ಅಗ್ನಿಯ ರೆಕ್ಕೆಗಳು

Author : ಜಯಪ್ರಕಾಶ್ ಪುತ್ತೂರು

Pages 188

₹ 195.00




Year of Publication: 2013
Published by: ವಾಸನ್ ಪಬ್ಲಿಕೇಶನ್ಸ್‌
Address: ಬೆಂಗಳೂರು

Synopsys

ಭಾರತದ 11ನೇ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರ ಆತ್ಮ ಚರಿತ್ರೆಯ ಕನ್ನಡ ಅನುವಾದ ‘ಅಗ್ನಿಯ ರೆಕ್ಕೆಗಳು’. ಯುವಪೀಳಿಗೆಗೆ ಓದಲೇಬೇಕಾದ ಸ್ಪೂರ್ತಿದಾಯಕ ಕೃತಿ. ಕವಿತೆಯಂತೆ ಸುಲಲಿತವಾಗಿ ಓದಿದ ಅನುಭವವಾಗುತ್ತದೆ. ಬರವಣಿಗೆಯ ಶೈಲಿಯ ಸರಳತೆಯಿಂದ ನಮ್ಮ ದೇಶದ ಕ್ಷಿಪಣಿ ತಂತ್ರ ಜ್ಞಾನ ರಂಗದಲ್ಲಿ ಒಂದು ಸಂಕ್ಷಿಪ್ತ ಪಕ್ಷಿ ನೋಟ ಒದಗಿಸಿದ್ದಾರೆ ಕಲಾಂ. ಅವರ ಬಾಲ್ಯ, ಬೆಳೆದು ಬಂದ ದಾರಿ ಹಾಗೂ ತಮ್ಮ ಅನುಭವವನ್ನು ಇಲ್ಲಿ ಕಾಣಬಹುದು. ಈ ಕೃತಿಯನ್ನು ಉತ್ಕೃಷ್ಟವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ ಲೇಖಕ ಜಯಪ್ರಕಾಶ್ ಪುತ್ತೂರು.

 

About the Author

ಜಯಪ್ರಕಾಶ್ ಪುತ್ತೂರು

ಜಯಪ್ರಕಾಶ್ ಪುತ್ತೂರು ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದರು. ನಂತರ ಅದನ್ನು ರಕ್ಷಣಾವಲಯದ ಪ್ರತಿಷ್ಠಿತ ಎ.ಡಿ.ಎ ಮತ್ತು ಡಿ.ಆರ್.ಡಿ.ಓ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕ ವಿಭಾಗದ ಉದ್ಯೋಗಕ್ಕೆ ಸೇರಿದರು. ರಕ್ಷಣಾ ವೈಮಾನಿಕ ಅಭಿವೃದ್ಧಿ ಸಂಶೋಧನೆಗಳಿಗೆ ಮೀಸಲಾದ ಎಡಿಎ ಕೆಲಸದಲ್ಲಿ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರಿಗೆ ನಿಕಟವಾಗಿ ಕೆಲಸ ಮಾಡಿದ್ದು ಅವರ ಹೆಗ್ಗಳಕೆ. ‘ಕಲಾಂ ಜೀವನ ಧರ್ಮ’, ‘ಅಗ್ನಿಯ ರೆಕ್ಕೆಗಳು’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ...

READ MORE

Related Books