ವಾಲ್ಮೀಕಿ ರಾಮಾಯಣ

Author : ಸು. ರುದ್ರಮೂರ್ತಿ ಶಾಸ್ತ್ರಿ

Pages 540

₹ 550.00




Year of Publication: 2023
Published by: ತನು ಮನು ಪ್ರಕಾಶನ
Address: ತನು ಮನು ಪ್ರಕಾಶನ, ನಂ.1267, 1 ನೇ ಕ್ರಾಸ್, 2 ನೇ ಹಂತ, ಶ್ರೀರಾಮಪುರ 2 ನೇ ಹಂತ, ವಿವೇಕಾನಂದ ವೃತ್ತದ ಹತ್ತಿರ, ಮೈಸೂರು - 570023
Phone: 9448056562

Synopsys

ವಾಲ್ಮೀಕಿ ರಾಮಾಯಣ ಸು.ರುದ್ರಮೂರ್ತಿ ಶಾಸ್ತ್ರೀ ಅವರ ಕೃತಿಯಾಗಿದೆ. ಏಕಪತ್ನಿವೃತ, ಗುರು ಹಿರಿಯರಲ್ಲಿ ಭಕ್ತಿ, ಸತ್ಯವಾದಿತ್ವ, ಪರಿಶುದ್ಧ ನಡವಳಿಕೆ, ಪತಿವ್ರತಾ ಧರ್ಮ ಹೀಗೆ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಜೀವನವಿಧಾನದ ಸಾರಸರ್ವಸ್ವವಾಗಿದೆ ರಾಮಾಯಣ ಕಾವ್ಯ. ರಾಮಾಯಣ ಭಾರತದ ಸಾಹಿತ್ಯ, ಕಲೆ, ಸಂಗೀತ ಮೊದಲಾದ ವಿಭಿನ್ನ ಮಾಧ್ಯಮಗಳ ವಸ್ತುವಾಗಿ ಈಗಲೂ ಪುನರ್ಜನ್ಮ ಪಡೆಯುತ್ತಲೇ ಇದೆ. ಭಾರತದ ಎಲ್ಲ ಭಾಷೆಗಳಲ್ಲೂ ಮೂಲರಾಮಾಯಣದ ಅನುವಾದಗಳು ಮಾತ್ರವಲ್ಲದೆ, ನಾಟಕ ರೂಪದಲ್ಲಿ, ನೃತ್ಯರೂಪಕಗಳಾಗಿ, ಆಧುನಿಕ ಕಥೆ ಕಾದಂಬರಿಗಳಾಗಿ ಪುಂಖಾನುಪುಂಖವಾಗಿ ಈಗಲೂಬರುತ್ತಲೇ ಇವೆ. ದೇವಾಲಯಗಳಲ್ಲಿ, ಶಿಲ್ಪಕಲೆಗಳಲ್ಲಿ ರಾಮಾಯಣಕ್ಕೆ ಶಾಶ್ವತ ರೂಪ ಕೊಡಲು ಪ್ರಯತ್ನಿಸಲಾಗಿದೆ. ಪಿತೃಭಕ್ತಿಗೆ ರಾಮ, ಸೋದರ ಪ್ರೇಮಕ್ಕೆ ಲಕ್ಷ್ಮಣ, ಭರತ, ಸ್ವಾಮಿಭಕ್ತಿಗೆ ಹನುಮಂತ, ಪಾತಿವ್ರತ್ಯಕ್ಕೆ ಸೀತೆ-ಭಾರತೀಯರಿಗೆ ಮಾತ್ರವಲ್ಲದೆ ಮಾನವ ಕುಲಕ್ಕೆ ಆದರ್ಶ ಪಾತ್ರಗಳು. ಜಗತ್ತು ಎಷ್ಟೇ ಆಧುನಿಕವಾದರೂ, ವ್ಯಕ್ತಿ ಜೀವನ, ಕುಟುಂಬ ಜೀವನ ಮತ್ತು ರಾಷ್ಟ್ರ ಜೀವನಕ್ಕೆ ರಾಮಾಯಣ ಮಾರ್ಗದರ್ಶನ ನೀಡುತ್ತಿದೆ. ಅದರಿಂದಲೇ ಎಷ್ಟೋ ಶತಮಾನಗಳು ಕಳೆದರೂ ರಾಮಾಯಣ ಇಂದಿಗೂ ತನ್ನ ಪ್ರಸ್ತುತತೆಯನ್ನು ಮಾತ್ರವಲ್ಲದೆ, ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ.

About the Author

ಸು. ರುದ್ರಮೂರ್ತಿ ಶಾಸ್ತ್ರಿ
(11 November 1948)

ಲೇಖಕ ರುದ್ರಮೂರ್ತಿ ಶಾಸ್ತ್ರಿ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಗ್ಗನಹಳ್ಳಿಯವರು. ತಂದೆ-ಎಸ್.ಎನ್. ಶಿವರುದ್ರಯ್ಯ, ತಾಯಿ- ಸಿದ್ಧಗಂಗಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟೂರಿನಲ್ಲಿ , ಪ್ರೌಢಶಾಲೆಯನ್ನು ರಾಮನಗರದಲ್ಲಿ ಪೂರ್ಣಗೊಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವೀಧರರು. ಬೆಂಗಳೂರಿನ ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ನಂತರ ವೃತ್ತಿಗೆ ರಾಜೀನಾಮೆ ನೀಡಿ ಸಾಹಿತ್ಯ ಸೇವೆಯಲ್ಲಿ ತೋಡಗಿ, ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಭಾವ ಲಹರಿ’, ಪರಿ, ಅಂತರಂಗ-ಬಹಿರಂಗ, ಚಿತ್ರಕಲ್ಪನೆ, ರಾಗ, ನಾಡಗೀತೆಗಳು, ನಾದರೂಪಕ ಕವನ ಸಂಕಲನಗಳು. ಪ್ರಾಸ-ಪ್ರಯಾಸ, ಕೆಂಪಭಾರತಂ, ಕೆಂಪರಾಮಾಯಣಂ, ಕೆಂಪನ ವಚನಗಳು, ಅಲ್ಪಜ್ಞನ ವಚನಗಳು ಮುಂತಾದ ಹಾಸ್ಯ ಸಂಕಲನಗಳು ಸೇರಿ ಸುಮಾರು ...

READ MORE

Related Books