ಸಮಗ್ರ ಕಾವ್ಯ

Author : ಎಂ. ಗೋಪಾಲಕೃಷ್ಣ ಅಡಿಗ

Pages 718

₹ 450.00




Year of Publication: 2010
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ನವ್ಯ ಹಾಗೂ ನವೋದಯ ಎರಡನ್ನೂ ಮೈಗೂಡಿಸಿಕೊಂಡು ಕವಿತೆಗಳನ್ನು ರಚಿಸಿದ ಖ್ಯಾತಿಯ ಎಂ. ಗೋಪಾಲಕೃಷ್ಣ ಅಡಿಗ ಅವರ ಎಲ್ಲ ಕವಿತೆಗಳ ಸಂಗ್ರಹ, ಸಮಗ್ರ ಕಾವ್ಯ. ಮೂಲತಃ ಆಡಿಗರು, ಕಾವ್ಯದಲ್ಲಿ ಹೊಸದೊಂದನ್ನು ಸೃಷ್ಟಿಸಬೇಕು ಎಂಬ ಹಂಬಲದವರು. ಹಾಗೆಯೇ ಅವರು, ತಮ್ಮ ಮೊದಲಿನ ಕವಿತೆಗಳಿಂದ ಹಿಡಿದು ಹೊಸದಕ್ಕೆ ಹಂಬಲಿಸಿದ ಕುರುಹುಗಳನ್ನು ತದನಂತರ ಬಂದ ಎಲ್ಲ ಕವಿತೆಗಳಲ್ಲೂ ಕಾಣಬಹುದು. ವ್ಯಕ್ತಿಯ ವೈಚಾರಿಕ ಛಾಪನ್ನು ಕಾವ್ಯಗಳಲ್ಲಿ ಪಡಿಮೂಡಿಸಿದ್ದು, ಓದುಗರ ವೈಚಾರಿಕತೆಗೂ ಪ್ರೇರಣೆಯಾಗಿ ಇವರ ಕಾವ್ಯ ಸಾಹಿತ್ಯವಿದೆ. ಕವಿತೆಗಳಲ್ಲಿ ಭಾವವಿಲ್ಲ ಎಂತಲ್ಲ. ಭಾವವು ಸುಪ್ತವಾಗಿದ್ದು, ವೈಚಾರಿಕತೆ ಪ್ರಖರವಾಗಿರುವುದು ಸಾಮಾನ್ಯವಾಗಿ ಕಂಡು ಬರುತ್ತದೆ.

ಭಾವತರಂಗ, ಕಟ್ಟುವೆವು ನಾವು, ನಡೆದು ಬಂದ ದಾರಿ, ಚಂಡೆಮದ್ದಳೆ, ಭೂಮಿಗೀತ, ವರ್ಧಮಾನ, ಇದನ್ನು ಬಯಸಿರಲಿಲ್ಲ, ಮೂಲಕ ಮಹಾಶಯರು, ಬತ್ತಲಾರದ ಗಂಗೆ, ಮಾವೋ ಕವನಗಳು, ಚಿಂತಾಮಣಿಯಲ್ಲಿ ಕಂಡ ಮುಖ, ಸುವರ್ಣ ಪುತ್ಥಳಿ, ಬಾ ಇತ್ತ ಇತ್ತ ಹೀಗೆ ವಿವಿಧ ಕವನ ಸಂಕಲನಗಳ ಕವಿತೆಗಳನ್ನು ಸಂಕಲಿಸಲಾಗಿದೆ.

About the Author

ಎಂ. ಗೋಪಾಲಕೃಷ್ಣ ಅಡಿಗ
(18 February 1918 - 14 November 1992)

ಕನ್ನಡದಲ್ಲಿ ನವ್ಯಕಾವ್ಯಕ್ಕೆ ನಾಂದಿ ಹಾಡಿದ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರನ್ನು ‘ಒಂದು ಜನಾಂಗದ ಕಣ್ಣು ತೆರೆಸಿದ ಕವಿ’ ಎಂದು ಗುರುತಿಸಲಾಗುತ್ತಿತ್ತು. ಅಡಿಗರು 1918ರ ಫೆಬ್ರುವರಿ 18ರಂದು ಜನಿಸಿದರು. ತಂದೆ ರಾಮಪ್ಪ ಮತ್ತು ತಾಯಿ ಗೌರಮ್ಮ. ಬೈಂದೂರಿನಲ್ಲಿ ಶಾಲಾ ಶಿಕ್ಷಣ, ಮೈಸೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಆಯಿತು. ಬಿ.ಎ. ಆನರ್ಸ್ ಪದವಿ (1942) ಗಳಿಸಿದ ನಂತರ ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ಪ್ರೌಢಶಾಲೆಗಳಲ್ಲಿ ಅಧ್ಯಾಪಕರಾಗಿ ಕೆಲಸಮಾಡಿದ್ದರು. ಆಮೇಲೆ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದಿ ಎಂ.ಎ. ಪದವಿ (1947) ಗಳಿಸಿದರು. ಮೈಸೂರಿನ ಶಾರದಾವಿಲಾಸ್ ಕಾಲೇಜಿನಲ್ಲಿ ಉಪನ್ಯಾಸಕ (1948-52), ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ (1952-54) ...

READ MORE

Related Books