ಮಕ್ಕಳಿಗಾಗಿ ತತ್ವಚಿಂತನೆ

Author : ಮಾಧವ ಚಿಪ್ಪಳಿ

Pages 80

₹ 260.00




Year of Publication: 2021
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು ಕರ್ನಾಟಕ- 577417
Phone: 9480280401

Synopsys

‘ಮಕ್ಕಳಿಗಾಗಿ ತತ್ವಚಿಂತನೆ’ ಕೃತಿಯು ಸುಂದರ್ ಸರುಕ್ಕೈ ಅವರ ಮೂಲ ಕೃತಿಯಾಗಿದ್ದು, ಲೇಖಕ ಮಾಧವ ಚಿಪ್ಪಳಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರಿಯಾ ಕುರಿಯನ್ ಅವರು ಈ ಕೃತಿಯಲ್ಲಿನ ಚಿತ್ರಗಳನ್ನು ಬರೆದಿರುತ್ತಾರೆ. ಈ ಕೃತಿಯಲ್ಲಿ ಒಟ್ಟು ಎಂಟು ಸಾಧನಗಳಿದ್ದು, ತತ್ವಚಿಂತನೆಯೇ ಈ ವಿಚಾರಗಳ ಮೂಲ ಧ್ಯೇಯವಾಗಿದೆ. ನೋಡುವುದು, ಯೋಚಿಸುವುದು, ಬರೆಯುವುದು, ಓದುವುದು, ಗಣಿತ, ಕಲೆ, ಬೀಯಿಂಗ್ ಗುಡ್, ಮತ್ತು ಕಲಿಯುವುದು  ತತ್ವಚಿಂತನೆಗಳಾಗಿವೆ.

ಇಲ್ಲಿನ ಪ್ರತೀ ವಿಭಾಗದಲ್ಲಿಯೂ ವಿಷಯಕ್ಕೆ ತಕ್ಕುದಾದ ನಿರೂಪಣೆಯ ತಂತ್ರಗಳನ್ನು ರೂಪಿಸಲಾಗಿದೆ. ಸರಳ ಚಟುವಟಿಕೆಗಳನ್ನು ಕೊಡುವುದರ ಮೂಲಕ ಪ್ರಶ್ನೆಗಳನ್ನು ಕೇಳುವುದರ ಮೂಲಕ, ಉದಾಹರಣೆಗಳನ್ನು ಕೊಟ್ಟು ವಿವರಿಸುವುದರ ಮೂಲಕ ಲೇಖಕರು ವಿಷಯಗಳನ್ನು ಮನನ ಮಾಡಿಸುತ್ತಾರೆ. ವಿಜ್ಞಾನ ಕುರಿತ ವಿಚಾರಗಳಿವೆ. ಇಂದಿನ ಚಿಂತನಹೀನ ಶೈಕ್ಷಣಿಕ ವ್ಯವಸ್ಥೆಯು ಜ್ಞಾನವೆಂದರೆ ಅದು ವಿಜ್ಞಾನ, ಶಿಕ್ಷಣವೆಂದರೆ ಒತ್ತಡ, ಭಯ, ಸ್ಪರ್ಧೆ ಎಂಬಂತೆ ಮಾಡಿದೆ’ ಎಂದು ಇಲ್ಲಿ ಲೇಖಕರು ವಿಶ್ಲೇಷಿಸುತ್ತಾರೆ.

About the Author

ಮಾಧವ ಚಿಪ್ಪಳಿ

ಲೇಖಕ, ಅನುವಾದಕ ಮಾಧವ ಚಿಪ್ಪಳಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಚಿಪ್ಪಳಿಯವರು. ಸಾಗರದ ಲಾಲ್‍ಬಹಾದೂರ್ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಪಡೆದಿರುವ ಅವರು ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಎಂ.ಎ., ಜೊತೆಗೆ ಮಣಿಪಾಲ ವಿಶ್ವವಿದ್ಯಾಲಯದಿಂದ ಭಾಷಾತತ್ತ್ವಶಾಸ್ತ್ರ ಮತ್ತು ಭಾಷಾಂತರ ಅಧ್ಯಯನದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಅವರು ಬರೆದ ಭಾಷೆ-ತತ್ತ್ವ-ಕವಿತೆಗಳ ಕುರಿತ ಪ್ರಬಂಧಗಳ ಸಂಕಲನ ‘ನುಡಿಯೊಡಲು,’ ಅನುವಾದಿಸಿರುವ ‘ಆರು ಟಾಲ್‍ಸ್ಟಾಯ್ ಕತೆಗಳು’ ಮತ್ತು ಜಿಯಾವುದ್ದೀನ್ ಸರ್ದಾರರ ‘ಸ್ವರ್ಗ ಸಾಧನೆಯ ಉತ್ಕಟ ಬಯಕೆ: ಸಂದೇಹಿ ಮುಸ್ಲಿಮನ ಯಾತ್ರೆಗಳು’ ಈಗಾಗಲೇ ಪ್ರಕಟಗೊಂಡಿವೆ. ಅವರ ‘ಆರು ಟಾಲ್‍ಸ್ಟಾಯ್ ಕತೆಗಳು’ ಪುಸ್ತಕಕ್ಕೆ ...

READ MORE

Related Books