ಕಬಿನಿ ಪಾದಯಾತ್ರೆ

Author : ಪೂರೀಗಾಲಿ ಮರಡೇಶಮೂರ್ತಿ

Pages 70

₹ 50.00




Year of Publication: 2011
Published by: ಕಾಯಕ ಪ್ರಕಾಶನ
Address: ಬೆಂಗಳೂರು

Synopsys

ಕಬಿನಿ ಪಾದಯಾತ್ರೆಯ ಬೃಹತ್ ಹೋರಾಟದ ಒಂದು ಸಂಪೂರ್ಣ ವರದಿ ‘ಕಬಿನಿ ಪಾದಯಾತ್ರೆ’. ಲೇಖಕ ಪೂರೀಗಾಲಿ ಮರಡೇಶ ಮೂರ್ತೀ ಅವರು ಬರೆದಿದ್ದಾರೆ. ಕನ್ನಡಿಗರ ಮನೆಮನಗಳಲ್ಲಿ ಕಾವೇರಿಯದ್ದೇ ಕಂಬನಿ. ಅಂತೆಯೇ ಕಾವೇರಿ ಸಮಸ್ಯೆಯಂತೆ ಕಬಿನಿ ಚಳವಳಿಯೂ ದಾಖಲಾರ್ಹವೆ. ಏಕೆಂದರೆ ಕಾವೇರಿ ತೀರ್ಪಿನ ನಂತರ ಮತ್ತೆ ಕಾವೇರಿ ಕಣಿವೆಗೆ ಬೆಂಕಿ ಬಿದ್ದಿದೆ. 2003ರ ಕಾವೇರಿ ಚಳವಳಿ ಮಗ್ಗುಲು ಬದಲಿಸಿದೆ. ಇಂತಹ ಜಾಡಿನಲ್ಲೇ ಬಂದಿದ್ದು ಕಬಿನಿ ಪಾದಯಾತ್ರೆ.

About the Author

ಪೂರೀಗಾಲಿ ಮರಡೇಶಮೂರ್ತಿ
(06 June 1966)

ಕವಿ, ಕಾದಂಬರಿಕಾರ ಪೂರೀಗಾಲಿ ಮರಡೇಶಮೂರ್ತಿ ಅವರು ಮೂಲತಃ ಮಂಡ್ಯದವರು. ವಚನ ಸಾಹಿತ್ಯದಲ್ಲಿ ತಮ್ಮೊಳಗಿನ ಅರಿವನ್ನು ಅಭಿವ್ಯಕ್ತಿಸಿದ್ದಾರೆ. ಕನ್ನಡ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ’ಸಿಂಧೂರ ಬಿಂದು’ ಅವರ ಮೊದಲ ಕಾದಂಬರಿ. ಸುಮಾರು  3 ದಶಕಗಳ ಕಾಲ ಸಾಹಿತ್ಯ ಕೈಂಕರ್ಯ ನಡೆಸಿರುವ ಇವರು 50 ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ಮೈಸೂರು ರತ್ನ ಸಾಂಸ್ಕೃತಿಕ ಪ್ರತಿಷ್ಠಾನದಡಿ 25 ವರ್ಷಗಳಿಂದ ಯುವಪೀಳಿಗೆಗೆ ಸಾಹಿತ್ಯ ಕಾರ್ಯಕ್ರಮಗಳನ್ನು ವೈಚಾರಿಕ ನೆಲೆಗಟ್ಟಿನಲ್ಲಿ ನಡೆಸುತ್ತಾ ಬಂದಿದ್ದಾರೆ. ’ನೀಲಿಬಾನಿನ ತಾರೆಗಳು, ಹನಿಗಳು, ಕಾವ್ಯಕನ್ನಿಕೆ’ ಅವರ ಪ್ರಮುಖ ಕವನ ಸಂಕಲನಗಳು. ’ಒಲವಿನ ಕನಸು, ಅವಳು ಭೂಮಿಕೆ, ಸುಳಿ, ಸೂರ್ಯ ...

READ MORE

Related Books