ದಲಿತ ಚಳವಳಿ

Author : ಸಣ್ಣರಾಮ

Pages 348

₹ 350.00




Year of Publication: 2016
Published by: ನೇಕಾರ ಪ್ರಕಾಶನ
Address: ಗುರುಮಂದಿರ ರಸ್ತೆ, ಸೊರಬ – 577429, ಶಿವಮೊಗ್ಗ ಜಿಲ್ಲೆ
Phone: 9141833556

Synopsys

ಡಾ. ಸಣ್ಣರಾಮ ಅವರು ಬರೆದಿರುವ ಕೃತಿ ’ದಲಿತ ಚಳವಳಿ’ಯು ನಾಲ್ಕು ದಶಕಗಳ ಹಿಂದೆ ನಾಡು ಕಂಡ ಅಪರೂಪದ ಸಂಘಟನೆ ಮತ್ತು ಚಳವಳಿಯ ಹೋರಾಟದ ಕಥನವನ್ನು ಚಿತ್ರಿಸಿದೆ.

ಪ್ರೊ. ಬಿ. ಕೃಷ್ಣಪ್ಪನವರಿಂದ ಸಂಸ್ಥಾಪನೆಯಾದ ದಲಿತ ಸಂಘರ್ಷ ಸಮಿತಿ ನಡೆಸಿದ ಹೋರಾಟ, ಪ್ರತಿಭಟನೆಗಳ ಗತದ ಚಿತ್ರಣವನ್ನು ವರ್ತಮಾನಕ್ಕೆ ಸಣ್ಣರಾಮರು ನಿರೂಪಿಸಿದ್ದಾರೆ.  ಇದರ ಜೊತೆಗೆ ಪ್ರೊ. ಬಿ. ಕೃಷ್ಣಪ್ಪನವರ ಚಿಂತನೆ, ಅವರ ಒಡನಾಟ ಇಡೀ ಕೃತಿಯಲ್ಲಿ ವಿಸ್ತರಿಸಿದೆ.

ಈ ಕೃತಿ ಕೇವಲ ಚರಿತ್ರೆಯ ದಾಖಲಾತಿಯಾಗದೆ ದಲಿತ ಸಮುದಾಯದ ಅಭಿವೃದ್ದಿಯ ಕಡೆ ಗಮನ ಹರಿಸುತ್ತದೆ.  ದಲಿತ ಸಂಘರ್ಷ ಸಮಿತಿ ತಾತ್ವಿಕವಾಗಿ ಸಂಘಟನಾತ್ಮಕವಾಗಿ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಳ್ಳದೇ ಸಂಘಟನೆಗೆ ಆದ ಗಾಯದ ಕಥಾನಕವನ್ನು ಇಲ್ಲಿ ಲೇಖಕರು ಕಟ್ಟಿಕೊಡುತ್ತಾರೆ.

About the Author

ಸಣ್ಣರಾಮ
(03 May 1954)

ಪ್ರೊ. ಸಣ್ಣರಾಮ ಅವರು 1954 ಮೇ 03 ಶಿವಮೊಗ್ಗ ಜಿಲ್ಲೆಯ, ಸೊರಬ ತಾಲೂಕಿನ ಕೋಟಿಪುರ ತಾಂಡದಲ್ಲಿ ಜನಿಸಿದರು. ಅಕ್ಷರಲೋಕದ ಪರಿಚಯವಿಲ್ಲದ ಕುಟುಂಬದಿಂದ ಬಂದ ಸಣ್ಣರಾಮ, ಎಂ. ಎ. ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದಲೂ, ಪಿಹೆಚ್.ಡಿ ಪದವಿಯನ್ನು ಕುವೆಂಪು ವಿಶ್ವವಿದ್ಯಾನಿಲಯದಿಂದ ಪಡೆದರು. ಒಟ್ಟು 35 ವರ್ಷಗಳು ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ಧಾರೆ. ಸುದೀರ್ಘ ಸೇವಾವಧಿಯಲ್ಲಿ ಅಧ್ಯಯನ, ಅಧ್ಯಾಪನ, ಸಂಶೋಧನೆಯಲ್ಲಿ ಕ್ರಿಯಾಶೀಲರಾಗಿದ್ದ ಸಣ್ಣರಾಮ ಅವರು 13 ಜನ ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಹೆಚ್‍ಡಿ ಪದವಿ, 4 ಜನ ವಿದ್ಯಾರ್ಥಿಗಳಿಗೆ ಎಂ.ಫಿಲ್ ಪದವಿ ಮಾರ್ಗದರ್ಶನ ನೀಡಿದ್ದಾರೆ. ಕರ್ನಾಟಕ ಸರ್ಕಾರ 2008ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸಣ್ಣರಾಮ ...

READ MORE

Related Books