ರಾಘವೇಂದ್ರ ಪಾಟೀಲ

Author : ಚಿಂತಾಮಣಿ ಕೊಡ್ಲೆಕೆರೆ

Pages 120

₹ 60.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022161900

Synopsys

ಕತೆಗಾರ ರಾಘವೇಂದ್ರ ಪಾಟೀಲರು ತಮ್ಮ ಕತೆ-ಕಾದಂಬರಿಗಳಿಂದ ಗಮನ ಸೆಳೆದವರು. ಅವರ ’ತೇರು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿತ್ತು. ರಾಘವೇಂದ್ರ ಪಾಟೀಲರ ಜೀವನ ಹಾಗೂ ಅವರ ಕೃತಿಗಳ ಪರಿಚಯವನ್ನು ಚಿಂತಾಮಣಿ ಕೊಡ್ಲೆಕೆರೆ ಅವರು ಮಾಡಿದ್ದರು.

About the Author

ಚಿಂತಾಮಣಿ ಕೊಡ್ಲೆಕೆರೆ
(13 January 1961)

ಚಿಂತಾಮಣಿ ಕೊಡ್ಲೆಕೆರೆ ಅವರು 1961 ಜನವರಿ 13ರಂದು ಗೋಕರ್ಣ ಬಳಿಯ ಅಘನಾಶಿನಿ ಗ್ರಾಮದಲ್ಲಿ ಜನಿಸಿದರು. ತಂದೆ ಎಂ.ಎ. ಭಟ್ಟ. ತಾಯಿ ರಾಧೆ. ಹಿರೇಗುತ್ತಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಧಾರವಾಡದಲ್ಲಿ ಬಿಎಸ್‌ಸಿ ಪದವಿ ಪಡೆದರು. ತ್ರಿವೆಂಡ್ರಮ್‌ನಲ್ಲಿ ಟೆಲಿ ಕಮ್ಯುನಿಕೇಶನ್ಸ್‌ನಲ್ಲಿ ಒಂದು ವರ್ಷದ ಇಂಜಿನಿಯರಿಂಗ್ ತರಬೇತಿ ಹಾಗೂ ಬೆಂಗಳೂರಿನಲ್ಲಿ ಎಂ.ಬಿ.ಎ ಪದವಿ ಪಡೆದರು.  ಬಾಲ್ಯದಿಂದಲೂ ಸಾಹಿತ್ಯಾಸಕ್ತಿ ಇದ್ದ ಕೊಡ್ಲೆಕೆರೆ ಅವರು ಮಾಸ ಪತ್ರಿಕೆಗಳಿಗೆ ಹನಿಗವನಗಳನ್ನು ಬರೆಯಲು ಆರಂಭಿಸಿದರು. ಕನ್ನಡಪ್ರಭ, ವಿಜಯಕರ್ನಾಟಕ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಇವರು ಬರೆದ ಅಂಕಣ, ಕತೆ, ಕವನಗಳಿಗೆ ಬಹುಮಾನವನ್ನು ಪಡೆದಿದ್ದಾರೆ.  ಇವರ ಪ್ರಮುಖ ಕೃತಿಗಳೆಂದರೆ ...

READ MORE

Reviews

(ವಿಮರ್ಶೆ ಜೂನ್ 2013, ಹೊಸತು)

