ಸೀಮಾತೀತನ ಸಿರಿವಂತ ಸುಗ್ಗಿ

Author : ಕೆ.ಎಸ್. ನಿಸಾರ್ ಅಹಮದ್

Pages 418

₹ 270.00




Year of Publication: 2017
Published by: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ
Address: ಮೈಸೂರು

Synopsys

ನಿತ್ಯೋತ್ಸವ ಕವಿತೆ ಖ್ಯಾತಿಯ ಪ್ರೊ. ಕೆ.ಎಸ್. ನಿಸಾರ ಅಹಮ್ಮದ್ ಅವರ ಆಯ್ದ ಕವಿತೆಗಳ ಸಂಕಲನ-ಸೀಮಾತೀತನ ಸಿರಿವಂತ ಸುಗ್ಗಿ. ಭಾವುಕತೆಯ ನೆಲೆಯಲ್ಲಿ, ವಾಸ್ತವತೆಯ ಕಾಠಿಣ್ಯದಲ್ಲಿ ವ್ಯಂಗೋಕ್ತಿಗಳ ಮೂಲಕ ಮನುಷ್ಯನ ಹೊಣೆಗಾರಿಕೆಯನ್ನು, ನಡೆಯನ್ನು ಎಚ್ಚರಿಸುವ ಮನೋಭಾವದ ಅಂಶವಿರುವ ಕವಿಯ ಎಲ್ಲ ಕವನಗಳು ಓದುಗರನ್ನು ತಮ್ಮ ವಸ್ತು, ಶೈಲಿಯಿಂದ ಗಮನ ಸೆಳೆಯುತ್ತವೆ.

About the Author

ಕೆ.ಎಸ್. ನಿಸಾರ್ ಅಹಮದ್
(05 February 1936 - 03 May 2020)

ಭಾವಗೀತೆಗಳ ಮೊದಲ ಕನ್ನಡ ಧ್ವನಿಸುರುಳಿ ‘ನಿತ್ಯೋತ್ಸವ’ದ ಕವಿ ಕೆ.ಎಸ್. ನಿಸಾರ್ ಅಹಮದ್ ಅವರು ಕವಿತೆ, ವಿಮರ್ಶೆ, ಅನುವಾದದ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಅವರ ತಂದೆ ಮೈಸೂರು ಸರ್ಕಾರದಲ್ಲಿ ರೆವೆನ್ಯೂ ಅಧಿಕಾರಿಯಾಗಿದ್ದ ಕೆ.ಎಸ್. ಹೈದರ್ ಮತ್ತು ತಾಯಿ ಗೃಹ ವಿಜ್ಞಾನ ಪದವೀಧರೆ ಹಮೀದಾ ಬೇಗಂ. 1936ರ ಫೆಬ್ರುವರಿ 5ರಂದು ಜನಿಸಿದರು. ಬೆಂಗಳೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು, ಹೊಸಕೋಟೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿಗಳಿಸಿದ ಇವರು ಭೂವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಗಳಿಸಿದರು. ಮೈಸೂರು ಸರಕಾರ ಭೂವಿಜ್ಞಾನ ಇಲಾಖೆಯಲ್ಲಿ ಒಂದಿಷ್ಟು ಕಾಲ ಸೇವೆ ಸಲ್ಲಿಸಿದರು. ಅನಂತರ ಕಾಲೇಜು ...

READ MORE

Related Books