ಉದಯಾಸ್ತ

Author : ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ (ತಿರುಕ)

Pages 160

₹ 120.00




Year of Publication: 1976
Published by: ಅನಾಥ ಸೇವಾಶ್ರಮ ವಿಶ್ವಸ್ತ ಸಮಿತಿ
Address: ಮಲ್ಲಾಡಿಹಳ್ಳಿ- 577531

Synopsys

‘ಉದಯಾಸ್ತ’ ತಿಲಕ ಅವರ ಸಾಮಾಜಿಕ ಕಾದಂಬರಿಯಾಗಿದೆ. ಸ್ಟೇಷನಿನ ಮಾಸ್ತರರಿಂದ ಶುರುವಾಗುವ ಈ ಕತೆಯು ಬಹಳಷ್ಟು ವಿಚಾವರನ್ನು ತನ್ನೊಳಗಿನ ಪಾತ್ರಗಳಿಗೆ ನೀಡಿ ಜೀವಂತಿಕೆಯನ್ನು ಮೆರೆಸುತ್ತದೆ. ಭಾಷಾ ಬಳಕೆಯ ಶೈಲಿಯು ಭಿನ್ನವಾಗಿ ಮೂಡಿ ಬಂದಿದ್ದು, ಭಾಷೆಯೇ ಸಂಭಾಷಣೆಗಳಿಗೆ ಮತ್ತಷ್ಟು ಪುಷ್ಠಿಯನ್ನು ನೀಡಿದೆ. ಈ ಕೃತಿಯಲ್ಲಿನ ಆಯ್ದ ಭಾಗ: ಸಾಹೇಬರ ಮಾತಿನ ಜಾಡು ಈಗ ಎಡ್‌ವಿನ್‌ಗೆ ಚೆನ್ನಾಗಿ ಹೊಳೆಯಿತು. ಅವನು ಯಾರೋ ಗೋಪಾಲಯ್ಯನ ಮೇಲೆ ಮೂಕ ಕೊಟ್ಟಿರಬೇಕೆಂದು ಅರ್ಥಮಾಡಿಕೊಂಡನು. ಒಡನೆಯೇ ಆತನು ಸಂಜೀವಯ್ಯ ಚಂಪೆಯರು ಚಿಕ್ಕಜಾಜೂರಿನಲ್ಲಿ ಕಾಲಿಟ್ಟಂದಿನಿಂದ ಅಂದಿನವರೆಗೆ ನಡೆದ ಎಲ್ಲ ಸಂಗತಿಯನ್ನೂ ವಿವರವಾಗಿ ಸಾಹೇಬರಿಗೆ ತಿಳಿಸಿ, ದುಂಡಪ್ಪನ ಕೃಷ್ಣ ಕಾರ ಸ್ಥಾನವನ್ನೆಲ್ಲ ಅವರಲ್ಲಿ ಶೃತಪಡಿಸಿದನು. ಸಾಹೇಬರು ನಕ್ಕು ನನಗೊಂದು ಕೆಲಸ ಕೊಟ್ಟರು” ಎಂದರು. ಎಂದರು. ಎಡ್‌ವಿನ್‌ನು “ ತೊಂದರೆ ಯಾಗಲಿಲ್ಲವಲ್ಲಾ ಅನಾಯಾಸವಾಗಿ ಅವಳ ಸ೦ಗಿತ ಕೇಳಬಹುದು ಎಂದನು. * ನಮಗೇಕಪ್ಪಾ ಸಂಗೀತ-ಅದೆಲ್ಲ ನಿಮ್ಮಂತಹ ಹುಡುಗರಿಗೆ ” ಎಂದು ಎಡ್‌ವಿನ್‌ನನ್ನು ಬೀಳ್ಕೊಟ್ಟರು ಮ್ಯಾಥನ್ ಸಾಹೇಬರು.

About the Author

ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ (ತಿರುಕ)
(18 March 1891 - 04 August 1996)

ಕೇರಳದಲ್ಲಿ ಹುಟ್ಟಿ, ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿ ಹಳ್ಳಿಯಲ್ಲಿದ್ದು, ತಿರುಕ ಎಂ ಕಾವ್ಯನಾಮದೊಂದಿಗೆ ಬೆಳೆದವರು. ತಂದೆ ಅನಂತ ಪದ್ಮನಾಭ ನಂಬೂದರಿ, ತಾಯಿ ಪದ್ಮಂಬಾಳ್. ಈ ಮಗುವಿಗೆ ದೇಹ ವಿಕಾರ ಹಾಗೂ ಮೆದುಳಿನ ಬೆಳವಣಿಗೆ ಸರಿಯಾಗಿರಲಿಲ್ಲ. ಮೂಕಾಂಬಿಕ ದರ್ಶನಕ್ಕೆ ಬಂದಿದ್ದ ದಂಪತಿ ಬಾರಕೂರಿನಲ್ಲಿ ತಂಗಿದ್ದರು. ಆ ಹಾದಿಯಲ್ಲಿ ಉಡುಪಿಗೆ ಹೊರಟಿದ್ದ ಮಂತ್ರಾಲಯದ ಪೀಠಸ್ಥ ಸ್ವಾಮಿಗಳು ಈ ಮಗುವನ್ನು ಕಂಡು ಕೀರ್ತಿವಂತನಾಗುವುದಾಗಿ ಹರಸುತ್ತಾರೆ.  ತಂದೆ ಈ ಮಗುವನ್ನು ಸಾಕಲಾಗದೆ ಅತಿಥೇಯರಾಗಿದ್ದ ನರಸಿಂಹಯ್ಯ – ಪುತಲೀ ಬಾಯಿ ಅವರಿಗೆ ದತ್ಯತು ಕೊಟ್ಟು ಯಾತ್ರೆ ಹೊರಡುತ್ತಾರೆ. ಈ ಮಗು ಮುಂದೆ ರಾಘವೇಂದ್ರ ಎಂದು ನಾಮಕರಣವಾಗುತ್ತದೆ. ಕುಂದಾಪುರದ ಶಾಲೆಗೆ. ...

READ MORE

Related Books