ಚಿತ್ರಾಂಗದಾ

Author : ಜಿ. ಕೃಷ್ಣಪ್ಪ

Pages 116

₹ 150.00




Year of Publication: 2023
Published by: ಅನ್ನಪೂರ್ಣ ಪಬ್ಲಿಷಿಂಗ್ ಹೌಸ್
Address: # 176, ಗೌಂಡ್ ಫ್ಲೋರ್‌, 12ನೇ ಮೇನ್, ಮಾಗಡಿ ಮುಖ್ಯರಸ್ತೆ, ಅಗ್ರಹಾರ ದಾಸರಹಳ್ಳಿ, ಬೆಂಗಳೂರು - 79

Synopsys

ಕುವೆಂಪು ಅವರ ‘ಚಿತ್ರಾಂಗದಾ’ ಸರಳ ರಗಳೆಯಲ್ಲಿ ರಚಿತವಾದ ಖಂಡಕಾವ್ಯ. ಇದು ಅವರ ಮಹಾ ಛಂದಸ್ಸಿನ ಪೂರ್ವ ಪ್ರಯೋಗವಾಗಿದ್ದು ಮಹೋಪಮೆಗಳನ್ನು ಪ್ರಯೋಗಿಸಿರುವ ಮೊದಲಕಾವ್ಯ. ಹಾಗಾಗಿ ಇದು ಕನ್ನಡ ಸಾಹಿತ್ಯದಲ್ಲಿ ಹೊಸ ಸಾಹಸದ ಐತಿಹಾಸಿಕ ಕಾವ್ಯ ಪ್ರಯೋಗ ಕೃತಿ. ಈ ಖಂಡಕಾವ್ಯವು ಶೃಂಗಾರರಸದ ವಿವಿಧ ಮನೋಹರ ಭಾವಲಹರಿಗಳಿಂದ ಚಿತ್ತಾಕರ್ಷಕವಾಗಿದೆ. ಇದರ ಆಂತರ್ಯದಲ್ಲಿ ಚಿತ್ರಾಂಗದೆಯ ಪ್ರಣಯ ಪಾವಿತ್ರ್ಯ ಪ್ರತಿಷ್ಠಾಪಿತವಾಗಿದೆ. ಕುವೆಂಪು ಅವರ ‘ಚಿತ್ರಾಂಗದಾ’ ಅತಿಮಾನುಷ ಪೌರಾಣಿಕ ಚಿತ್ರಣವಲ್ಲ. ಅದು ಗಂಡು ಹೆಣ್ಣಿನ ಮನುಷ್ಯ ಸಹಜ ಆಕರ್ಷಣೆ, ದ್ವೇಷ, ಅಹಂಭಾವಗಳು ನಿರಸನಗೊಂಡ ಭಾರತೀಯ ತಾತ್ವಿಕ ನೆಲೆಯಲ್ಲಿ ಮಾಗಿದ ತಪಸ್ವಿ ಚಿತ್ರಾಂಗದೆಯ ಹೊಸಸೃಷ್ಟಿ. ಅವರ ನವ ಕಲ್ಪನೆಯಲ್ಲಿ - ಯುದ್ಧರಂಗದ ಮಧ್ಯದಲ್ಲಿ ಚಿತ್ರಾಂಗದೆ ನುಗ್ಗಿ ಪ್ರೀತಿಯ ಪತಿ, ವಾತ್ಸಲ್ಯದ ಮಗನ ಮಧ್ಯೆ ಬಿದ್ದು, ಅವರಿಬ್ಬರನ್ನು ಭೇಟಿಮಾಡಿಸಿ ಜೀವನ್ಮುಕ್ತಳಾಗುತ್ತಾಳೆ! ಕುವೆಂಪು ಅವರು ‘ಅರಿಕೆ’ಯಲ್ಲಿ ತಿಳಿಸಿರುವಂತೆ ‘ಪೂರ್ವ ಚಿತ್ರಾಂಗದೆಯನ್ನು ಚಿತ್ರಿಸುವ ಕೆಲವು ಸನ್ನಿವೇಶಗಳಿಗೆ ಈ ಕಾವ್ಯ ಋಣಿಯಾಗಿದೆ ಎನ್ನುತ್ತಾರೆ ಲೇಖಕ ಜಿ.ಕೃಷ್ಣಪ್ಪ.

About the Author

ಜಿ. ಕೃಷ್ಣಪ್ಪ

’ಬೇಂದ್ರೆ ಕೃಷ್ಣಪ್ಪ’ ಎಂದೇ ಜನಪ್ರಿಯರಾಗಿರುವ ಡಾ. ಜಿ.ಕೃಷ್ಣಪ್ಪ ಅವರು ಪ್ರಮುಖ ಬೇಂದ್ರ ಸಾಹಿತ್ಯ ಪರಿಚಾರಕರು. ಕೃಷ್ಣಪ್ಪ ಅವರು 1948ರಲ್ಲಿ ಬೆಂಗಳೂರಲ್ಲಿ  ಜನಿಸಿದರು. ತಂದೆ ಹೆಚ್.ಗಂಗಯ್ಯ, ತಾಯಿ ಸಾವಿತ್ರಮ್ಮ. ಜಿ.ಕೃಷ್ಣಪ್ಪ ಅವರು ಬೇರೆ ಕಾವ್ಯದ ಓದಿಗೆ ಹೊಸ ಆಯಾಮ ಪರಿಚಯಿಸಿದವರು. ಬೆಂಗಳೂರಿನ ಎಸ್.ಟಿ. ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೋಮಾ, ವಾಹನ ನಿರೀಕ್ಷಕರಾಗಿ ವೃತ್ತಿಯಾರಂಭಿಸಿದ ಇವರು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ನಿವೃತ್ತಿ. ಉದ್ಯೋಗದ ನಡುವೆ ಬಿ.ಎ, ಎಲ್‌ಎಲ್‌ಬಿ, ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರಾಗಿದ್ದಾರೆ. 'ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ : ಒಂದು ಅಧ್ಯಯನ ಕುರಿತು ಪಿಎಚ್ಡಿ ಪದವಿಯನ್ನು ಮಾಡಿದ್ದಾರೆ.ಸಾಹಿತ್ಯದ ಓದು, ಬೇಂದ್ರೆ ಕಾವ್ಯದ ಗುಂಗೇ ಇವರ  ಬರವಣಿಗೆಗೆ ...

READ MORE

Related Books