ವಿದ್ಯಾವಂತ ವೇಶ್ಯೆಯ ಆತ್ಮಕಥೆ

Author : ನಾಗ ಎಚ್. ಹುಬ್ಳಿ

Pages 200

₹ 240.00




Year of Publication: 2023
Published by: ಛಂದ ಪುಸ್ತಕ
Address: ಛಂದ ಪುಸ್ತಕ, 1-004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರೋಡ್, ಬೆಂಗಳೂರು- 560076
Phone: 9844422782

Synopsys

‘ವಿದ್ಯಾವಂತ ವೇಶ್ಯೆಯ ಆತ್ಮಕಥೆ’ ಬಂಗಾಳಿ ಲೇಖಕಿ ಕುಮಾರಿ/ಶ್ರೀಮತಿ ಮಾನದಾ ದೇವಿ ಪ್ರಣೀತ ಅವರ ಕೃತಿಯ ಕನ್ನಡಾನುವಾದ. ಈ ಕೃತಿಯನ್ನು ಡಾ. ನಾಗ ಎಚ್. ಹುಬ್ಳಿ ಅವರು ಕನ್ನಡೀಕರಿಸಿದ್ದಾರೆ. ಈ ಕೃತಿಗೆ ಡಾ. ರಹಮತ್ ತರೀಕೆರೆ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ತಿಳಿಸುತ್ತಾ ‘ಈ ಆತ್ಮಕಥೆ ಓದುಗರನ್ನು ವಿಚಲಿತಗೊಳಿಸುತ್ತದೆ. ಸಿರಿವಂತ ಮನೆತನದ ಹುಡುಗಿ ಮಾನದಾ, ಬಾಳಿನ ವಿಚಿತ್ರ ಸನ್ನಿವೇಶದ ಸುಳಿಗೆ ಸಿಕ್ಕು ವೇಶ್ಯಾವೃತ್ತಿಗೆ ಇಳಿದ ಕಥನವಿದು. ಈಕೆಯ ಸಾರ್ವಜನಿಕ ಬದುಕು ಬೆಂಗಳೂರು ನಾಗರತ್ನಮ್ಮ ಅವರ ಧೀಮಂತ ಬದುಕನ್ನೂ, ಕಾರಂತರ `ಮೈಮನಗಳ ಸುಳಿಯಲ್ಲಿ' ಕಾದಂಬರಿಯ ಮಂಜುಳೆಯ ವೈಯಕ್ತಿಕ ತೊಳಲಾಟದ ಬದುಕನ್ನೂ ನೆನಪಿಸುತ್ತದೆ. ಆದರೆ ಮಾನದಾ, ವೇಶ್ಯಾಜೀವನವು ನೈತಿಕವಾಗಿ ಶಪಿತ ಬದುಕೆಂದೂ ಅದರಿಂದ ಮಹಿಳೆಯರು ಹೊರಬರಬೇಕೆಂದೂ ಹೋರಾಡಿದವಳು, ಮಂಜುಳೆಯು ಗಂಡಾಳಿಕೆಯ ಕೌಟುಂಬಿಕ ವ್ಯವಸ್ಥೆಯಲ್ಲಿರುವ ಮಹಿಳೆ ಸ್ವಾತಂತ್ರಹೀನ ಬದುಕು ನಡೆಸುತ್ತಿರುವುದನ್ನೂ ಕಾಣಿಸಬಲ್ಲವಳು. ಮಾನದಾಳ ವೈಯಕ್ತಿಕ ಬಾಳಿನ ಜತೆಗೆ ಹಲವು ಚಾರಿತ್ರಿಕ ಕಥನಗಳೂ ಹೆಣಿಗೆಗೊಂಡಿವೆ. ಈಕೆ ಟ್ಯಾಗೋರ್, ಗಾಂಧಿ, ಚಿತ್ತರಂಜನದಾಸ್ ಮುಂತಾದ ರಾಷ್ಟ್ರ ನಾಯಕರ ಜತೆ ಪರೋಕ್ಷ ಒಡನಾಟವಿದ್ದ ಮಹಿಳೆ, ಇಲ್ಲಿ 20ನೇ ಶತಮಾನದ ಮೊದಲ ಘಟ್ಟದ ಬಂಗಾಳಿ ಕುಲೀನರ ಜೀವನಕ್ರಮ, ಅವರ ಪಾಶ್ಚಿಮಾತ್ಯ ಜೀವನಶೈಲಿಯ ಚಿತ್ರಣಗಳಿವೆ; ವೇಶ್ಯಾವೃತ್ತಿ ಪಾನನಿಷೇಧ ಮುಂತಾದ ಸಮಾಜ ಸುಧಾರಣ ಚಳವಳಿಗಳ ಚಿತ್ರಗಳಿವೆ; ಭಾರತದ ಸ್ವಾತಂತ್ರ್ಯ ಹೋರಾಟದ ಚಿತ್ರಗಳಿವೆ. ಈ ಎರಡೂ ಆಂದೋಲನಗಳು ಎಂತೆಂತಹ ಅಜ್ಞಾತ ಮತ್ತು ವೈರುದ್ಧಕರ ಧಾರೆಗಳನ್ನು ಒಳಗೊಂಡಿದ್ದವು ಎಂಬುದರ ಚಿತ್ರಣವು ದಂಗುಬಡಿಸುತ್ತದೆ. ಯಾವ ಸೋಗೂ ಇಲ್ಲದೆ ತನ್ನ ಮುಗ್ಧತೆ, ಕಾಮುಕತೆ, ಧೈರ್ಯ, ಚಾಲಾಕಿತನ, ಔದಾರ್ಯಗಳನ್ನು ಚಿತ್ರಿಸುವ ಈ ಕಥನವು; ಓದುಗರಲ್ಲಿ ಏಕಕಾಲಕ್ಕೆ ಅನುಭೂತಿ ಗೌರವ ಸಂಕಟವನ್ನು ಹುಟ್ಟಿಸಬಲ್ಲದು, ಅದ್ಭುತ ಚಿತ್ರಕ ಶಕ್ತಿಯುಳ್ಳ ಇದನ್ನು ಟ್ಯಾಗೋರರ, ಶರಚ್ಚಂದ್ರರ ಕಾದಂಬರಿಗಳಂತೆ ಓದಬಹುದು. ಕನ್ನಡದಲ್ಲಿ ಇಂತಹ ಆತ್ಮಕಥೆಗಳಿಲ್ಲ’ ಎಂದಿದ್ದಾರೆ ಡಾ. ರಹಮತ್ ತರೀಕೆರೆ

