ಶ್ರೀಕೃಷ್ಣನ ವ್ಯಕ್ತಿತ್ವ

Author : ಸಾ. ಕೃ. ರಾಮಚಂದ್ರರಾವ್

Pages 100

₹ 54.00




Year of Publication: 2008
Published by: ಅಭಿಜ್ಞಾನ ಪ್ರಕಾಶನ
Address: ಬೆಂಗಳೂರು

Synopsys

ಹಿರಿಯ ಲೇಖಕ-ಸಾಹಿತಿ ಸಾ.ಕೃ. ರಾಮಚಂದ್ರರಾವ್ ಅವರ ಕೃತಿ-ಶ್ರೀಕೃಷ್ಣನ ವ್ಯಕ್ತಿತ್ವ. ಶ್ರೀಕೃಷ್ಣನು ದೇವತಾ ಸ್ವರೂಪಿಯಾಗಿ., ಮಹಾಭಾರತ ಯುದ್ಧಕ್ಕೆ ತಾನೇ ಆದಿಯಾಗಿ, ಅಂತ್ಯವಾಗಿ ಇರುವವನು. ಈ ವಿಶ್ವದ ಸಕಲ ಚರಾಚರ ವಸ್ತುಗಳಿಗೂ ಜೀವವೂ-ಸಾವೂ ಆಗಿರುವವನು. ಅಲೌಕಿಕ-ಲೌಕಿಕ ಶಕ್ತಿಯೂ ಅವನೇ. ಮಹಾಭಾರತ, ಪುರಾಣದ ಕಲ್ಪನೆಯಿಂದ ಶ್ರೀಕೃಷ್ಣನ ವ್ಯಕ್ತಿತ್ವದ ಅಂಶಗಳನ್ನು ಸೂಕ್ಷ್ಮವಾಗಿ ಆಯ್ಕೆ ಮಾಡಿ ಅವುಗಳನ್ನು ವಿಶ್ಲೇಷಣೆಗೆ ಒಳಪಡಿಸಿ, ವಿವರಿಸಿ, ಆತನ ಅಗಾಧ ವ್ಯಕ್ತಿತ್ವದ ದರ್ಶನ ಮಾಡಿಸಿದ ಕೃತಿ ಇದು. 

About the Author

ಸಾ. ಕೃ. ರಾಮಚಂದ್ರರಾವ್
(04 September 1927 - 02 February 2006)

ಪ್ರೊ. ಎಸ್.ಕೆ. ರಾಮಚಂದ್ರ ರಾವ್ ಅವರು ಅದ್ವಿತೀಯ ವಿದ್ವಾಸರು. ಹಾಸನದಲ್ಲಿ ಜನಿಸಿದರು. ತಂದೆ ಶ್ರೀಕೃಷ್ಣ ನಾರಾಯಣ ರಾವ್, ತಾಯಿ ಕಮಲಾಬಾಯಿ. ಬೆಂಗಳೂರಿನಲ್ಲಿಯ ತಾತನ ಮನೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಇವರು 12ನೇ ವಯಸ್ಸಿನಲ್ಲಿದ್ದಾಗ ತಾತನವರು ತೀರಿಕೊಂಡರು. ನಂತರ ನಂಜನಗೂಡಿಗೆ ಹೋಗಿ ತಂದೆಯವರಲ್ಲಿ ನೆಲೆಸಿ ಸಂಸ್ಕೃತಾಭ್ಯಾಸ ಮುಂದುವರಿಸಿದರು. ಅಲ್ಲಿ ಶೃಂಗೇರಿಯ ಶ್ರೀ ಜಗದ್ಗುರು ಚಂದ್ರಶೇಖರ ಭಾರತೀ ಸ್ವಾಮಿಗಳ ಸಂಪರ್ಕದಲ್ಲಿ ವಿದ್ಯಾಭ್ಯಾಯ ನಡೆಯಿತು. ಮೈಸೂರಿನ ಮಹಾರಾಜ ಕಾಲೇಜು ಹಾಗೂ ಮಾನಸ ಗಂಗೋತ್ರಿಯಲ್ಲಿ ವಿದ್ಯಾಭ್ಯಾಸ ಮಾಡಿ, ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇವರಿಗೆ ಸಂಗೀತಾಭ್ಯಾಸದ ಆಸಕ್ತಿ ಯೂ ಆಪಾರವಾಗಿತ್ತು. ಭಾರತೀಯ ವಿಜ್ಞಾನ ಸಂಶೋಧನೆ ಸಂಸ್ಥೆಯಲ್ಲಿ ...

READ MORE

Related Books