ಬಾಲಕಾಂಡ

Author : ಜಗದೀಶಶರ್ಮಾ ಸಂಪ

Pages 112

₹ 135.00




Year of Publication: 2023
Published by: ಸಾವಣ್ಣ ಎಂಟರ್‌ಪ್ರೈಸಸ್‌
Address: ಸಾವಣ್ಣ ಎಂಟರ್‌ಪ್ರೈಸಸ್‌, ನಂ. 12, ಭೈರಸಂದ್ರ ಮುಖ್ಯರಸ್ತೆ, ಜಯನಗರ 1ನೇ ಬ್ಲಾಕ್‌ ಪೂರ್ವ, ಬೆಂಗಳೂರು-560011
Phone: 080-41229757/ 9036312786

Synopsys

ಬಾಲಕಾಂಡ ಜಗದೀಶ ಶರ್ಮ ಸಂಪ ಅವರ ಕೃತಿಯಾಗಿದೆ. ರಾಮಾಯಣವೆಂದರೆ ಸ್ಫೂರ್ತಿಯ ದೇವಗಂಗೆ, ಪ್ರೇರಣೆಯ ಕಾಮಧೇನು, ಆಪ್ತ ಸಲಹೆಯ ಕಲ್ಪವೃಕ್ಷ. ಅಲ್ಲಿ ಎಲ್ಲಿ ಮುಟ್ಟಿದರೂ ಬದುಕಿನ ಬುತ್ತಿ ಲಭ್ಯ. ಸಹಸ್ರಸಹಸ್ರ ಸಂವತ್ಸರಗಳಿಂದ ಅದು ಮನುಷ್ಯಜೀವನವನ್ನು ಪ್ರಭಾವಿಸಿದ್ದು ಇದೇ ಕಾರಣಕ್ಕೆ. ಬಾಲ್ಯವೆಂದರೆ ಬದುಕಿನ ಬುನಾದಿ. ಬಾಲ್ಯವೆಂಬ ಬೇರಿನ ಮೇಲೆಯೇ ಬದುಕಿನ ವೃಕ್ಷದ ಅಸ್ತಿತ್ವ. ರಾಮಾಯಣದ ಬಾಲ್ಯ-ರಾಮನ ಬಾಲ್ಯ ಎರಡೂ ಆಗಿರುವ ಬಾಲಕಾಂಡ, ನಮ್ಮ ಬದುಕಿನ ಬೇರಿಗೆ ಎರೆಯುವ ನೀರು ಜೀವದ್ರಸ.

About the Author

ಜಗದೀಶಶರ್ಮಾ ಸಂಪ

ಜಗದೀಶ ಶರ್ಮಾ ಸಂಪ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಸಂಪ ಗ್ರಾಮದವರು. ತಂದೆ - ಚಿದಾನಂದ ಭಟ್ಟ, ತಾಯಿ- ಮಂಗಳಗೌರಿ. ಗೋಕರ್ಣದ ಶ್ರೀದಕ್ಷಿಣಾಮೂರ್ತಿ ವೇದಭವನ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಕೃಷ್ಣಯಜುರ್ವೇದ ಕ್ರಮಾಂತ ಅಧ್ಯಯನ ಮಾಡಿದ್ದಾರೆ. ಆನಂತರ, ಮೈಸೂರಿನ ಶ್ರೀಮನ್ಮಹಾರಾಜ ಸಂಸ್ಕೃತ ಮಹಾ ಪಾಠಶಾಲೆಯಲ್ಲಿ ಅಲಂಕಾರಶಾಸ್ತ್ರದಲ್ಲಿ ವಿದ್ವತ್ ಪದವಿ, ಅದ್ವೈತ ವೇದಾಂತ, ನ್ಯಾಯವೈಶೇಷಿಕ, ಸಾಂಖ್ಯಯೋಗ ಧರ್ಮಶಾಸ್ತ್ರಗಳಲ್ಲಿ ವಿಶೇಷ ಅಧ್ಯಯನ ಮಾಡಿದ್ದಾರೆ. ಕರ್ನಾಟಕ ಮುಕ್ತವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ರಾಷ್ಟ್ರಮಟ್ಟದ ಸಂಸ್ಕೃತ ವಾಕ್ಪ್ರತಿಯೋಗಿತಾದಲ್ಲಿ ಎರಡು ಬಾರಿ ಸ್ವರ್ಣಪದಕ ಪಡೆದಿದ್ದಾರೆ. ರಾಷ್ಟ್ರಮಟ್ಟದ ವೇದ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದಾರೆ.  ಸಂಸ್ಕೃತಿ ಪರಿಚಯಿಸುವ, ನೈತಿಕಮೌಲ್ಯಗಳನ್ನು ...

READ MORE

Related Books