ರಸವಾದ

Author : ಟಿ. ಆರ್. ಅನಂತರಾಮು

Pages 112

₹ 60.00




Year of Publication: 2011
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು- 560 009
Phone: 08040114455

Synopsys

ಮನುಷ್ಯನ ಆಸೆ ಎಂದರೆ ಸಂಜೀವಿನಿ ಪಡೆದು ಅಮರನಾಗಬೇಕೆಂಬುದು. ಅಷ್ಟೇ ಅಲ್ಲ, ಕ್ಷುದ್ರ ಲೋಹಗಳನ್ನು ಸಂಸ್ಕರಿಸಿ ಅದನ್ನು ಚಿನ್ನವಾಗಿಸಬೇಕೆಂಬುದು. ಇತಿಹಾಸದುದ್ದಕ್ಕೂ ದೇಶ, ಕಾಲಗಳನ್ನು ಮೀರಿ ಮನುಕುಲ ಇದಕ್ಕೆ ಪ್ರಯತ್ನಿಸಿದೆ. ಈ ವಿಭಾಗವನ್ನು ಸಾಮಾನ್ಯವಾಗಿ `ಆಲ್ಕೆಮಿ’ ಎಂದು ಹೇಳುವುದು ರೂಢಿಯಲ್ಲಿದೆ. ಮನುಷ್ಯ ಶತಶತಮಾನಗಳ ಕಾಲ ಪ್ರಯೋಗಗಳನ್ನು ಮಾಡುತ್ತ ಗೆದ್ದೆ ಎನ್ನುವಾಗಲೇ ಸೋಲು ಅನುಭವಿಸಿದ. ಮೌಢ್ಯದ ಕೂಪಕ್ಕೂ ಬಿದ್ದ. ರಸವಿದ್ಯೆ ವಾಮಾಚಾರಕ್ಕೆ ಬಹು ಹತ್ತಿರ ಎನ್ನುವ ಹೆಸರು ಪಡೆಯಿತು.

ಸಿದ್ಧರು ಹುಟ್ಟಿಕೊಂಡರು, ಸಾವಿರ ವರ್ಷ ಬದುಕುತ್ತೇವೆಂದು ಸಾರಿದರು. ಸಂಜೀವಿನಿ ತರಲು ಹೋಗಿ ಮನುಷ್ಯ ಗಿಡಮೂಲಿಕೆಗಳನ್ನು ತಂದ. ಔಷಧಿ ಸೃಷ್ಟಿಯಾಯಿತು. ಲೋಹಗಳನ್ನು ಮೂಸೆಯಲ್ಲಿಟ್ಟು ಪ್ರಯೋಗಕ್ಕೊಡ್ಡಿದ, ಆದದ್ದೆಂದರೆ ರಸಾಯನ ವಿಜ್ಞಾನದ ಮೂಲ ಸೂತ್ರಗಳನ್ನು ಕಂಡುಕೊಂಡ. ಅಲೆಕ್ಸಾಂಡ್ರಿಯ, ಅರಬ್ ರಾಷ್ಟ್ರಗಳು, ಚೀನ, ಭಾರತ, ಇಂಗ್ಲೆಂಡ್ ರಸವಾದದ ಕೇಂದ್ರಗಳಾದವು. ನಿಮಗೆ ಅಚ್ಚರಿ ತರಬಹುದು. ಸರ್. ಐಸಾಕ್ ನ್ಯೂಟನ್ ತನ್ನ ಪ್ರಯೋಗ ಶಾಲೆಯಲ್ಲಿ ಗುಟ್ಟಾಗಿ ರಸವಿದ್ಯೆಗೆ ಸಂಬಂಧಿಸಿದಂತೆ ಪ್ರಯೋಗಗಳನ್ನು ಮಾಡುತ್ತಿದ್ದ. ಈ ಕೃತಿ `ರಸವಾದ’ದಲ್ಲಿ ರಸವಿದ್ಯೆಯ ಪರಿಕಲ್ಪನೆ, ಅದು ಬೆಳೆದುಬಂದ ದಾರಿ, ಅದು ಅಂತಿಮವಾಗಿ ತಲಪಿದ ಗುರಿ-ಇವೆಲ್ಲವನ್ನೂ ರಸವತ್ತಾಗಿ, ಚಾರಿತ್ರಿಕ ಸಾಕ್ಷಿಗಳೊಡನೆ ವಿವರಿಸಲಾಗಿದೆ. ರಸವಿದ್ಯೆ ಕುರಿತು ಕನ್ನಡದಲ್ಲಿ ಹೊರಬಂದಿರುವ ಒಂದೇ ಕೃತಿ ಇದು.

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books