ದಲಿತ ಹೋರಾಟ ದರ್ಶನ

Author : ವಿ. ಮುನಿವೆಂಕಟಪ್ಪ

Pages 504

₹ 504.00




Year of Publication: 2013
Published by: ಲಿಖಿತ ಪ್ರಕಾಶನ
Address: # 654/2, 1ನೇ ಮಹಡಿ, 1ನೇ ಮುಖ್ಯರಸ್ತೆ, ಬಿ.ಬಿ. ಗಾರ್ಡನ್ ರಸ್ತೆ, ಫೋರ್ಟ್ ಮೊಹಲ್ಲಾ, ಪದ್ಮ ಟಾಕೀಸ್ ಸಮೀಪ, ಮೈಸೂರು-04.

Synopsys

ಲೇಖಕ, ಚಿಂತಕ ಡಾ. ವಿ. ಮುನಿವೆಂಕಟಪ್ಪ ಅವರು ಸಂಪಾದಿಸಿದ ಕೃತಿ-ದಲಿತ ಹೋರಾಟ ದರ್ಶನ. ಕರ್ನಾಟಕದಲ್ಲಿ ದಲಿತ ಹೋರಾಟದ ಆರಂಭವು ಅಂದಿನ ಸಾಮಾಜಿಕ ಒತ್ತಡದ ಸನ್ನಿವೇಶಗ:ಳ ಸೃಷ್ಟಿ. ಬಂಡಾಯ ಸಾಹಿತ್ಯವು ದಲಿತ ಸಾಹಿತ್ಯಕ್ಕಿಂತ ಭಿನ್ನ. ಹಾಗೆಯೇ ಹೋರಾಟವೂ ಸಹ. ಬಂಡಾಯ ಸಾಹಿತ್ಯ ಎಷ್ಟೇ ದಲಿತ ಪರ ಇದೆ ಎಂದರೂ ದಲಿತರ ನೋವುಗಳ ಸ್ವರೂಪವೇ ಬೇರೆ. ದಲಿತರೇ ಬರೆದ ಸಾಹಿತ್ಯಕ್ಕೆ ತನ್ನದೇ ಆದ ಸಾಮಾಜಿಕ ಮಹತ್ವ ಇರುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆರಂಭವಾದ ದಲಿತ ಹೋರಾಟದ ಸ್ವರೂಪವನ್ನು, ಅದರ ಏಳು-ಬೀಳುಗಳನ್ನು ಒಂದು ಕಡೆ ಇಟ್ಟು ಪರಿಶೀಲಿಸುವ ಕೃತಿ ಇದು. ರಾಜ್ಯದ ವಿವಿಧೆಡೆಯಿಂದ ಸರಣಿ ರೂಪದಲ್ಲಿ ಬಂದ ಲೇಖನಗಳನ್ನು ಒಂದೆಡೆ ಸಂಗ್ರಹಿಸಿದ್ದರ ಫಲವಾಗಿ ಈ ಕೃತಿ ಮೂಡಿಬಂದಿದೆ.

About the Author

ವಿ. ಮುನಿವೆಂಕಟಪ್ಪ

ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...

READ MORE

Related Books