ಏನು ಗಣಿತ ಅಂದ್ರಾ...?

Author : ಬಿ.ಎಸ್. ಶೈಲಜಾ

Pages 124

₹ 90.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರಪಾರ್ಕ್ ಪೂರ್ವ, ಬೆಂಗಳೂರು-560001
Phone: 08022161900

Synopsys

ಲೇಖಕಿ ಬಿ.ಎಸ್. ಶೈಲಜಾ ಅವರ ಕೃತಿ-ಏನು ಗಣಿತ ಅಂದ್ರಾ...? ಕೆಲವರಿಗೆ ಗಣಿತ ಏಂದರೆ ಕಬ್ಬಿಣದ ಕಡಲೆ. ಕೆಲವರಿಗೆ ಅದೊಂದು ಮೋಜಿನ, ಕುತೂಹಲದ ಆಟ. ಗಣಿತದಂತಹ ಕ್ಲಿಷ್ಟ ಸಮಸ್ಯೆಗಳನ್ನು ಶೀಘ್ರ ಹಾಗೂ ಸರಳವಾಗಿ ಬಗೆಹರಿಸಿಕೊಳ್ಳಲು ಸರಳ ಸೂತ್ರಗಳೂ ಇರುತ್ತವೆ. ಈ ಸೂತ್ರಗಳನ್ನು ಅನ್ವಯಿಸಿದಾಗಲೂ ಕೆಲವೊಮ್ಮ ಸಮಸ್ಯೆ ಬಗೆಹರಿಯದು. ಹೀಗಾಗಿ, ಗಣಿತ ಎಂದರೆ ಬೇಸರ ಮಾಡಿಕೊಳ್ಳುವವರೇ ಜಾಸ್ತಿ. ದಿನನಿತ್ಯದ ಜೀವನದಲ್ಲಿ ಗಣಿತ ಅಗತ್ಯ. ದೈನಂದಿನ ವ್ಯವಹಾರಗಳ ಮೂಲಕ ಗಣಿತವನ್ನು ನಮಗರಿವಿಲ್ಲದಂತೆ ಬೋಧಿಸುವ ಪುಸ್ತಕವಿದು. ಕತೆ ಹೇಳುತ್ತಲೇ ನಾವು ಮಕ್ಕಳಿಗೆ ಒಳ್ಳೆಯ ನಡತೆ ಕಲಿಸುವುದಿಲ್ಲವೇ ಹಾಗೆ ? ಗಣಿತವೆಂದರೆ ನಿದ್ದೆಯಲ್ಲೂ ಬೆಚ್ಚಿಬೀಳುವ ವಿದ್ಯಾರ್ಥಿಗಳಿಗೆ ಹೇಳಿ ಬರೆಸಿದಂತೆ ಬಹಳ ಸ್ವಾರಸ್ಯಕರವಾಗಿ ನಿರೂಪಿಸಿದೆ. ಗಣಿತವನ್ನು ಸಂತೋಷವಾಗಿ ಕಲಿಯುವಂತಾಗಲು, ಸೂಕ್ಷ್ಮಗಳನ್ನು ತಿಳಿದುಕೊಳ್ಳಲು ಈ ಪುಸ್ತಕ ಸಹಾಯಕವಾಗಿದೆ.

About the Author

ಬಿ.ಎಸ್. ಶೈಲಜಾ

ಶೈಲಜಾ ಬಿ.ಎಸ್. ಜವಹರಲಾಲ್ ನೆಹರೂ ತಾರಾಲಯದ ಶೈಕ್ಷಣಿಕ ಕಾರ್ಯಕ್ರಮಗಳ ನಿರ್ವಾಹಕರು. ತಂದೆ : ಬ.ನ. ಸುಂದರರಾವ್, ತಾಯಿ- ರತ್ತಮ ಸುಂದರರಾವ್.  ಶುಕ್ರಗ್ರಹದ ಸಂಕ್ರಮಣ, ನನ್ನ ಮಿತ್ರ ಸೋರಣ್ಣ (ಜೆ.ಬಿ.ಎಸ್. ಹಾಲ್ಲೆನರ ಮಿ. ಲೀಕಿಯ ಅನುವಾದ), ಬಾನಿಗೊಂದು ಕೈಪಿಡಿ ಕೃತಿಯ ಸಂಪಾದನೆ ನವಕರ್ನಾಟಕ ಜ್ಞಾನವಿಜ್ಞಾನ ಕೋಶದಲ್ಲಿ ಖಗೋಳ ವಿಜ್ಞಾನ ಭಾಗದ ರಚನೆ, ಸಫಾರಿ ಎಂಬ ಲಕ್ಷುರಿ (ಪ್ರವಾಸ ಕಥನ) (2007), ದೂರದರ್ಶಕ, ಗ್ರಹಣ, ಸೂರ್ಯ, ಸೌರವ್ಯೂಹ, ಅಗಸದ ಅಲೆಮಾರಿಗಳು (ವಿಜ್ಞಾನ ಸಾಹಿತ್ಯ) ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಶುಕ್ರಗ್ರಹದ ಸಂಕ್ರಮಣಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಎಚ್.ಎನ್. ದತ್ತಿನಿಧಿ ಬಹುಮಾನ, ...

READ MORE

Related Books