ಕವಿ-ಲೇಖಕರ ಕುರಿತ ಕೃತಿಗಳು ಕಟ್ಟಿಕೊಡುವ ಚಿತ್ರಣ ಹಾಗೂ ನೀಡುವ ಮಾಹಿತಿ ನೈಜತೆಯಿಂದ ಕೂಡಿದ್ದು ವಸ್ತುನಿಷ್ಠವಾಗಿದ್ದಾಗ ಮಾತ್ರ ಅವು ಸರ್ವರನ್ನೂ ತಲುಪುತ್ತದೆ. ಇಂತಹ ನೈಜಕೃತಿಯೇ ಇದು. ನವಕರ್ನಾಟಕದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕನ್ನಡ ಲೇಖಕರು' ಮಾಲೆಯ ಈ ಕೃತಿ ರಾಘವೇಂದ್ರ ಪಾಟೀಲರ ಬದುಕು-ಬರಹವನ್ನು ಪರಿಚಯಿಸುತ್ತದೆ. ವಿಜ್ಞಾನ ಅಧ್ಯಾಪಕರಾದ ಪಾಟೀಲರ ಸಾಹಿತ್ಯ ಸೇವೆ ಮನನೀಯ ಹಾಗೂ ಶ್ಲಾಘನೀಯ. ಕನ್ನಡ ಸಾಹಿತ್ಯದ ಬಹುಚರ್ಚಿತ ನವೋದಯ ಲೇಖಕರಲ್ಲೊಬ್ಬರು. ಚರಿತ್ರೆ ಹಾಗೂ ಕಲ್ಪಕಥೆಗಳನ್ನು ಒಂದು ಹದದಲ್ಲಿ ಸಂಯೋಜಿಸುವುದು ಪಾಟೀಲರ ಭಿನ್ನ ತಂತ್ರಗಾರಿಕೆ. ಚರಿತ್ರೆ ಹಾಗೂ ವರ್ತಮಾನವನ್ನು ಒಟ್ಟಾರೆ ನೋಡುವ ಇವರ ಬರಹಗಳು ಗ್ರಾಮೀಣ ಸಾಮುದಾಯಿಕ ದೃಷ್ಟಿಯುಳ್ಳವಾಗಿ ಆಧುನಿಕತೆಯಿಂದ ಕೂಡಿವೆ. ಯಾವುದೋ ಒಂದು ಸಿದ್ಧಾಂತಕ್ಕೆ, ತತ್ವಗಳ ಹಿಡಿತಕ್ಕೊಳಪಡದ ನಿರ್ಲಿಪ್ತತೆಯನ್ನೂ, ಸ್ವಾತಂತ್ರ್ಯವನ್ನೂ ಇವರ ಸಾಹಿತ್ಯದಲ್ಲಿ ಕಾಣಬಹುದು. ಸಾಹಿತ್ಯದ ಮುಖ್ಯ ಗುರಿ ಸಮಾಜ ಚಿತ್ರಣವೇ ಆದರೂ ಅತಿಯಾದ ಸಾಮಾಜಿಕತೆ ಲೇಖಕನ ವಾಸ್ತವ ಪ್ರಜ್ಞೆಯನ್ನು ಕಲುಷಿತಗೊಳಿಸಿ, ನಿಯಂತ್ರಿಸುತ್ತದೆ ಎಂದು ಭಾವಿಸುವ ಪಾಟೀಲರು ವಾಸ್ತವವನ್ನೇ ಎಷ್ಟು ವಾಸ್ತವ ಎಂಬ ಪ್ರಶ್ನೆಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಲು ಯತ್ನಿಸುವ ಕಥೆಗಾರ, ಸಾಹಿತ್ಯ ಮತ್ತು ಸಾಮಾಜಿಕ ವಾಸ್ತವದ ಚರ್ಚೆಯನ್ನು ಕನ್ನಡದ ಮಟ್ಟಿಗೆ ಬೇರೆಯದೇ ನೆಲೆಗೆ ಕೊಂಡೊಯ್ಯುತ್ತಾರೆ. ಪಾಟೀಲರ ಸಾಹಿತ್ಯದಲ್ಲಿ ಗೆಲವು, ಸಂತೋಷಗಳಿಗಿಂತ ಸೋಲುಗಳ ನರಕವೇ ತುಂಬಿಗೊಂಡಿದೆ. ಬಡತನ, ಜಮೀನ್ದಾರಿಯ ದಬ್ಬಾಳಿಕೆ, ಹಸಿವು, ದ್ವೇಷ, ಅಸೂಯೆ, ಸ್ವಾರ್ಥ ಮುಂತಾಗಿ ಸಮಾಜದ ಚಿತ್ರಣವೇ ಅವರ ಕಥೆ-ಕಾದಂಬರಿಗಳ ಧಾತುವಾಗಿದೆ. ಒಟ್ಟಾರೆ ಪ್ರಸ್ತುತ ಕೃತಿ ಪಾಟೀಲರ ಸುಮಾರು ೧೯ ಕೃತಿಗಳ ಪರಿಚಯದ ಜೊತೆಗೆ ಮೌಲಿಕ ಚರ್ಚೆಯನ್ನು ಒಳಗೊಂಡಿದ್ದು, ಅವರ ಬದುಕಿನ ಹಲವು ಪ್ರಮುಖ ಘಟ್ಟಗಳನ್ನು ಹಾಗೂ ಅವರ ಸಮಗ್ರ ಸಾಹಿತ್ಯ ಚಿಂತನೆಯನ್ನು ನೀಡುವ ಪ್ರಮುಖ ಕೃತಿ.

Related Books