ಔದುಂಬರಗಾಥೆ (ಬೇಂದ್ರೆ ಸಮಗ್ರ ಕಾವ್ಯ)

Author : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

Pages 2880

₹ 4200.00




Year of Publication: 2017
Published by: ಶ್ರೀಮಾತಾ ಪ್ರಕಾಶನ
Address: ಹುಬ್ಬಳ್ಳಿ

Synopsys

ಕನ್ನಡದ ಮಹತ್ವದ ಕವಿಗಳಲ್ಲಿ ಒಬ್ಬರಾದ ಬೇಂದ್ರೆಯವರ ಸಮಗ್ರ ಕವಿತೆಗಳನ್ನು ಆರು ಸಂಪುಟಗಳಲ್ಲಿ ಸಂಗ್ರಹಿಸಲಾಗಿದೆ. ಈ ಸಂಪುಟಗಳನ್ನು ನಮನ ಸಂಪುಟ, ದರ್ಶನ ಸಂಪುಟ, ವಿಕಾಸ ಸಂಪುಟ, ವಿನ್ಯಾಸ ಸಂಪುಟ, ತತ್ವ ಸಂಪುಟ, ಸಿದ್ಧಾಂತ ಸಂಪುಟ ಎಂದು ಕರೆಯಲಾಗಿದೆ. ಬೇಂದ್ರೆಯವರ ಬಹುತೇಕ ಎಲ್ಲ ಕವಿತೆಗಳೂ ಈ ಸಂಪುಟದಲ್ಲಿ ನೋಡಲು ಸಿಗುತ್ತವೆ. ಬೇಂದ್ರೆಯವರ ತಮ್ಮ ಜೀವಿತದ ಅವಧಿಯಲ್ಲಿ 25 ಕವನ ಸಂಕಲನಗಳನ್ನು ಪ್ರಕಟಿಸಿದ್ದರು. ಅವರು ಕಾಲವಾದ ನಂತರ ಆರು ಸಂಕಲನಗಳು ಪ್ರಕಟಗೊಂಡವು. ಅವುಗಳನ್ನು ವಿಷಯವಾರು ವಿಂಗಡಿಸಲಾಗಿದೆ. ಸಂಕಲನವಾರು ಕವಿತೆಗಳನ್ನು ಓದಿದವರಿಗೆ ಕವಿತೆಗಳನ್ನು ಹುಡುಕುವುದು ಕಷ್ಟವಾದರೂ ಎಲ್ಲ ಕವಿತೆಗಳು ಒಂದೆ ಕಡೆಗೆ ಸಿಗುತ್ತವೆ ಎಂಬುದು ವಿಶೇಷ.

About the Author

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
(31 January 1896 - 26 October 1981)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...

READ MORE

Related Books