ಸುಸ್ವರಲಕ್ಷ್ಮಿ ಸುಬ್ಬುಲಕ್ಷ್ಮಿ

Author : ಬಿ.ಎಸ್. ಜಯಪ್ರಕಾಶ ನಾರಾಯಣ

Pages 424

₹ 360.00




Year of Publication: 2016
Published by: ಐ ಬಿ ಹೆಚ್‌ ಪ್ರಕಾಶನ
Address: #77, 2ನೇ ಮುಖ್ಯರಸ್ತೆ, ರಾಮರಾವ್ ಲೇಔಟ್, ಬಿಎಸ್ ಕೆ ಮೂರನೇ ಸ್ವೇಜ್, ಬೆಂಗಳೂರು- 560085.
Phone: 080- 48371555

Synopsys

ಜೆ ಎಸ್ ಚಾರ್ಜರು ಬರೆದ ಎಂ ಎಸ್ ಸುಬ್ಬುಲಕ್ಷ್ಮಿ ಅವರ ಜೀವನಗಾಥೆ ಪ್ರಕಟವಾದದ್ದು 2007ರಲ್ಲ, ಒಂದು ದಶಕದ ನಂತರ ಜಯಪ್ರಕಾಶ್ ನಾರಾಯಣ ಈ ಪುಸ್ತಕವನ್ನು ಕನ್ನಡಕ್ಕೆ ತಂದಿದ್ದಾರೆ. ಇದು ಸಂಗೀತ ಪ್ರೇಮಿಗಳೆಲ್ಲರಿಗೂ ಸಂತಸದ ಸಂಗತಿ. ಸಾಮಾನ್ಯವಾಗಿ ಪತ್ರಿಕೆಗಳಲ್ಲಿ ಮತ್ತು ಸ್ಮರಣ ಸಂಚಿಕೆಗಳಲ್ಲ ಪ್ರಕಟವಾಗುವ ಲೇಖನಗಳು ಸಂಗೀತಗಾರರನ್ನು ಹಾಡಿ ಹೊಗಳುತ್ತವೆಯೇ ಹೊರತು ಕಲೆಯ ಬಗೆಗಿನ ನಮ್ಮ ಅರಿವನ್ನು ಹಿಗ್ಗಿಸುವುದಿಲ್ಲ. ಹಳೆ ಮೈಸೂರು ಪ್ರಾಂತದ ಜನರಿಗೆ ಎಂಎಸ್ ಅವರ ಸಂಗೀತ ಎಂದರೆ ಉತ್ಕೃಷ್ಟತೆಗೆ ಇನ್ನೊಂದು ಹೆಸರು. ಸಾಮಾನ್ಯರಿಗೂ ಕ್ಲಾಸಿಕಲ್ ಕಲೆಗೂ ಸಂಬಂಧವೇ ಇಲ್ಲ ಎಂಬಂಥ ಮಾತು ಆಗ ಕೇಳಬರುತ್ತಿರಲಿಲ್ಲ. ಇಪ್ಪತ್ತನೆಯ ಶತಮಾನದ ಸಾಮಾಜಿಕ ಮತ್ತು ರಾಜಕೀಯ ಸೂಕ್ಷ್ಮಗಳನ್ನು ಸಂಗೀತದ ದೃಷ್ಟಿಯಿಂದ ನೋಡುವ ಇಲ್ಲಯ ಪಲ ಒಳನೋಟದಿಂದ ಕೂಡಿದೆ. ಎಂಎಸ್ ಅವರ ಸಿನಿಮಾ ವೃತ್ತಿಯ ಸೋಲು-ಗೆಲುವು, ಹಿಂದುಸ್ತಾನಿ ಸಂಗೀತಗಾರರ ಜೊತೆಗಿನ ಸ್ನೇಹದ ಒಡನಾಟ, ಇವೆಲ್ಲವನ್ನೂ ಈ ಪುಸ್ತಕ ಕಣ್ಣಿಗೆ ಕಟ್ಟುವಂತೆ ಹಿಡಿದಿಡುತ್ತದೆ. ಇಂಥ ಪುಸ್ತಕವಿಲ್ಲದೆ ಎಷ್ಟೋ ಸ್ವಾರಸ್ಯದ ವಿಷಯಗಳು ಇತಿಹಾಸದಲ್ಲಿ ಮಸುಕಾಗಿ ಹೋಗುತ್ತವೆ. ಎಂಎಸ್ ಆಸ್ತಿಕರಾಗಿ, ಭಕ್ತಿಪರವಶರಾಗಿ ಹಾಡುತ್ತಿದ್ದರು ಎಂಬುದು ದಿಟ, ಆದರೆ ಅಂಥ ದಿವ್ಯ ಗಾಯನದ ಹಿಂದೆಯೂ ಎಲ್ಲರಂತೆ ಅವರು ಕಷ್ಟಕಾರ್ಪಣ್ಯಗಳನ್ನು ಎದುರಿಸಿದ್ದರು, ಗೆದ್ದಿದ್ದರು. ಈ ಹೋರಾಟವನ್ನು ಮನದಟ್ಟಾಗುವಂತೆ ಹೇಳುವ ಪುಸ್ತಕ ಇದು. ಸಂಗೀತದ ಬಗ್ಗೆ ಬರೆಯುವುದು ಸುಲಭವಲ್ಲ. ಕಲೆಯ ಗ್ರಹಿಕೆಯ ಜೊತೆಗೆ ಅಲ್ಲ ಕಂಡ ಕೇಆದ ವಿಷಯಗಳನ್ನು ಭಾಷೆಗೆ ಒಗ್ಗಿಸುವ ಕೌಶಲ್ಯ ಇರಬೇಕು. ಸಂಶೋಧನೆ ಮಾಡುವ ತಾಳ್ಮೆ, ಮನಸ್ಸಿರಬೇಕು. ಎಂಎಸ್‌ ಪುಸ್ತಕ ಬರೆಯುವಾಗ ಜಾರ್ಜ್ ಹತ್ತು ವರ್ಷ ತಯಾರಿ ಮಾಡಿದರಂತೆ. ಈ ಎಲ್ಲ ಅಂಶಗಳ ಜೊತೆಗೆ ಹಾರ್ಟರ ಬರವಣಿಗೆಯಲ್ಲ, ಮತ್ತು ಈಗ ಜಯಪ್ರಕಾಶ ನಾರಾಯಣರ ಅನುವಾದದಲ್ಲಿ ಕಾಣುವುದು ಸಂಗೀತ ಬಗೆಗಿನ ಉತ್ತಟ ಪ್ರೀತಿ ಪತ್ರಿಕೋದ್ಯಮದಲ್ಲಿ ಜಾರ್ಜ್ ಅವರದು ದೊಡ್ಡ ಹೆಸರು, ಅವರ ಹಲವು ಆಸಕ್ತಿಗಳಲ್ಲಿ ಕರ್ನಾಟಕ ಸಂಗೀತವೂ ಒಂದು. ಅಚಕನ್ನಡದಲ್ಲೇ ಬರೆದಷ್ಟು ಹಿತವಾಗಿ ಸಾಗುವ ಅನುವಾದ ಇದು. ನಮ್ಮ ಸಂಸ್ಕೃತಿಗೆ ಈ ಪುಸ್ತಕದಿಂದ ದೊಡ್ಡ ಉಪಕಾರವಾಗಿದೆ ಎಂದು ಪುಸ್ತಕದ ಮುನ್ನುಡಿಯಲ್ಲಿ ಎಸ್ ಆರ್ ರಾಮಕೃಷ್ಣ ಅವರು ಹೇಳಿದ್ದಾರೆ.

