ಧರ್ಮಶಾಸಕ ಅಯ್ಯಪ್ಪನ್

Author : ಗಿರಿಜಾ ಶಾಸ್ತ್ರಿ

Pages 88

₹ 10.00




Year of Publication: 2013

Synopsys

ಶ್ರೀ ಪೈಯಪ್ಪನವರು, ಸ್ವಾಮಿ ಅಯ್ಯಪ್ಪನ ಕಥೆಯನ್ನು ಈ ಕೃತಿಯಲ್ಲಿ ನೀಡಿದ್ದಾರೆ. ಭೂಮಿಯಲ್ಲಿ ಜನನ, ರಾಜನ ಮನೆಯನ್ನು ಅವನು ಸೇರಿದುದು, ತನ್ನ ಗುರುವಿನ ಮಗನಿಗೆ ವಾಕ್ಛಕ್ತಿಯನ್ನು ನೀಡಿದುದು, ತನ್ನ ಬಗ್ಗೆ ಅಸೂಯೆಯಿದ್ದ ರಾಣಿಗೆ ಚಿರತೆಯ ಹಾಲನ್ನು ತಂದುಕೊಟ್ಟುದು, ರಾಕ್ಷಸಿ ಮಹಿಷಿಯನ್ನು ನಾಶಮಾಡಿದುದು, ರಾಜನಿಗೆ ಅಮರತ್ವವನ್ನು ಕರುಣಿಸಿದುದು, ಪೈಯಪ್ಪನವರು ಇಂತಹ ಹಲವಾರು ಭಗವಂತನ ಮಹಿಮೆಯ ಕುರಿತು ಸರಳವಾಗಿ ವಿವರಣೆಗಳನ್ನು ಈ ಕೃತಿಯಲ್ಲಿ ನೀಡಿದ್ದಾರೆ. ಈ ಕೃತಿಯನ್ನು ಗಿರಿಜಾ ಶಾಸ್ತ್ರಿಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಅಯ್ಯಪ್ಪನ ಪೂಜೆಯ ವಿಧಾನಗಳು, ಅಲ್ಲಿಗೆ ಕೈಗೊಳ್ಳುವ ಯಾತ್ರೆಯ ಗೂಢತತ್ತ್ವ, ಆಧ್ಯಾತ್ಮಿಕ ಪ್ರಾಮುಖ್ಯತೆ ಈ ವಿಷಯಗಳ ಕುರಿತ ವಿವರಗಳನ್ನು ಲೇಖಕರು ಈ ಕೃತಿಯಲ್ಲಿ ಒದಗಿಸಿದ್ದಾರೆ.

About the Author

ಗಿರಿಜಾ ಶಾಸ್ತ್ರಿ
(16 September 1958)

ಗಿರಿಜಾ ಶಾಸ್ತ್ರಿ ಅವರು ಜನಿಸಿದ್ದು  1958 ಸೆಪ್ಟೆಂಬರ್ 16ರಂದು. ಮೂಲತಃ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮದವರು. ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಇವರು ಕನ್ನಡ ಬಳಗದ ಸ್ಮರಣ ಸಂಚಿಕೆ ಮುಂಬೆಳಕಿನ ಸಂಪಾದಕಿಯಾಗಿದ್ದರು. ಮುಂಬೈ ಲೇಖಕಿಯರ ಸಂಘದ ಸೂಜನಾಗೆ ’ಕಥೆ ಹೇಳೆ ಎಂಬ ಸಂಕಲನದ ಸಂಪಾದನೆ, ಮುಂಬೈ ಪತ್ರಿಕೆ ನೇಸರು ಸಂಪಾದಕಿಯಾಗಿದ್ದರು.  ಇವರು ಬರೆದ ಪ್ರಮುಖ ಕೃತಿಗಳೆಂದರೆ ಹೆಣ್ಣೊಬ್ಬಳ ದನಿ, ಕಥಾಮಾನಸಿ, ಆಧುನಿಕ ಕನ್ನಡ ಸಣ್ಣ ಕಥೆಗಳು, ಒಂದು ಸ್ತ್ರೀವಾದ ಅಧ್ಯಯನ ಮುಂತಾದವು ಇವರ ಪ್ರಮುಖ ಕೃತಿಗಳು. ಗಿರಿಜಾ ಶಾಸ್ತ್ರಿ ಅವರಿಗೆ ಹರಿಹರಶ್ರೀ ಪ್ರಶಸ್ತಿ, ಕುವೆಂಪು ಕಾವ್ಯ ಪ್ರಶಸ್ತಿ, ...

READ MORE

Related Books