ಕಾವ್ಯಕಾರಣ

Author : ಅಂಬರೀಷ ಎಸ್. ಪೂಜಾರಿ

Pages 88

₹ 100.00




Year of Publication: 2022
Published by: ಜ್ಯೋತಿ ಪ್ರಕಾಶನ
Address: ಎಂ.45, ಕರ್ನಾಟಕ ಬ್ಯಾಂಕ್ ರೋಡ್, ವಿವೇಕಾನಂದ ಸರ್ಕಲ್ ಹತ್ತಿರ, ಮೈಸೂರು-570 023

Synopsys

'ಕಾವ್ಯಕಾರಣ' ಕೃತಿಗಳಲ್ಲಿ ಮಾನವೀಯ ಅನುಕಂಪ, ಸಾಮಾಜಿಕ ಕಾಳಜಿ-ಕಳಕಳಗಳೇ ಸ್ಥಾಯಿಭಾವ. ಇವೇ ಕವಿತೆಗಳ ಮೂಲದ್ರವ್ಯ. ಹೀಗಾಗಿ ಅವರ ಕವನಗಳು ಅವರವು ಮಾತ್ರ ಎನಿಸದೇ ನಮ್ಮೆಲ್ಲರ ದಾಖಲಿತ ಭಾವನೆಗಳೆನಿಸುತ್ತವೆ- ಆಪ್ತವೆನಿಸುತ್ತವೆ. ಇಲ್ಲಿಯ ಕವನಗಳು ವಿಭಿನ್ನ ವಸ್ತುವಿನೊಂದಿಗೆ ವಿಶಿಷ್ಟವೆನಿಸುತ್ತವೆ. ಅವರ 'ಕಾವ್ಯಕಾರಣ' ಕವನ ಸಂಕಲನದ ಕವಿತೆಗಳೆಲ್ಲ ಅವರ ಭಾವ ಲಹರಿಯ ಸ್ವಚ್ಛಂದ ಹರಿದಾಟಕ್ಕೆ ಒಳ್ಳೆಯ ನಿದರ್ಶನಗಳಾಗಿವೆ.

About the Author

ಅಂಬರೀಷ ಎಸ್. ಪೂಜಾರಿ
(15 June 1986)

ಅಂಬರೀಷ ಎಸ್. ಪೂಜಾರಿ ಅವರು ಬಿಜಾಪುರ ಜಿಲ್ಲೆಯ ಯಕ್ಕುಂಡಿಯವರು. ಪ್ರಾಥಮಿಕ ಶಿಕ್ಷಣವನ್ನು ಯಕ್ಕುಂಡಿಯಲ್ಲೇ ಮುಗಿಸಿ, ಬಬ್ಲೇಶ್ವರದಲ್ಲಿ ಶಿಕ್ಷಣದಲ್ಲಿ ನಂತರದ ಶಿಕ್ಷಣ ಹಾಗೂ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಎಂ.ಎ ಪದವಿ ಪಡೆದರು. ಸದ್ಯ ರಾಮನಗರದ ಜಿಲ್ಲಾ ಕಾರಾಗೃಹದಲ್ಲಿ ಅಧೀಕ್ಷಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೃತಿಗಳು: ಪರಿವರ್ತನೆ (ಕವನ ಸಂಕಲನ), ಕರೋನ ಮತ್ತು ಇತರೆ ಕವಿತೆಗಳು (ಕವನ ಸಂಕಲನ). ...

READ MORE

Related Books