ಸತೀಶ್ ಸಮಗ್ರ ಕವಿತೆಗಳು

Author : ಸತೀಶ ಕುಲಕರ್ಣಿ

₹ 200.00




Year of Publication: 2018
Published by: ಮಲೆನಾಡು‌ ‌ಪ್ರಕಾಶನ
Address: ‌ರಾಜದೇವ‌ ‌ನಿಲಯ,‌ ‌ಕಲ್ಯಾಣ‌ ‌, ನಗರ‌ ‌6ನೇ‌ ‌ಕ್ರಾಸ್,‌ ‌ಬ್ರಾಹ್ಮಣ‌ ‌ಹಾಸ್ಟೇಲ್‌ ‌ಹಿಂದೆ‌ ‌ಜ್ಯೋತಿ‌ ‌ನಗರ,‌ ‌ಚಿಕ್ಕಮಂಗಳೂರ-‌ ‌577102,
Phone: 8971186090 ‌

Synopsys

ಸತೀಶ್‌ ‌ಸಮಗ್ರ‌ ‌ಕವಿತೆಗಳು-ಈ ಕೃತಿಯು ಕವಿ ಸತೀಶ್ ಕುಲಕರ್ಣಿ ಅವರ ಕವಿತೆಗಳ ಸಮಗ್ರ ಸಂಕಲನವಾಗಿದೆ. ‌ ‌2012ರಲ್ಲಿ ಈ ಕೃತಿಯನ್ನು ಬಳ್ಳಾರಿಯ ಲೋಹಿಯಾ ಪ್ರಕಾಶನ ಪ್ರಕಟಿಸಿತ್ತು. ಈ ಕವಿಯ ಸಮಗ್ರ ಕವಿತೆಗಳ ಒಟ್ಟು ಆಶಯ-ಮಾನವೀಯತೆ. ಸಮಾನತೆಯ ಸಾಮಾಜಿಕ ಮೌಲ್ಯಭರಿತ ಪರಿಸರ ನಿರ್ಮಾಣವಾಗಬೇಕೆಂಬ ಆಶಯ ಒಳಗೊಂಡಿದೆ. ಶೋಷಕರ, ಬಂಡವಾಳಿಗರ, ಸಾಮ್ರಾಜ್ಯಶಾಹಿ ವಿರೋಧಿ ಧೋರಣೆಯು ಕವಿತೆಗಳ ಆಕ್ರೋಶವಾಗಿದೆ. ಪ್ರೀತಿ-ಪ್ರೇಮದ ಜೊತೆ ನಿಸರ್ಗ ಸಂರಕ್ಷಿಸುವ ತುಡಿತವೂ ಇದೆ. ಬಂಡಾಯವೆಂದರೆ ಮಾನವೀಯತೆಯ ಆಶಯವೇ ಆಗಿದೆ ಎಂಬ ಧ್ವನಿಯೂ ಕವಿತೆಗಳ ಜೀವಾಳವಾಗಿರುವುದನ್ನು ಕಾಣಬಹುದು.

About the Author

ಸತೀಶ ಕುಲಕರ್ಣಿ
(13 July 1951)

ಕವಿ, ಕಲಾವಿದ, ನಾಟಕಕಾರ ಸತೀಶ ಕುಲಕರ್ಣಿ ಅವರು 1951 ಜುಲೈ 13 ರಂದು ಧಾರವಾಡದಲ್ಲಿ ಜನಿಸಿದರು. ತಾಯಿ ಲೀಲಾಬಾಯಿ, ತಂದೆ ನೀಲಕಂಠರಾವ್ ಕುಲಕರ್ಣಿ. ಬಾಲ್ಯದಿಂದಲೂ ರಂಗಭೂಮಿಯಲ್ಲಿ ಆಸಕ್ತಿ ಇದ್ದ ಇವರು ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ ಹಾಗೂ ನಿರ್ದೇಶಿಸಿದ್ದಾರೆ.  ಲಂಕೇಶರ ತೆರೆಗಳು, ಜೋಕುಮಾರಸ್ವಾಮಿ, ಕುಂಟಾಕುಂಟಾ ಕುರವತ್ತಿ, ಪ್ರಸ್ತುತ, ಬಂಗಾರದ ಕೊಡ, ಗಾಂಧಿ ಹಬ್ಬಿದ ಗಿಡ, ಪರಸಪ್ಪನ ಕಥೆ, ಅನಾಮಿಕ, ಕಂಪ್ಯೂಟರ್, ದೊಡ್ಡಮನುಷ್ಯ, ಹಾವು ಬಂತು ಹಾವು, ಗಗ್ಗಯ್ಯನ ಗಡಿಬಿಡಿ, ಗಾಡಿಬಂತುಗಾಡಿ ಮುಂತಾದ ನಾಟಕ ನಿರ್ದೇಶನ ಮತ್ತು ಅಭಿನಯ.   ‘ವಿಷಾದಯೋಗ, ಗಾಂಧಿಗಿಡ, ಕಂಪನಿ ಸವಾಲ್, ಬೆಂಕಿನೀರು, ನೆಲದ ನೆರಳು, ವಿಕ್ಷಿಪ್ತ: ಗಾಂಧಿ ಒಡಲಾಳ ...

READ MORE

Related Books