About the Author

ನಾಗ ಎಚ್. ಹುಬ್ಳಿ

ಡಾ. ನಾಗ ಎಚ್. ಹುಬ್ಬಿ ಅವರು ಮೂಲತಃ ಹುಬ್ಬಳ್ಳಿಯವರು. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮ, ಕನ್ನಡದಲ್ಲಿ ಎಂ.ಎ. ಮತ್ತು ಪತ್ರಿಕೋದ್ಯಮದಲ್ಲಿ ಪಿಎಚ್‌ಡಿ ಮಾಡಿದ್ದಾರೆ. ಸದ್ಯ ಇವರು ರಾಂಚಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು. ಹಲವಾರು ಪತ್ರಿಕೆಗಳಿಗೆ ಮತ್ತು ಡಿಜಿಟಲ್ ಮಾಧ್ಯಮಗಳಿಗೆ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಆದಿವಾಸಿಗಳನ್ನು ಕುರಿತು ಕಳೆದ 22 ವರ್ಷಗಳಿಂದ ಝಾರ್ಖಂಡ್, ಬಿಹಾರ, ಒಡಿಸ್ಸಾ, ಪಶ್ಚಿಮ ಬಂಗಾಳ, ಛತ್ತೀಸಗಢ, ನಿಕೋಬಾರ್ ದ್ವೀಪ, ಉತ್ತರಾಖಂಡ ಮುಂತಾದ ರಾಜ್ಯಗಳ ಆದಿವಾಸಿ ತಾಂಡಾಗಳಿಗೆ ನಿರಂತರ ಭೇಟಿ ನೀಡಿ ಜನಾಂಗೀಯ ಅಧ್ಯಯನ ನಡೆಸುತ್ತಿದ್ದಾರೆ. 'ಸರಹುಲ್', 'ಝಾರ್ಖಂಡ್ ಆದಿವಾಸಿ ಬದುಕು, ಆದಿವಾಸಿ ಸಂಸ್ಕೃತಿ' ಮತ್ತು 'ಅಸುರ' ಇವರ ಇತರ ಕೃತಿಗಳು. ...

READ MORE

Related Books