About the Author

ಬಿ.ಎಸ್. ಜಯಪ್ರಕಾಶ ನಾರಾಯಣ

ಪತ್ರಕರ್ತ ಬಿ.ಎಸ್. ಜಯಪ್ರಕಾಶ್‌ ನಾರಾಯಣ ಅವರು ಉತ್ತಮ ಅನುವಾದಕ ಕೂಡ. ಪ್ರಜಾವಾಣಿ, ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ ಉಪಸಂಪಾದಕ/ ವರದಿಗಾರರಾಗಿ ಕಾರ್ಯ ನಿರ್ವಹಿಸಿರುವ ಅವರು ಸದ್ಯ ಅನುವಾದದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಟಿ.ಜೆ.ಎಸ್‌. ಜಾರ್ಜ್‌ ಅವರ ಎಂ.ಎಸ್., ಯು.ಆರ್‌. ಅನಂತಮೂರ್ತಿ ಅವರ ’ನನ್ನ ಸಾಹಿತ್ಯದ ಐದು ದಶಕಗಳು’, ’ನಾನು ಮಲಾಲ’ ಕೃತಿಗಳನ್ನು ಅನುವಾದಿಸಿದ್ದಾರೆ. ಛಾಯಾಗ್ರಾಹಕ ಕೆ.ಜಿ. ಸೋಮಶೇಖರ ಅವರ ಆತ್ಮಕತೆ ’ನನ್ನ ಬದುಕು ನನ್ನ ಫೋಟೊಗ್ರಫಿ’ ಕೃತಿಯನ್ನು ನಿರೂಪಿಸಿದ್ದಾರೆ. ...

READ MORE

Related Books