ನಡೆಯುವ ಕಡ್ಡಿ! ಹಾರುವ ಎಲೆ!

Author : ಕೆ.ಪಿ. ಪೂರ್ಣಚಂದ್ರ ತೇಜಸ್ವಿ

Pages 98

₹ 83.00




Year of Publication: 2009
Published by: ಪುಸ್ತಕ ಪ್ರಕಾಶನ
Address: 91, 9ನೇ ಮುಖ್ಯರಸ್ತೆ, ಸರಸ್ವತಿಪುರಂ, ಮೈಸೂರು-570 009
Phone: 0821-2545774, 9448203730

Synopsys

ತೇಜಸ್ವಿ ಮತ್ತು ಡಾ.ಎ.ವಿ.ಬೆಳವಾಡಿ ಅವರು ರಚಿಸಿರುವ ಹುಳುಗಳ ವಿಸ್ಮಯ ಕೋಶ (1) ’ನಡೆಯುವ ಕಡ್ಡಿ! ಹಾರುವ ಎಲೆ!’. ನಮ್ಮ ಸುತ್ತಲೇ ಇದ್ದರೂ, ನಾವು ಕುತೂಹಲ ತಾಳದ ಕೀಟಗಳನ್ನು ಕಥೆಯ ರೂಪದಲ್ಲಿ ಈ ಪುಸ್ತಕ ಪರಿಚಯಿಸುತ್ತದೆ. ಚಿಟ್ಟೆ, ಜೇಡ, ಜಿರಳೆ, ಮಿಡತೆ, ಜೀರುಂಡೆ, ಮಿಂಚುಹುಳು - ಇಂಥ ಅಸಂಖ್ಯ ಕೀಟಗಳು ಪ್ರಕೃತಿ ವಿಕೋಪಗಳು ಮತ್ತು ಮನುಷ್ಯನಿಂದಾಗುತ್ತಿರುವ ಅನಾಹುತಗಳನ್ನು ಎದುರಿಸಿ ಹೇಗೆ ಬದುಕುತ್ತಿವೆ? ಅವುಗಳ ಜೀವವಿಕಾಸದ ಅವಸ್ಥಾಂತರಗಳ ಕಥೆಯೇನು? ಎಂಬ ವಿಷಯಗಳನ್ನು ಸಂಶೋಧನೆ ಮತ್ತುದೈನಂದಿನ ಅನುಭವಗಳ ಮೂಲಕ ಲೇಖಕರು ಇಲ್ಲಿ ಸಾದರಪಡಿಸಿದ್ದಾರೆ.

About the Author

ಕೆ.ಪಿ. ಪೂರ್ಣಚಂದ್ರ ತೇಜಸ್ವಿ
(08 September 1938 - 05 April 2007)

ಕನ್ನಡದ ಹೆಸರಾಂತ ಲೇಖಕ ಕುವೆಂಪು ಅವರ ಪುತ್ರರಾಗಿರುವ ಪೂರ್ಣಚಂದ್ರ ತೇಜಸ್ವಿ ಅವರು 08-09-1938ರದು ಜನಿಸಿದರು. ತಮ್ಮ ಬರವಣಿಗೆಯ ಮೂಲಕವೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ’ಚಿದಂಬರ ರಹಸ್ಯ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತೇಜಸ್ವಿ ಅವರು ಕನ್ನಡದಲ್ಲಿ ನವ್ಯ ಸಾಹಿತ್ಯ ಚಳುವಳಿಯು ಉಚ್ಛ್ರಾಯ ಸ್ಥಿತಿಯಲ್ಲಿದ್ದ  ದಿನಗಳಲ್ಲಿ ಅದಕ್ಕಿಂತ ಭಿನ್ನವಾದ ನೆಲೆಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ನವ್ಯ ಲೇಖಕರು ನಗರ ಕೇಂದ್ರಿತ, ವ್ಯಕ್ತಿನಿಷ್ಟ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಬದುಕು ಕುರಿತ ಮತ್ತು ಅದು ಹಳಹಳಿಕೆಯ ಧ್ವನಿಯಲ್ಲಿ ಇರದ ಹಾಗೆ ನೋಡಿಕೊಂಡರು. ಲೋಹಿಯಾ ಚಿಂತನೆಗಳಿಂದ ಪ್ರೇರಿತರಾಗಿದ್ದ ...

READ MORE

Related Books