ಭಾರತದ ಮೂಲ ಭೂತ ಏಕತೆ

Author : ಹೆಚ್.ವಿ. ನಾಗರಾಜರಾವ್

Pages 130

₹ 10.00




Year of Publication: 2013

Synopsys

ಭೌಗೋಳಿಕವಾಗಿ ಅತ್ಯಂತ ದೊಡ್ಡ ಹರವನ್ನು ಹೊಂದಿರುವ ನಮ್ಮ ದೇಶವನ್ನು ಅನ್ಯ ದೇಶೀಯರು ಇಡಿಯಾಗಿ ಒಂದೇ ದೇಶವೆಂದು ಪರಿಗಣಿಸದೆ ಹಲವು ದೇಶಗಳ ಭೂ ಭಾಗವೆನ್ನುತ್ತಾರೆ. ಆದರೆ, ನಾವು ದೇಶದ ಯಾವುದೇ ಭಾಗದಲ್ಲಿದ್ದರೂ, ನಮ್ಮ ಭಾಷೆ, ಆಚಾರ ಮೊದಲಾದವು ಬೇರೆ ಬೇರೆಯಾಗಿದ್ದರೂ, ಪರಂಪರೆಯಿಂದ ಈ ಭೂಖಂಡವು ಅಖಂಡವೆಂಬ ಭಾವ ನಮ್ಮ ರಕ್ತದಲ್ಲಿ ಹರಿದುಬಂದಿದೆ. ಇಲ್ಲಿನ ಧರ್ಮ, ಕಾವ್ಯ, ವಿಜ್ಞಾನ ಇವು ಈ ಅಖಂಡತೆಯನ್ನು ಆರಾಧಿಸಲು ಹೇಗೆ ಸಹಾಯಮಾಡುತ್ತವೆ ಎಂಬುದನ್ನು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ. ಇಷ್ಟೇ ಅಲ್ಲದೆ, ಪ್ರಾಕೃತಿಕ ಘಟನೆಗಳಾದ ಹಿಂಗಾರು ಮತ್ತು ಮುಂಗಾರುಗಳು ಹೇಗೆ ಈ ಭೂಖಂಡದ ಮೇಲೆ ತಮ್ಮ ವೈಶಿಷ್ಟ್ಯವನ್ನು ಒತ್ತಿ ಅಲ್ಲಿರಬಹುದಾಗಿದ್ದ ಭೇದಭಾವಗಳನ್ನೆಲ್ಲಾ ಕೊಚ್ಚಿ ಹಾಕಿದೆ ಎಂಬುದರ ಕುರಿತ ವಿವರಗಳನ್ನು ಲೇಖಕರು ಈ ಕೃತಿಯಲ್ಲಿ ಒದಗಿಸಿದ್ದಾರೆ.

About the Author

ಹೆಚ್.ವಿ. ನಾಗರಾಜರಾವ್
(10 September 1942)

ಸಂಸ್ಕೃತ ವಿದ್ವಾಂಸ ಹೆಚ್‌.ವಿ. ನಾಗರಾಜರಾವ್‌  ಮೂಲತಃ ಕೋಲಾರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಯಲ್ಲಿ (10-9-1942) ಹುಟ್ಟಿದರು. ಎರಡೂವರೆ ವರ್ಷದ ಬಾಲಕರಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಅಜ್ಜನ ಮನೆಯಲ್ಲಿ ಬೆಳೆದರು. ಪ್ರೌಢಶಾಲೆಯ ವ್ಯಾಸಂಗದ ಬಳಿಕ ಬಟ್ಟೆಯ ಅಂಗಡಿಯಲ್ಲಿ ದುಡಿದರು. ವಿದ್ಯಾಗುರು ವಿದ್ವಾನ್‌ಎನ್‌.ವಿ. ಅನಂತರಾಮಯ್ಯನವರು ಇವರಿಗೆ ನೆರವಾಗುತ್ತಾರೆ. ಸಂಸ್ಕೃತ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಪರಿಣಿತರಾಗಿ ಮೈಸೂರಿಗೆ ಬಂದು ಸಂಸ್ಕೃತ ಮಹಾ ಪಾಠಶಾಲೆ ಸೇರಿ, ಅಲಂಕಾರ ಶಾಸ್ತ್ರಗಳನ್ನು ಕಲಿತರು.  ಮೈಸೂರು ವಿಶ್ವವಿದ್ಯಾಲಯದ ಸಂಸ್ಕೃತ ಎಂ. ಎ. ಪರೀಕ್ಷೆಯಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದರು.  ಇವರ ವ್ಯಾಕರಣ ಗುರು ವಿದ್ವಾನ್‌ ಸೋ. ರಾಮಸ್ವಾಮಿ ಅಯ್ಯಂಗಾರ್‌ ಅವರು ತಮ್ಮಲ್ಲಿ ಕಲಿಯಲು ಬಂದ ...

READ MORE

Related Books