ನೆನಪು ಕಹಿಯಲ್ಲ

Author : ದೇಜಗೌ (ದೇ. ಜವರೇಗೌಡ)

Pages 259

₹ 2.00




Year of Publication: 1949
Published by: ಕೆ.ಎಸ್. ನಾರಾಯಣಸ್ವಾಮಿ
Address: ಮೈಸೂರು

Synopsys

ಕೃಷ್ಣ ಹತೀಸಿಂಗ್ ಅವರ ಆತ್ಮಚರಿತ್ರೆ -ನೆನಪು ಕಹಿಯಲ್ಲ. ಈ ಕೃತಿಗೆ ಮುನ್ನುಡಿ ಬರೆದ ಸರೋಜಿನಿ ನಾಯ್ಡು ‘ದೇಶದ ಸ್ವಾತಂತ್ಯ್ರಕ್ಕಾಗಿ ಕುಟುಂಬದ ಸದಸ್ಯರೆಲ್ಲರೂ ಜೈಲಿಗೆ ಹೋದಾಗ ಬರೆದ ಕೃತಿ ಇದಾಗಿದೆ ಎಂದು ಕೃಷ್ಣ ಹತೀಸಿಂಗ್ ಹೇಳಿದ್ದು, ಅವಳ ಸಣ್ಣಂದಿನಿಂದಲೂ ತಾನು ಬಲ್ಲವಳಾದ್ದರಿಂದ ಮುನ್ನುಡಿಗೆ ಒಪ್ಪಿಕೊಳ್ಳಬೇಕಾಯಿತು ಎಂದಿದ್ದಾರೆ ಮಾತ್ರವಲ್ಲ; ಈ ಆತ್ಮಚರಿತ್ರೆಯಲ್ಲಿ ನೆಹರೂ ಕುಟುಂಬದ ಚರಿತ್ರೆ ಹಾಸುಹೊಕ್ಕಾಗಿದೆ. ನೆಹರೂ ಕುಟುಂಬದ ಕಾಲು ಶತನಮಾನದ ಚರಿತ್ರೆ ಹಾಗೂ ಭರತ ಖಂಡದ ಸ್ವಾತಂತ್ಯ್ರ ಸಂಗ್ರಾಮದ ಇತಿಹಾಸ, ಮೋತಿಲಾಲ ನೆಹರೂ, ಜವಾಹರಲಾಲರ ಪತ್ನಿ ಕಮಲಾ, ಸಹೋದರಿ ವಿಜಯಲಕ್ಷ್ಮಿ, ಮಹಾತ್ಮ ಗಾಂಧೀಜಿ ಹೀಗೆ ಚಾರಿತ್ರಿಕವಾಗಿ ದಾಖಲು ಮಾಡುವ ಉತ್ತಮ ಸಂಗತಿಗಳ ಮೊತ್ತವಾಗಿದೆ’ ಎಂದು ಪ್ರಶಂಸಿಸಿದ್ದಾರೆ. ಈ ಕೃತಿಯನ್ನು ದೇಜಗೌ (ದೇ. ಜವರೇಗೌಡ) ಅನುವಾದಿಸಿದ್ದಾರೆ.

About the Author

ದೇಜಗೌ (ದೇ. ಜವರೇಗೌಡ)
(06 July 1918 - 30 April 2016)

ದೇಜಗೌ ಎಂದು ಚಿರಪರಿಚಿತರಾಗಿದ್ದ ದೇವೇಗೌಡ ಜವರೇಗೌಡ ಕೃಷಿಕ ಕುಟುಂಬದಿಂದ ಬಂದವರು. ಚನ್ನಪಟ್ಟಣ ತಾಲ್ಲೂಕಿನ ಮೂಡಿಗೆರೆಯಲ್ಲಿ 1918ರ ಜುಲೈ 6ರಂದು ಜನಿಸಿದರು. ತಂದೆ ದೇವೇಗೌಡ- ತಾಯಿ ಚೆನ್ನಮ್ಮ. ಚಕ್ಕೆರೆ, ಚನ್ನಪಟ್ಟಣಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ ಬೆಂಗಳೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡಿ ಬಿ.ಎ ಪದವಿ ಗಳಿಸಿ ಕೆಲವು ಕಾಲ ಗುಮಾಸ್ತರಾಗಿ ಕೆಲಸ ಮಾಡಿ ಅನಂತರ ಮೈಸೂರಿಗೆ ಹೋಗಿ ಎಂ.ಎ. ಪದವಿ ಗಳಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ (1944) ಕೆಲಸಕ್ಕೆ ಸೇರಿದ ಅವರು ಅನಂತರ ಉಪಪ್ರಾಧ್ಯಾಪಕ, ಪರೀಕ್ಷಾಧಿಕಾರಿ, ಪ್ರಾಂಶುಪಾಲರು, ಇಲಾಖಾಮುಖ್ಯರು, ನಿರ್ದೇಶಕರು, ಕೊನೆಗೆ ಮೈಸೂರು ವಿಶ್ವವಿದ್ಯಾಲಯದ ಗೌರವಾನ್ವಿತ ಉಪಕುಲಪತಿಯಾಗಿ ನಿವೃತ್ತರಾದರು. ಕುವೆಂಪು ವಿದ್ಯಾವರ್ಧಕ ...

READ MORE

Related Books