ಯಯಾತಿ

Author : ಕೆ.ಎಸ್‍. ನಾರಾಯಣಾಚಾರ್ಯ

Pages 224

₹ 280.00




Year of Publication: 2021
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಟೀಕರ್ ಬೀದಿ, ಹುಬ್ಬಳ್ಳಿ-580020
Phone: 9448110034

Synopsys

ಹಿರಿಯ ಲೇಖಕ ಪ್ರೊ.ಕೆ.ಎಸ್. ನಾರಾಯಾಣಚಾರ್ಯ ಅವರ ಕೃತಿ- ’ಯಯಾತಿ’. ಮಹಾಭಾರತ ಕಥಾನಕಗಳನ್ನು ಒಳಗೊಂಡ ಕಾದಂಬರಿಯಾಗಿದೆ. ’ಶ್ರೀ ಮಹಾಭಾರತ ಕಥಾ ಪೂರ್ವಕಾಂಡ’ ಎಂಬ ಆದಿಪರ್ವದ ಭಾಗಗಳು ತುಂಬಾ ಮಾರ್ಮಿಕವಾದವು. ಇದರ ಕಥಾರೂಪದ ಭಾಗವೇ ಯಯಾತಿ ಕೃತಿ. 34 ಶೀರ್ಷಿಕೆಗಳನ್ನು ಒಳಗೊಂಡಿದ್ದು, ಶ್ರೀ ಸೂತ ಉವಾಚ, ದೇವಯಾನೀ ಹಿನ್ನೆಲೆ, ಕಚ, ವಂಚನೆ, ಪರೀಕ್ಷೆಗಳು, ಸಂಕೀರ್ಣ, ಆಪತ್ತುಗಳು, ಅಸುರ ಪ್ರಯತ್ನಗಳು, ಮೃತಸಂಜೀವಿನಿ-ಪ್ರಥಮ ಪ್ರಯೋಗ, ಶುಕ್ರನ ಅಸಮಾಧಾನ, ವಿದ್ಯಾವ್ಯಾಪ್ತಿ-ಅನರ್ಥ, ಶಾಪ, ಪತ್ರಿಶಾಪ, ಶರ್ಮಿಷ್ಠೆ- ದೇವಯಾನೀ ಕೈ ಹಿಡಿದ ಯಯಾತಿ, ವಿಧಿ ವಿಕೋಪ, ಶರ್ಮಿಷ್ಠೆಯ ಸೇಡು, ಅನರ್ಥ ಪರಂಪರೆ, ಶರ್ಮಿಷ್ಠೆ ಹಠಸಿದ್ಧಿ, ಕಾಲದ ಪ್ರಕೋಪ, ಕಾಲದ ನಿರ್ಣಯ, ಪರೀಕ್ಷೆಗಳು, ಮುಂದುವರೆದುದು, ಶುಕ್ರ ಶಾಪ, ಪರಿಣಾಮ, ವಿಭಜನೆ, ಪುರುವಿನ ಚಿಂತನೆಗಳು, ಸಂತತಿ-ವಿವರ, ಪಶ್ಚಾತ್ತಾಪ, ಯಯಾತಿ ಗೀತೆ, ಯಾಗ-ಯೋಗ, ಪತನ, ಪತನಾನಂತರ, ಸಂವಾದ, ಅಷ್ಟಕಾದಿಗಳ ಸ್ವರ್ಗಗಮನ, ನಕಾಶೆಯ ಬಗ್ಗೆ ಇಲ್ಲಿ ವಿವರಣೆಗಳಿವೆ

About the Author

ಕೆ.ಎಸ್‍. ನಾರಾಯಣಾಚಾರ್ಯ
(31 October 1933 - 26 November 2021)

ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರರೂ ಆಗಿರುವ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ  (ಈಗಿನ ಕನಕಪುರ) ಕನಕನಹಳ್ಳಿಯವರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬ ಇವರದು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್.ಸಿ. ಪದವೀಧರರು. ನಂತರ ಬಿ.ಎ. ಆನರ್ಸ್‌ ಮಾಡಿ, ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್‌ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೇದಗಳು, ರಾಮಾಯಣ, ...

READ MORE

Related Books