ ತಾಲೂಕಿನ ಗಡಿಗ್ರಾಮ ನಂಗಲಿ/ ನಂಗ್ಲಿಯಲ್ಲಿ. ನಂಗಲಿ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಬಿ.ಎಚ್.ಎಸ್ ಶಾಲೆಯಲ್ಲಿ ಪಡೆದರು. ತಮ್ಮ ಎಂ.ಎ (ಕನ್ನಡ) ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದುಕೊಂಡರು. ಭಾಷಾವಿಜ್ಞಾನದಲ್ಲಿ ಚಿನ್ನದಪದಕವನ್ನೂ ಗಳಿಸಿದ ಕೀರ್ತಿಗೆ ಪಾತ್ರರಾದರು. ಕನ್ನಡದಲ್ಲಿ ಚಾರಣ ಸಾಹಿತ್ಯ - ಒಂದು ಸಾಂಸ್ಕೃತಿಕ ಅಧ್ಯಯನ ಎಂಬ ವಿಷಯದ ...

READ MORE

Related Books