ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಸಂಚಯ- ಪ್ರಾತಿನಿಧಿಕ ರಚನೆಗಳು

Author : ಜಿ.ಎಸ್. ಶಿವರುದ್ರಪ್ಪ

Pages 484

₹ 250.00




Year of Publication: 2012

Synopsys

ಜಿ.ಎಸ್. ಶಿವರುದ್ರಪ್ಪ ಕನ್ನಡದ ರಾಷ್ಟ್ರ ಕವಿಗಳ ಸಾಲಿನಲ್ಲಿ ವಿರಾಜಮಾನರಾಗಿದ್ದವರು. ಶ್ರೇಷ್ಠ ಪ್ರಾಧ್ಯಾಪಕ, ಅತ್ಯುತ್ತಮ ಆಡಳಿತಗಾರರಾದ ಇವರ ಕಾವ್ಯರಚನೆ, ವಿಮರ್ಶೆ ಹಾಗೂ ಚಿಂತನ ಶೀಲತೆಗಳು ಬಹು ಜನಪ್ರಿಯವಾಗಿದ್ದವು. ಅವರ ರಚನೆಗಳಲ್ಲಿ ಶ್ರೇಷ್ಠವಾದ ರಚನೆಗಳನ್ನು, ಆಯ್ದು ಈ ಕೃತಿಯಲ್ಲಿ ಕೊಡಲಾಗಿದೆ. ಪ್ರೀತಿಯನ್ನೇ ತನ್ನ ನೆಲೆಗಟ್ಟನ್ನಾಗಿಸಿಕೊಂಡಿದ್ದ ಅವರ ಕಾವ್ಯ, ತನ್ನ ವಿಸ್ತಾರದಿಂದ ನಮ್ಮನ್ನು ಬೆರಗುಗೊಳಿಸುವ ಅವರ ವಿಮರ್ಶೆ, ಎಂದೆಂದಿಗೂ ಪ್ರಸ್ತುತವಾಗುವ ಅವರ ಮೀಮಾಂಸೆ, ಜೀವನೋತ್ಸಾಹವನ್ನು ಬಿಂಬಿಸುವ ಅವರ ಪ್ರವಾಸ ಸಾಹಿತ್ಯ ಈ ಎಲ್ಲಾ ವಿಷಯಗಳನ್ನು ಈ ಪುಸ್ತಕವು ಒಳಗೊಂಡಿದೆ.

About the Author

ಜಿ.ಎಸ್. ಶಿವರುದ್ರಪ್ಪ
(07 February 1926 - 23 December 2013)

ಸಮನ್ವಯ ಕವಿಗಳಲ್ಲಿ ಒಬ್ಬರು ಎಂದು ಗುರುತಿಸಲಾಗುವ ಡಾ.ಜಿ.ಎಸ್. ಶಿವರುದ್ರಪ್ಪ ಅವರು ವಿಮರ್ಶಕರಾಗಿಯೂ ಗಣನೀಯ ಸಾಧನೆ ಮಾಡಿದ್ದಾರೆ. ಗದ್ಯ-ಪದ್ಯಗಳೆರಡರಲ್ಲಿಯೂ ಮಾಗಿದ ಪ್ರತಿಭೆ ಅವರದು. ತಂದೆ ಗುಗ್ಗುರಿ ಶಾಂತವೀರಪ್ಪ ಮತ್ತು ತಾಯಿ ವೀರಮ್ಮ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ 1926ರ ಫೆಬ್ರುವರಿ 7ರಂದು ಜನಿಸಿದರು. ಶಾಲಾ ಉಪಾಧ್ಯಾಯರ ಮಗನಾದ ಜಿ.ಎಸ್.ಎಸ್ ಅವರು ಎಸ್.ಎಸ್.ಎಲ್.ಸಿ ಮುಗಿಯುತ್ತಿದ್ದಂತೆಯೇ ಬಡತನದ ಕಾರಣದಿಂದ ಸರಕಾರಿ ನೌಕರಿ ಹಿಡಿಯಬೇಕಾಯಿತು. ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಸೇರಿದರು. ಆದರೆ ಓದಲೇಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ವಿದಾಯ ಹೇಳಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದನ್ನು ಮುಂದುವರೆಸಿ ಬಿ.ಎ. ಪದವಿ (1949), ಸ್ವರ್ಣಪದಕದೊಂದಿಗೆ ...

READ MORE

Related Books