ಭಗವತೀ ಕಾತ್ಯಾಯಿನಿ

Author : ಗಳಗನಾಥ (ವೆಂಕಟೇಶ ತಿರಕೋ ಕುಲಕರಣಿ)

Pages 79

₹ 0.00




Year of Publication: 1918
Published by: ವೆಂಕಟೇಶ ತಿರಕೋ ಕುಲಕರಣಿ
Address: ಗಳಗನಾಥ ಸುರಸ ಗ್ರಂಥಮಾಲಾ, ಹಾವೇರಿ

Synopsys

ಭಗವತೀ ಕಾತ್ಯಾಯಿನಿ-ಎಂಬುದು ಗಳಗನಾಥರು ಬರೆದ ಕೃತಿ. ಸಾಂಬ ದೀಕ್ಷಿತ ಕಾಶೀಕರ ಅವರ ‘ಯಾಜ್ಞವಲ್ಕ್ಯ ಚರಿತ್ರೆ’ ಹಾಗೂ ‘ಮೇತ್ರೇಯಿ’ ಕೃತಿಗಳನ್ನು ಆಧರಿಸಿ ಬರೆದಿದೆ. ಆದರೆ, ಕೆಲವು ವಿಭಾಗಗಳನ್ನು ಸ್ವತಃ ಲೇಖಕರೇ ಬರೆದಿದ್ದಾಗಿ ಪ್ರಸ್ತಾವನೆ ನೀಡಲಾಗಿದೆ. ಭಗವತಿ ಕಾತ್ಯಾಯಿನಿಯ ಮಾತೃಭಗನಿಯರಲ್ಲಿ ಅನುಕರಣೀಯ ಎಂದೂ ಲೇಖಕರು ಅಭಿಪ್ರಾಯಪಟ್ಟಿದ್ದಾರೆ.

ಪುರಾಣ-ಭಾಗವತದ ಯಾಜ್ಞವಲ್ಕ್ಯರಿಗೂ-ವೈಶಯಂಪಾಯರಿಗೂ ಘರ್ಷಣೆ, ಯಾಜ್ಞವಲ್ಕ್ಯ-ಕಾತ್ಯಾಯಿನಿ, ಮೈತ್ರೇಯಿ, ಜನಕರಾಜ ಪಾತ್ರಗಳ ವಿಶ್ಲೇಷಣೆಯು ಆಕರ್ಷಕವಾಗಿದೆ. ವಿಶೇಷವಾಗಿ ಕಾತ್ಯಾಯಿನಿ-ಮೈತ್ರೇಯಿ ನಡೆಸುವ ಸ್ತ್ರೀ ಸ್ವಾತಂತ್ಯ್ರ, ಅದರ ಸದ್ಬಳಕೆ, ಸ್ತ್ರೀಯರಿಗೆ ಬ್ರಹ್ಚರ್ಯ? ಇಂತಹ ವಿಷಯಗಳ ಮೇಲಿನ ಸಂಭಾಷಣೆಯು ಇಂದಿಗೂ ಮಾತ್ರವಲ್ಲ; ಮುಂದೆಂದಿಗೂ ಪ್ರಸ್ತುತ ಎನಿಸುವಷ್ಟು ಹೃದಯಂಗಮವಾಗಿ ಮೂಡಿ ಬಂದಿದೆ.

About the Author

ಗಳಗನಾಥ (ವೆಂಕಟೇಶ ತಿರಕೋ ಕುಲಕರಣಿ)
(05 January 1869 - 22 April 1922)

ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು ವೆಂಕಟೇಶ ತಿರಕೋ ಕುಲಕರ್ಣಿ. ’ಗಳಗನಾಥ’ ಅವರ ಕಾವ್ಯನಾಮ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗಳಗನಾಥ ಎಂಬ ಹಳ್ಳಿ. ಗಳಗನಾಥರ ಮೊದಲ ಕಾದಂಬರಿ ’ಪದ್ಮನಯನೆಗೆ ಬಹುಮಾನ’. 1898ರಿಂದ 1942ರವರೆಗೆ ಅವ್ಯಾಹತ ಬರವಣಿಗೆಯಲ್ಲಿ ತೊಡಗಿಕೊಂಡವರು. ’ಕಮಲಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ’ ಮುಂತಾದ ಕಾದಂಬರಿಗಳ ರಚಿಸಿದ್ಧಾರೆ. ’ಗಿರಿಜಾ ಕಲ್ಯಾಣ, ಉತ್ತರರಾಮ ಚರಿತ್ರೆ, ಚಿದಂಬರ ಚರಿತ್ರೆ ಮುಂತಾದ ಪೌರಾಣಿಕ ಕಥೆಗಳು, ಸತ್ಪುರುಷರ ಚರಿತ್ರೆಗಳು, ನಿಬಂಧ-ಪ್ರಬಂಧಗಳ ರಚನೆ, ಪ್ರಕಟಣೆ. 1907ರಲ್ಲಿ ಸದ್ಬೋಧ ಚಂದ್ರಿಕಾ ಮಾಸಪತ್ರಿಕೆ ಪ್ರಾರಂಭಿಸಿದರು.. ‘ಮಾಧವ ಕರುಣಾವಿಲಾಸ’ ...

READ MORE

Related Books